ಆ್ಯಪ್ನಗರ

ಬಡವರಿಗೆ ಸೂರು ಕಲ್ಪಿಸಲು 15 ಮಹಡಿ ಸಂಕೀರ್ಣ: ಬಜೆಟ್‌ನಲ್ಲಿ ಸಿಎಂ ಭರವಸೆ

ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಬಡವರಿಗೆ ಸೂರು ಕಲ್ಪಿಸಲು ಎದುರಾಗಿರುವ ಸ್ಥಳದ ಅಭಾವಕ್ಕೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಕಟಿಸಿದ್ದಾರೆ. ಆಯ್ದ ಸ್ಥಳಗಳಲ್ಲಿ ಗ್ರೌಂಡ್‌ ಸೇರಿದಂತೆ 15 ಮಹಡಿಗಳ ವಸತಿ ಸಮುಚ್ಛಯ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.

TIMESOFINDIA.COM 6 Jul 2018, 12:17 pm
ಬೆಂಗಳೂರು: ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಬಡವರಿಗೆ ಸೂರು ಕಲ್ಪಿಸಲು ಎದುರಾಗಿರುವ ಸ್ಥಳದ ಅಭಾವಕ್ಕೆ ತಕ್ಕಮಟ್ಟಿನ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಕಟಿಸಿದ್ದಾರೆ. ಆಯ್ದ ಸ್ಥಳಗಳಲ್ಲಿ ಗ್ರೌಂಡ್‌ ಸೇರಿದಂತೆ 15 ಮಹಡಿಗಳ ವಸತಿ ಸಮುಚ್ಛಯ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
Vijaya Karnataka Web building


ಆದರೆ ಈ ಯೋಜನೆಯನ್ನು ಯಾವ ಸ್ಥಳಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂಬ ಯಾವುದೇ ವಿವರಗಳನ್ನು ನೀಡಿಲ್ಲ. ಈ ಹಿಂದಿನ ಮುಖ್ಯಮಂತ್ರಿ ಘೋಷಿಸಿದ್ದ ಬಡವರಿಗಾಗಿ ಒಂದು ಲಕ್ಷ ಮನೆ ಯೋಜನೆಯನ್ನು ಉಳಿದ ನಗರಗಳಿಗೂ ವಿಸ್ತರಿಸುವ ಉದ್ದೇಶ ಹೊಂದಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಕಾಂಗ್ರೆಸ್‌ ಸರಕಾರ ಯೋಜನೆಯಡಿ 14 ಲಕ್ಷ ಮನೆ ನಿರ್ಮಿಸಿತ್ತು.

ರಾಜ್ಯದ ಸ್ಲಂಗಳಲ್ಲಿ ನಲ್ವತ್ತು ಲಕ್ಷ ನಿವಾಸಿಗಳಿದ್ದಾರೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಲಂಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಟ್ರಾನ್ಸ್‌ಫರ್‌ ಆಫ್‌ ಡೆವಲಪ್‌ಮೆಂಟಲ್ ರೈಟ್ಸ್‌ ಬದಲಾಗಿ ಎಡಿಷನಲ್‌ ಪ್ಲೋರ್‌ ಏರಿಯಾ ರೇಷಿಯೊವನ್ನು ಪರಿಗಣಿಸುವಂತೆ ಸೂಕ್ತ ನಿರ್ದೇಶನಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಬಡವರಿಗಾಗಿ ನಿರ್ಮಿಸುವ ಮನೆಗಳಲ್ಲಿ ಶೇ ಮೂರರಷ್ಟು ವಿಶೇಷ ಚೇತನರಿಗಾಗಿ ಮೋಸಲಿರುತ್ತದೆ. ಅವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ