ಆ್ಯಪ್ನಗರ

ಬಿಎಸ್‌ವೈ ಬಜೆಟ್‌ 2020: ಸಮಾಜ ಕಲ್ಯಾಣ ಇಲಾಖೆಗೆ 'ಕಲ್ಯಾಣ'ದ್ದೇ ನಿರೀಕ್ಷೆ!

ಸಮಾಜ ಕಲ್ಯಾಣ ಇಲಾಖೆಗೆ ಪ್ರತಿ ವರ್ಷ ಹಣ ದೊರೆಯುತ್ತಾದೆಯಾದರೂ ಅದು ಎಷ್ಟರಮಟ್ಟಿಗೆ ಜಾರಿಗೆಯಾಗುತ್ತದೆ ಎಂಬುದು ಮಾತ್ರ ನಿಗೂಢ. ಹಾಗಾಗಿ, ಕೂಲಂಕಷ ಅಧ್ಯಯನಕ್ಕೆ ನೋಡಲ್‌ ಅಧಿಕಾರಿ ಇಲ್ಲವೇ ಏಜೆನ್ಸಿಯನ್ನು ನೇಮಿಸುವ ಅಗತ್ಯವಿದೆ.

Vijaya Karnataka Web 29 Feb 2020, 11:11 am
ಸರಕಾರಗಳು ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಹೆಜ್ಜೆ ಹಾಕಿದರೆ ಮುಂದಿನ ದಿನಗಳಲ್ಲಾದರೂ ಸಮಾಜ ಕಲ್ಯಾಣ ನಿರೀಕ್ಷಿಸಬಹುದು.
Vijaya Karnataka Web Social Welfare Department

- ಹಾಸ್ಟೆಲ್‌ಗಳ ಸಮಗ್ರ ಸುಧಾರಣೆಗೆ ಕ್ರಿಯಾ ಯೋಜನೆ ರೂಪಿಸುವುದು ತುರ್ತು ಅಗತ್ಯವಿದೆ.
- ಸಮಾಜ ಕಲ್ಯಾಣ ಇಲಾಖೆಯಲ್ಲಿಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರೆಂದು ವಿಭಜಿಸಿರುವಂತೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿಗಳನ್ನು ಗುರುತಿಸಬೇಕು. ಇದಕ್ಕಾಗಿ ಆಯೋಗ ರಚಿಸಬೇಕು.
- ಆದಿವಾಸಿಗಳ ಜನಸಂಖ್ಯೇ ದಿನೇ ದಿನೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ. ಅಲ್ಲಿಯೂ ಸಹ ಬಹುಸಂಖ್ಯಾತರು ಎಲ್ಲಾ ಸೌಲಭ್ಯ ಅನುಭವಿಸುತ್ತಿದ್ದಾರೆ. ಸರಕಾರದ ಸೌಲಭ್ಯಗಳು ಈ ಸಮುದಾಯದ ಎಲ್ಲಾ ಜನರಿಗೂ ತಲುಪಬೇಕಾದರೆ ಪ್ರತ್ಯೇಕತೆ ಆಗಬೇಕಿದೆ.
- ಅನುಭವಿಗಳು, ತಜ್ಞರನ್ನು ಕರೆಸಿ ಚರ್ಚಿಸಿದರೆ ಇಲಾಖೆಯ ಕಾರ್ಯಕ್ರಮಗಳು ತಳಸಮುದಾಯದ ತಲುಪಬಹುದು.
- ಎಸ್‌ಸಿಪಿ/ಟಿಎಸ್‌ಪಿ ಮೀಸಲು ಹಣವನ್ನು ಯಾವುದೇ ಕಾರಣಕ್ಕೂ ಇತರೆ ಉದ್ದೇಶಗಳಿಗೆ ಬಳಸಬಾರದು.
- ದಲಿತರ ಹೆಸರಲ್ಲಿಸಾವಿರಾರು ಕೋಟಿ ರೂ. ಇತರೆಡೆ ಡೈವರ್ಟ್‌ ಆಗುತ್ತಿದ್ದು ಇದನ್ನು ತಪ್ಪಿಸಲು ಕ್ರಮವಹಿಸಬೇಕು.
- ಅನುದಾನ ಎಲ್ಲಾ ಹಿಂದುಳಿದ ವರ್ಗಗಳಿಗೂ ತಲುಪಬೇಕಾದರೆ ಒಳ ವರ್ಗೀಕರಣ ಆಗಲೇಬೇಕಿದೆ.

ಸಮಾಜ ಕಲ್ಯಾಣ ಇಲಾಖೆಯ ಅನುದಾನ ಅರ್ಹ, ನೈಜ ಫಲಾನುಭವಿಗಳನ್ನು ತಲುಪುತ್ತಿಲ್ಲ. ಬಹುತೇಕ ಅನುದಾನವನ್ನು ದೊಡ್ಡ ದೊಡ್ಡ ಸಮುದಾಯಗಳೇ ಕಬಳಿಸುತ್ತಿವೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಇಡೀ ಇಲಾಖೆಯ ಯೋಜನೆ, ಕಾರ್ಯಕ್ರಮಗಳ ಪರಾಮರ್ಶೆ ಮಾಡಬೇಕು.
- ಡಾ. ಸಿ.ಎಸ್‌.ದ್ವಾರಕನಾಥ್‌, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ಈ ವಲಯಕ್ಕೆ ಹೆಚ್ಚಿನ ಅನುದಾನ ನಿರೀಕ್ಷಿತ. ಆದರೆ, ಬದಲಾದ ಆರ್ಥಿಕ ಸನ್ನಿವೇಶದಲ್ಲಿ ಅನುದಾನ ಕಡಿತವಾದದ್ದಿದೆ. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ನಿರೀಕ್ಷೆ ಮಾಡಬಹುದು. ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳಿವು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ