ಆ್ಯಪ್ನಗರ

ವರ್ಷದ ಬಜೆಟ್ ಮಾಡಿರುವುದು ವ್ಯರ್ಥ

ನೀತಿ ಸಂಹಿತೆ ಜಾರಿಯಾಗುವವರೆಗೆ ಮಾತ್ರ ಈ ಸರಕಾರದ ಅಧಿಕಾರವಿದ್ದು, ಒಂದು ವರ್ಷದ ಬಜೆಟ್ ಮಾಡಿರುವುದು ವ್ಯರ್ಥ ಕಸರತ್ತು ಎಂದು ವಿಧಾನ ಪರಿಷತ್‌ ಸದಸ್ಯ ವಿಧಾನ ಪರಿಷತ್ತಿನ ಸದಸ್ಯ ಅರುಣ ಶಹಾಪೂರ ಹೇಳಿದ್ದಾರೆ.

Vijaya Karnataka Web 16 Feb 2018, 5:09 pm
ಬೆಂಗಳೂರು: ನೀತಿ ಸಂಹಿತೆ ಜಾರಿಯಾಗುವವರೆಗೆ ಮಾತ್ರ ಈ ಸರಕಾರದ ಅಧಿಕಾರವಿದ್ದು, ಒಂದು ವರ್ಷದ ಬಜೆಟ್ ಮಾಡಿರುವುದು ವ್ಯರ್ಥ ಕಸರತ್ತು ಎಂದು ವಿಧಾನ ಪರಿಷತ್‌ ಸದಸ್ಯ ವಿಧಾನ ಪರಿಷತ್ತಿನ ಸದಸ್ಯ ಅರುಣ ಶಹಾಪೂರ ಹೇಳಿದ್ದಾರೆ.
Vijaya Karnataka Web reaction to karnataka budget
ವರ್ಷದ ಬಜೆಟ್ ಮಾಡಿರುವುದು ವ್ಯರ್ಥ


ಶಿಕ್ಷಣ ಕ್ಷೇತ್ರಕ್ಕೆ ಲವಲೇಶವೂ ಪ್ರಯೋಜನಕಾರಿಯಾಗಿರುವ ಘೋಷಣೆಯನ್ನು ಮಾಡಿಲ್ಲ. ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ, ಆರನೇ ವೇತನ ಆಯೋಗದ ಹೊಸ ವೇತನ ಶ್ರೇಣಿಯ ಆಸೆ, 1995 ರ ನಂತರ ಆರಂಭವಾದ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನದ ವಿಸ್ತರಣೆ, 1987-95ರ ಮಧ್ಯೆ ಪದವಿ ಕಾಲೇಜುಗಳಿಗೆ ಅನುದಾನದ ಒದಗಿಸುವ ಹಾಗೂ ಖಾಲಿ ಹುದ್ದೆಗಳ ಭರ್ತಿ, ಈ ಎಲ್ಲ ಸಮಸ್ಯೆಗಳಿಗೆ ಮಣ್ಣೆರೆಚುವ ಕೆಲಸ ಮಾಡಿದ್ದಾರೆ ಎಂದು ದೂರಿದ್ದಾರೆ.

ಐದು 5 ವರ್ಷಗಳ ಆಡಳಿತ ಮಾಡಿದರೂ ಶಿಕ್ಷಣ ಇಲಾಖೆಯ ಮಟ್ಟಿಗೆ ನಿಷ್ಪ್ರಯೋಜಕ ಸರಕಾರವಾಗಿದ್ದು,ಈ ಬಜೆಟ್ ನಲ್ಲೂ ರಾಜ್ಯದ ಜನತೆಯನ್ನು ಮತ್ತೊಮ್ಮೆ ನಿರಾಸೆಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ