ಆ್ಯಪ್ನಗರ

ರಾಜ್ಯ ಬಜೆಟ್: ನಗರವಾಸಿ ಬಡವರಿಗೆ 5 ರೂ.ಗೆ ತಿಂಡಿ, 10 ರೂ.ಗೆ ಊಟ 'ನಮ್ಮ ಕ್ಯಾಂಟೀನ್'ನಲ್ಲಿ ಮಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 2017-18ನೇ ಸಾಲಿನ 1,86,561 ಕೋಟಿ ರೂ ಗಾತ್ರದ ಮುಂಗಡಪತ್ರವನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು. ಈ ಬಜೆಟ್‌ ಗಾತ್ರವು ಕಳೆದ ವರ್ಷಕ್ಕಿಂತ ಶೇ 14.16ರಷ್ಟು ಹೆಚ್ಚಾಗಿದೆ.

ವಿಕ ಸುದ್ದಿಲೋಕ 15 Mar 2017, 7:18 pm
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ 2017-18ನೇ ಸಾಲಿನ 1,86,561 ಕೋಟಿ ರೂ ಗಾತ್ರದ ಮುಂಗಡಪತ್ರವನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು. ಈ ಬಜೆಟ್‌ ಗಾತ್ರವು ಕಳೆದ ವರ್ಷಕ್ಕಿಂತ ಶೇ 14.16ರಷ್ಟು ಹೆಚ್ಚಾಗಿದೆ.
Vijaya Karnataka Web karnataka budget namma canteen for cheaper food a novel project
ರಾಜ್ಯ ಬಜೆಟ್: ನಗರವಾಸಿ ಬಡವರಿಗೆ 5 ರೂ.ಗೆ ತಿಂಡಿ, 10 ರೂ.ಗೆ ಊಟ 'ನಮ್ಮ ಕ್ಯಾಂಟೀನ್'ನಲ್ಲಿ ಮಾತ್ರ


ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ ಮಾದರಿಯಲ್ಲಿ ನಗರವಾಸಿ ಬಡವರಿಗೆ 5 ರೂ.ಗೆ ಬೆಳಗಿನ ತಿಂಡಿ ಮತ್ತು 10 ರೂ.ಗೆ ರಾತ್ರಿಯ ಊಟ ನೀಡುವ ನಮ್ಮ ಕ್ಯಾಂಟೀನ್ ಯೋಜನೆ, 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳ ರಚನೆ, ಐಐಟಿ, ಐಐಎಸ್‌ಸಿ, ಐಐಎಂ ನಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ ಪ್ರೋತ್ಸಾಹಧನ, ಪ್ರಥಮ ದರ್ಜೆ ಸರಕಾರಿ ಮತ್ತು ಅನುದಾನಿತ ಕಾಲೇಜುಗಳ1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ, ಬಡಕುಟುಂಬಗಳಿಗೆ ಅನಿಲ ಭಾಗ್ಯ ಯೋಜನೆಯಡಿ ಗೃಹಬಳಕೆ ಅಡುಗೆ ಅನಿಲ ಸಂಪರ್ಕಕ್ಕಾಗಿ ತಲಾ 1,600 ರೂ.ಗಳ ಸಹಾಯಧನ, ಪೌಷ್ಟಿಕಾಂಶ ಕೊರತೆ ನೀಗಿಸಲು ಮಾತೃಪೂರ್ಣ ಯೋಜನೆಗೆ 302 ಕೋಟಿ ರೂ.ಗಳ ಅನುದಾನ, 1000 ಹೊಸ ಪ್ರೌಢಶಾಲೆಗಳ ಸ್ಥಾಪನೆ, ಮಹಿಳಾ ಉದ್ಯಮಿಗಳಿಗೆ ಶೇ 4ರ ದರದಲ್ಲಿ ನೀಡುವ ಸಾಲದ ಮೊತ್ತ 2 ಕೋಟಿಗೆ ಏರಿಕೆ. ಇವು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನ ಮುಖ್ಯಾಂಶಗಳು.

ಎಸ್‌ಸಿ, ಎಸ್‌ಟಿ ಪಂಗಡದೊಳಗಿನ ಅಂತರ್ಜಾತಿ ವಿವಾಹಕ್ಕೆ 2 ಲಕ್ಷ ರೂ ಪ್ರೋತ್ಸಾಹ ಧನ ನೀಡಲಾಗುವುದು. ಸಕಾಲ ಯೋಜನೆಯಡಿ ಹೊಸ ಪಡಿತರ ಚೀಟಿ ವಿತರಿಸಲಾಗುವುದು. 15 ದಿನಗಳಲ್ಲಿ ಪಡಿತರ ಚೀಟಿಯನ್ನು ಸ್ಪೀಡ್‌ ಪೋಸ್ಟ್‌ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ರವಾನಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು.

ಭಾಗ್ಯಜ್ಯೋತಿ ಉಚಿತ ವಿದ್ಯುತ್‌ 18 ಯುನಿಟ್‌ನಿಂದ 40 ಯುನಿಟ್‌ಗೆ ಏರಿಕೆ, ರಾಜ್ಯದಲ್ಲಿ ಒಟ್ಟು 460 ಹೊಸ ಗ್ರಾಮ ಪಂಚಾಯ್ತಿಗಳ ರಚನೆ, ಕೃಷಿ ಕ್ಷೇತ್ರಕ್ಕೆ 5080 ಕೋಟಿ ರೂಪಾಯಿ ತೆಗೆದಿರಿಸಿರುವ ಮುಖ್ಯಮಂತ್ರಿ ಈ ಬಾರಿ ರೈತರ ಸಾಲ ಮನ್ನಾ ಇಲ್ಲಪ್ರಕಟಿಸಿದರು.

ಚಾಲನಾ ಪರವಾನಗಿ ಹೊಂದಿರುವ ನಿರುದ್ಯೋಗಿಗಳಿಗೆ ವಾಹನ ಖರೀದಿಸಲು 3 ಲಕ್ಷ ರೂ ಸಾಲ, ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರೂ ವಿಶೇಷ ಗೌರವಧನ, ಸ್ವಚ್ಛ ಕರ್ನಾಟಕಕ್ಕಾಗಿ ಹೊಸ ಯೋಜನೆಯಡಿ 28 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ