ಆ್ಯಪ್ನಗರ

​ಸಾಮಾಜಿಕ ನ್ಯಾಯ ಇಲ್ಲಾಂದ್ರೆ ರಾಮರಾಜ್ಯ ಎಲ್ಲಿಂದ?: ಸಿದ್ದರಾಮಯ್ಯ ಟಾಂಗ್

ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದರು.

ವಿಕ ಸುದ್ದಿಲೋಕ 15 Mar 2017, 1:11 pm
ಬೆಂಗಳೂರು: ರಾಮರಾಜ್ಯವೆನ್ನುವುದು ಹಸಿವು ಮುಕ್ತ, ಶೋಷಣೆ ಮುಕ್ತ, ಗಾಢ ಸಾಮರಸ್ಯ ಹಾಗೂ ಸರ್ವಾಂಗೀಣ ಪ್ರಗತಿಯನ್ನು ಪ್ರತಿನಿಧಿಸುವ ಒಂದು ಪರಿಕಲ್ಪನೆ. ಹಾಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಟಾಂಗ್ ನೀಡಿದರು.
Vijaya Karnataka Web karnataka budget cm says ramarajya not possible without social equality
​ಸಾಮಾಜಿಕ ನ್ಯಾಯ ಇಲ್ಲಾಂದ್ರೆ ರಾಮರಾಜ್ಯ ಎಲ್ಲಿಂದ?: ಸಿದ್ದರಾಮಯ್ಯ ಟಾಂಗ್


ರಾಜ್ಯ ಸರಕಾರದ ಐದನೇ ಬಜೆಟ್ ಕುರಿತು ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ, ಜನಪರ ಸರಕಾರವೆಂದರೆ ಅಭಿವೃದ್ಧಿ ವಿರೋಧಿ ಸರಕಾರ ಎನ್ನುವಂಥ ಬಾಲಿಶವೂ, ಸಂಕುಚಿತವೂ ಆದ ಕಲ್ಪನೆಗಳು ಅದು ಹೇಗೋ ವಿತ್ತಿಯ ವಲಯದಲ್ಲಿ ನುಸುಳಿಬಿಟ್ಟಿದೆ. ಆದರೆ, ಅಂಥದ್ದೊಂದು ಮಿಥ್ಯೆಯನ್ನು ಒಡೆದು ಹಾಕುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ ಎಂದರು.

ಯಾವ ಸರಕಾರವು ಜನಪರ ಸರಕಾರ ಎಂದು ಜನಸಾಮಾನ್ಯರು ಗುರುತಿಸುತ್ತಾರೋ ಅದೇ ಸರಕಾರದ ಆಡಳಿತ, ನೀತಿ-ನಿರೂಪಣೆಗಳೇ ಬೆಂಗಳೂರನ್ನು ಜಾಗತಿಕವಾಗಿ ಅತ್ಯಂತ ಕ್ರಿಯಾಶೀಲ ನಗರಿ ಸ್ಥಾನಮಾನಕ್ಕೆ ಕೊಂಡಯ್ಯಲು ಯಶಸ್ವಿಯಾಗಿದೆ ಎನ್ನುವುದನ್ನು ವಿನಮ್ರತೆಯಿಂದ ಹೇಳಬಯಸುತ್ತೇನೆ ಎಂದು ಹೇಳಿದರು.

ನಮ್ಮದು ಸರ್ವರನ್ನೂ ಒಳಗೊಂಡ ಸರಕಾರ, ಸರ್ವೋದಯ ಅಭಿವೃದ್ಧಿ ಮಾದರಿ. ಜನಾಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಮಾರ್ಪಡಿಸಲಾಗಿದೆ ಎಂದು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಅಂಬೇಡ್ಕರ್‌, ಗಾಂಧಿ, ಬಸವಣ್ಣನ ಅವರನ್ನು ಸಿಎಂ ನೆನಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ