ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ಮೊದಲ ಬಜೆಟ್ನ ಮುಖ್ಯಾಂಶಗಳು.
ರೈತರ 2 ಲಕ್ಷ ರೂ. ವರೆಗಿನ ಸಾಲ ಮನ್ನಾ; ಸಾಲ ಪಾವತಿಸಿರುವ ರೈತರಿಗೂ ಸಿಹಿ ಸುದ್ದಿ
ರಾಜ್ಯದ ಪ್ರತಿ ರೈತರ 2 ಲಕ್ಷ ರೂಪಾಯಿವರೆಗಿನ ಸಾಲ ಮನ್ನಕ್ಕೆ ಸಿಎಂ ಸಮ್ಮತಿ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ ರೈತರ ಖಾತೆಗಳಿಗೆ ತಲಾ 25,000 ರೂ.ಗಳ ಪ್ರೋತ್ಸಾಹಧನ. 31-12-2017ರ ವರೆಗಿನ ಎಲ್ಲ ಸುಸ್ತಿದಾರರ ರೈತರ ಸಾಲಬಾಕಿ ಮನ್ನಾ. ರೈತರ ಸಾಲಮನ್ನಾಗೆ 34 ಸಾವಿರ ಕೋಟಿ ರೂಪಾಯಿ ಮೀಸಲು.
ಕಾಯಕ ಯೋಜನೆಯಡಿ ಬಡ್ಡಿ ರಹಿತ ಸಾಲ
ಕೌಶಲ ಮತ್ತು ಉದ್ಯಮಶೀಲತೆ ಗುಣಮಟ್ಟ ವರ್ಧಿಸುವ ಗುರಿಯೊಂದಿಗೆ ಸರಕಾರವು ಹೊಸದಾಗಿ 'ಕಾಯಕ ' ಯೋಜನೆ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಮದ್ಯ ಇನ್ನಷ್ಟು ತುಟ್ಟಿ
ಪೆಟ್ರೋಲ್ ಮೇಲಿನ ಸೆಸ್ ಶೇ.20 ರಿಂದ ಶೇ.32ಕ್ಕೆ, ಡಿಸೇಲ್ ಮೇಲಿನ ಸೆಸ್ ಶೇ.19 ರಿಂದ ಶೇ.22ಕ್ಕೆ ಹೆಚ್ಚಳ, ಪ್ರತಿ ಯೂನಿಟ್ ವಿದ್ಯುತ್ 20 ಪೈಸೆ ಏರಿಕೆ, ಮದ್ಯದ ಮೇಲಿನ ತೆರಿಗೆ ಶೇ.4ರಷ್ಟು ಹೆಚ್ಚಳ.
ಮುಖ್ಯಮಂತ್ರಿ ಮಾತೃಶ್ರೀ ಯೋಜನೆ: ಗರ್ಭಿಣಿ-ಬಾಣಂತಿಯರಿಗೆ ಮಾಸಿಕ ಸಾವಿರ ರೂಪಾಯಿ
ಬಿಪಿಎಲ್ ಕಾರ್ಡ್ದಾರ ಕುಟುಂಬಗಳ ಗರ್ಭಿಣಿಯರಿಗೆ 6ನೇ ತಿಂಗಳಿನಿಂದ 12ನೇ ತಿಂಗಳ ವರೆಗೂ (ಹೆರಿಗೆಯ ಬಳಿಕ 3 ತಿಂಗಳ ವರೆಗೆ) ಪ್ರತಿ ತಿಂಗಳೂ ತಲಾ 1,000 ರೂ.ಗಳ ಸಹಾಯಧನ ನೀಡಲಾಗುವುದು: ಸಿಎಂ ಕುಮಾರಸ್ವಾಮಿ.
ತುಮಕೂರಿನಲ್ಲಿ ಕ್ರೀಡಾ ತರಬೇತಿ ಸಂಸ್ಥೆ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಬಜೆಟ್ನಲ್ಲಿ ಕ್ರೀಡೆ ಮತ್ತು ಅಂಗಸಾಧನೆ ಚಟುವಟಿಕೆಗಳನ್ನು ಉತ್ತೇಜಿಸಲು ತುಮಕೂರಿನಲ್ಲಿ ಕ್ರೀಡಾ ಮತ್ತು ಅಂಗಸಾಧನೆ ತರಬೇತಿ ಸಂಸ್ಥೆ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಶಿಕ್ಷಣಕ್ಕೆ ಒತ್ತು: 1000 ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ
ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ. ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡಗಳ ದುರಸ್ತಿಗೆ 150 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ.
HDK ಬಜೆಟ್ನಲ್ಲಿ ಯಾವುದು ಅಗ್ಗ? ಯಾವುದು ದುಬಾರಿ?
ಧಾರ್ಮಿಕ ಪೀಠಗಳಿಗೆ ಧಾರಾಳ ಅನುದಾನ: ಧಾರ್ಮಿಕ ಪೀಠಗಳಿಗೆ ಧಾರಾಳವಾಗಿ ಅನುದಾನ ನೀಡಿರುವ ಸಿಎಂ, ರಾಜ್ಯದ ವಿವಿಧ ಧಾರ್ಮಿಕ ಪೀಠಗಳಿಗೆ 25 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ.
ಅನ್ನಭಾಗ್ಯ ಅಕ್ಕಿಗೆ ಕತ್ತರಿ: ಅನ್ನಭಾಗ್ಯ ಅಕ್ಕಿ ಪ್ರಮಾಣ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಕೆ. ಆದರೆ, ಬಿಪಿಎಲ್ ಪಡಿತರ ಚೀಟಿಗೆ 1 ಕೆಜಿ ಪಾಮ್ ಎಣ್ಣೆ, 1 ಕೆ.ಜಿ ಸಕ್ಕರೆ, 1 ಕೆಜಿ ಉಪ್ಪು, ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿ ಬೇಳೆ ವಿತರಣೆಗೆ ಎಚ್ಡಿಕೆ ಬದ್ಧ.
ಹಿರಿಯ ನಾಗರಿಕರಿಗೆ ಸಿಹಿ: 65 ವರ್ಷ ಮೀರಿದ ಹಿರಿಯ ನಾಗರಿಕರ ವೃದ್ಧಾಪ್ಯ ವೇತನ 600 ರೂಪಾಯಿಗಳಿಂದ ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
ಚೀನಾ ಮೊಬೈಲ್ಗಳ ಹಾವಳಿ ತಡೆಯಲು ಕ್ರಮ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನೆಗೆ ಉತ್ತೇಜನ
ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆ ಎಲ್ಲ ನಗರಗಳಿಗೆ ವಿಸ್ತರಣೆ
ಸ್ವ ಉದ್ಯೋಗ ಪ್ರೋತ್ಸಾಹಕ್ಕೆ ನೂತನ ಕಾಯಕ ಯೋಜನೆ; 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ
ಬಿಎಂಟಿಸಿಯಿಂದ 80 ಎಲೆಕ್ಟ್ರಿಕ್ ಬಸ್ಗಳ ಸೇವೆ
ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರಿನ ಬಾರ್ ಕೌನ್ಸಿಲ್ಗೆ 5 ಕೋಟಿ ರೂ ಅನುದಾನ
ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ
ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಆರಂಭಿಸಲು 30 ಕೋಟಿ ರೂ.
ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂಪಾಯಿ ಅನುದಾನ
ಮಂಡ್ಯ ಮಿಮ್ಸ್ ಅಭಿವೃದ್ಧಿಗೆ 30 ಕೋಟಿ ರೂ ಮೀಸಲು
ಸಂಧ್ಯಾ ಸುರಕ್ಷಾ ಯೋಜನೆಗೆ ಅನುದಾನ 600 ಕೋಟಿ ರೂಗಳಿಂದ 1000 ಕೋಟಿ ರೂ.ಗಳಿಗೆ ಏರಿಕೆ: ಸಿಎಂ ಕುಮಾರಸ್ವಾಮಿ
ಕದ್ವಿಆಯಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಘಟಕ ಸ್ಥಾಪನೆ
ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು
ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂಪಾಯಿ ಮೀಸಲು
ಚುನಾವಣಾ ಪ್ರಣಾಳಿಕೆಗಳ ಈಡೇರಿಕೆಯ ಭಾರಿ ನಿರೀಕ್ಷೆಯ ನಡುವೆಯೇ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಚೊಚ್ಚಲ ಬಜೆಟ್ ಅನ್ನು ಸಿಎಂ ಇಂದು ಮಂಡನೆ ಮಾಡುತ್ತಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮೊದಲ ಬಜೆಟ್
ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ, ಟೌನ್ಶಿಪ್ಗೆ ಆದ್ಯತೆ ನಿರೀಕ್ಷೆ
ಮಧ್ಯಮ, ಅಹಿಂದ ವರ್ಗಕ್ಕೆ ಕುಮಾರ ಕೊಡುಗೆ ನಿರೀಕ್ಷೆ
ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ, ಟೌನ್ಶಿಪ್ಗೆ ಆದ್ಯತೆ ನಿರೀಕ್ಷೆ
ರೈತರ 2 ಲಕ್ಷ ರೂ. ವರೆಗಿನ ಸಾಲ ಮನ್ನಾ; ಸಾಲ ಪಾವತಿಸಿರುವ ರೈತರಿಗೂ ಸಿಹಿ ಸುದ್ದಿ
ರಾಜ್ಯದ ಪ್ರತಿ ರೈತರ 2 ಲಕ್ಷ ರೂಪಾಯಿವರೆಗಿನ ಸಾಲ ಮನ್ನಕ್ಕೆ ಸಿಎಂ ಸಮ್ಮತಿ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ ರೈತರ ಖಾತೆಗಳಿಗೆ ತಲಾ 25,000 ರೂ.ಗಳ ಪ್ರೋತ್ಸಾಹಧನ. 31-12-2017ರ ವರೆಗಿನ ಎಲ್ಲ ಸುಸ್ತಿದಾರರ ರೈತರ ಸಾಲಬಾಕಿ ಮನ್ನಾ. ರೈತರ ಸಾಲಮನ್ನಾಗೆ 34 ಸಾವಿರ ಕೋಟಿ ರೂಪಾಯಿ ಮೀಸಲು.
ಕಾಯಕ ಯೋಜನೆಯಡಿ ಬಡ್ಡಿ ರಹಿತ ಸಾಲ
ಕೌಶಲ ಮತ್ತು ಉದ್ಯಮಶೀಲತೆ ಗುಣಮಟ್ಟ ವರ್ಧಿಸುವ ಗುರಿಯೊಂದಿಗೆ ಸರಕಾರವು ಹೊಸದಾಗಿ 'ಕಾಯಕ ' ಯೋಜನೆ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಮದ್ಯ ಇನ್ನಷ್ಟು ತುಟ್ಟಿ
ಪೆಟ್ರೋಲ್ ಮೇಲಿನ ಸೆಸ್ ಶೇ.20 ರಿಂದ ಶೇ.32ಕ್ಕೆ, ಡಿಸೇಲ್ ಮೇಲಿನ ಸೆಸ್ ಶೇ.19 ರಿಂದ ಶೇ.22ಕ್ಕೆ ಹೆಚ್ಚಳ, ಪ್ರತಿ ಯೂನಿಟ್ ವಿದ್ಯುತ್ 20 ಪೈಸೆ ಏರಿಕೆ, ಮದ್ಯದ ಮೇಲಿನ ತೆರಿಗೆ ಶೇ.4ರಷ್ಟು ಹೆಚ್ಚಳ.
ಮುಖ್ಯಮಂತ್ರಿ ಮಾತೃಶ್ರೀ ಯೋಜನೆ: ಗರ್ಭಿಣಿ-ಬಾಣಂತಿಯರಿಗೆ ಮಾಸಿಕ ಸಾವಿರ ರೂಪಾಯಿ
ಬಿಪಿಎಲ್ ಕಾರ್ಡ್ದಾರ ಕುಟುಂಬಗಳ ಗರ್ಭಿಣಿಯರಿಗೆ 6ನೇ ತಿಂಗಳಿನಿಂದ 12ನೇ ತಿಂಗಳ ವರೆಗೂ (ಹೆರಿಗೆಯ ಬಳಿಕ 3 ತಿಂಗಳ ವರೆಗೆ) ಪ್ರತಿ ತಿಂಗಳೂ ತಲಾ 1,000 ರೂ.ಗಳ ಸಹಾಯಧನ ನೀಡಲಾಗುವುದು: ಸಿಎಂ ಕುಮಾರಸ್ವಾಮಿ.
ತುಮಕೂರಿನಲ್ಲಿ ಕ್ರೀಡಾ ತರಬೇತಿ ಸಂಸ್ಥೆ
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಬಜೆಟ್ನಲ್ಲಿ ಕ್ರೀಡೆ ಮತ್ತು ಅಂಗಸಾಧನೆ ಚಟುವಟಿಕೆಗಳನ್ನು ಉತ್ತೇಜಿಸಲು ತುಮಕೂರಿನಲ್ಲಿ ಕ್ರೀಡಾ ಮತ್ತು ಅಂಗಸಾಧನೆ ತರಬೇತಿ ಸಂಸ್ಥೆ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಶಿಕ್ಷಣಕ್ಕೆ ಒತ್ತು: 1000 ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ
ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ. ಪ್ರಾಥಮಿಕ ಮತ್ತು ಪ್ರೌಢಶಾಲಾ ಕಟ್ಟಡಗಳ ದುರಸ್ತಿಗೆ 150 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ.
HDK ಬಜೆಟ್ನಲ್ಲಿ ಯಾವುದು ಅಗ್ಗ? ಯಾವುದು ದುಬಾರಿ?
ಧಾರ್ಮಿಕ ಪೀಠಗಳಿಗೆ ಧಾರಾಳ ಅನುದಾನ: ಧಾರ್ಮಿಕ ಪೀಠಗಳಿಗೆ ಧಾರಾಳವಾಗಿ ಅನುದಾನ ನೀಡಿರುವ ಸಿಎಂ, ರಾಜ್ಯದ ವಿವಿಧ ಧಾರ್ಮಿಕ ಪೀಠಗಳಿಗೆ 25 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದ್ದಾರೆ.
ಅನ್ನಭಾಗ್ಯ ಅಕ್ಕಿಗೆ ಕತ್ತರಿ: ಅನ್ನಭಾಗ್ಯ ಅಕ್ಕಿ ಪ್ರಮಾಣ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಕೆ. ಆದರೆ, ಬಿಪಿಎಲ್ ಪಡಿತರ ಚೀಟಿಗೆ 1 ಕೆಜಿ ಪಾಮ್ ಎಣ್ಣೆ, 1 ಕೆ.ಜಿ ಸಕ್ಕರೆ, 1 ಕೆಜಿ ಉಪ್ಪು, ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿ ಬೇಳೆ ವಿತರಣೆಗೆ ಎಚ್ಡಿಕೆ ಬದ್ಧ.
ಹಿರಿಯ ನಾಗರಿಕರಿಗೆ ಸಿಹಿ: 65 ವರ್ಷ ಮೀರಿದ ಹಿರಿಯ ನಾಗರಿಕರ ವೃದ್ಧಾಪ್ಯ ವೇತನ 600 ರೂಪಾಯಿಗಳಿಂದ ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
ಚೀನಾ ಮೊಬೈಲ್ಗಳ ಹಾವಳಿ ತಡೆಯಲು ಕ್ರಮ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನೆಗೆ ಉತ್ತೇಜನ
ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆ ಎಲ್ಲ ನಗರಗಳಿಗೆ ವಿಸ್ತರಣೆ
ಸ್ವ ಉದ್ಯೋಗ ಪ್ರೋತ್ಸಾಹಕ್ಕೆ ನೂತನ ಕಾಯಕ ಯೋಜನೆ; 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ
ಬಿಎಂಟಿಸಿಯಿಂದ 80 ಎಲೆಕ್ಟ್ರಿಕ್ ಬಸ್ಗಳ ಸೇವೆ
ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರಿನ ಬಾರ್ ಕೌನ್ಸಿಲ್ಗೆ 5 ಕೋಟಿ ರೂ ಅನುದಾನ
ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ
ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಆರಂಭಿಸಲು 30 ಕೋಟಿ ರೂ.
ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂಪಾಯಿ ಅನುದಾನ
ಮಂಡ್ಯ ಮಿಮ್ಸ್ ಅಭಿವೃದ್ಧಿಗೆ 30 ಕೋಟಿ ರೂ ಮೀಸಲು
ಸಂಧ್ಯಾ ಸುರಕ್ಷಾ ಯೋಜನೆಗೆ ಅನುದಾನ 600 ಕೋಟಿ ರೂಗಳಿಂದ 1000 ಕೋಟಿ ರೂ.ಗಳಿಗೆ ಏರಿಕೆ: ಸಿಎಂ ಕುಮಾರಸ್ವಾಮಿ
ಕದ್ವಿಆಯಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಲ್ಲಿ ಬೋನ್ ಮ್ಯಾರೋ ಘಟಕ ಸ್ಥಾಪನೆ
ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು
ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂಪಾಯಿ ಮೀಸಲು
ಚುನಾವಣಾ ಪ್ರಣಾಳಿಕೆಗಳ ಈಡೇರಿಕೆಯ ಭಾರಿ ನಿರೀಕ್ಷೆಯ ನಡುವೆಯೇ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಚೊಚ್ಚಲ ಬಜೆಟ್ ಅನ್ನು ಸಿಎಂ ಇಂದು ಮಂಡನೆ ಮಾಡುತ್ತಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮೊದಲ ಬಜೆಟ್
ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ, ಟೌನ್ಶಿಪ್ಗೆ ಆದ್ಯತೆ ನಿರೀಕ್ಷೆ
ಮಧ್ಯಮ, ಅಹಿಂದ ವರ್ಗಕ್ಕೆ ಕುಮಾರ ಕೊಡುಗೆ ನಿರೀಕ್ಷೆ
ಬಜೆಟ್ನಲ್ಲಿ ಉದ್ಯೋಗ ಸೃಷ್ಟಿ, ಟೌನ್ಶಿಪ್ಗೆ ಆದ್ಯತೆ ನಿರೀಕ್ಷೆ