Please enable javascript.ಆರ್‌ಬಿಐನಿಂದ 60, 150 ರೂ. ನಾಣ್ಯ ಬಿಡುಗಡೆ - ಆರ್‌ಬಿಐನಿಂದ 60, 150 ರೂ. ನಾಣ್ಯ ಬಿಡುಗಡೆ - Vijay Karnataka

ಆರ್‌ಬಿಐನಿಂದ 60, 150 ರೂ. ನಾಣ್ಯ ಬಿಡುಗಡೆ

ವಿಕ ಸುದ್ದಿಲೋಕ 24 May 2014, 4:00 am
Subscribe

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 150 ಹಾಗೂ 60 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದೆ. ಆದರೆ ಇದು ಸಾರ್ವಜನಿಕವಾಗಿ ಚಲಾವಣೆಗಿಲ್ಲ.

 60 150
ಆರ್‌ಬಿಐನಿಂದ 60, 150 ರೂ. ನಾಣ್ಯ ಬಿಡುಗಡೆ
ಉಡುಪಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 150 ಹಾಗೂ 60 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದೆ. ಆದರೆ ಇದು ಸಾರ್ವಜನಿಕವಾಗಿ ಚಲಾವಣೆಗಿಲ್ಲ.

ನಾಣ್ಯಗಳೆರಡೂ ಬೇಕಿದ್ದರೆ ಬರೋಬ್ಬರಿ ತಲಾ 3,414 ರೂಪಾಯಿಯನ್ನು ಆರ್‌ಬಿಐಗೆ ನೀಡಬೇಕು. ಮೋತಿಲಾಲ್ ನೆಹರೂ ಹುಟ್ಟಿ 150 ವರ್ಷವಾದ ಹಿನ್ನೆಲೆಯಲ್ಲಿ ಬಿಡುಗಡೆಯಾದ 150 ರೂ. ಮುಖಬೆಲೆಯ ನಾಣ್ಯ 35 ಗ್ರಾಂ. ತೂಕವಿದೆ.

ಶೇ. 50 ಬೆಳ್ಳಿ, ಶೇ. 40 ತಾಮ್ರ, ಶೇ. 5 ನಿಕ್ಕೆಲ್, ಶೇ. 5 ಜಿಂಕ್ ಹೊಂದಿದ ನಾಣ್ಯದ ಒಂದು ಬದಿಯಲ್ಲಿ ಮೋತಿಲಾಲ್ ನೆಹರೂ, ಇನ್ನೊಂದು ಬದಿಯಲ್ಲಿ ಭಾರತ: ಇಂಡಿಯಾ, ರೂ. 150, ಅಶೋಕ ಲಾಂಛನ, ಸತ್ಯಮೇವ ಜಯತೆ ಶೋಭಿಸುತ್ತಿದೆ.

60 ರೂ. ಮುಖಬೆಲೆಯ ನಾಣ್ಯವನ್ನು ಕೋಲ್ಕೊತಾ ಟಂಕಸಾಲೆಗೆ 60 ತುಂಬಿದ ಹ್ನಿನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈಸ್ಟ್ ಇಂಡಿಯಾ ಕಂಪನಿ ಸಹಭಾಗಿತ್ವದಲ್ಲಿ ನವಾಬ ಸಿರಾಜ್ ಯು ದೌಲಾ 1759: 60 ರಲ್ಲಿ ಕೋಲ್ಕೊತಾದಲ್ಲಿ ಮೊದಲ ಟಂಕ ಸಾಲೆ ಸ್ಥಾಪಿಸಿದ್ದರು.

ಎರಡನೇ ಟಂಕ ಸಾಲೆ 1792ರಲ್ಲಿ ಸ್ಥಾಪನೆಯಾಗಿದ್ದು, ಇಂಗ್ಲೆಂಡಿನಿಂದ ಯಂತ್ರ ತರಲಾಗಿತ್ತು. 1829ರಲ್ಲಿ ಮತ್ತೊಂದು ಟಂಕಸಾಲೆ ಸ್ಥಾಪನೆಯಾಗಿದೆ. ಅಲಿಪುರದಲ್ಲಿ 1952ರಲ್ಲಿ ಸ್ಥಾಪನೆ ಯಾದ ಟಂಕ ಸಾಲೆಯ ಚಿತ್ರ 60 ರೂ. ಮೌಲ್ಯದ ನಾಣ್ಯದ ಒಂದು ಬದಿಯಲ್ಲಿದೆ.

ಕೋಲ್ಕೋತಾ ಟಂಕಸಾಲೆ ವೈಶಿಷ್ಟ್ಯ
ಭಾರತದ ನಾಗರಿಕ ಮತ್ತು ಸೇನಾ ಅತ್ಯುನ್ನತ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಶೌರ್ಯ ಚಕ್ರವನ್ನು ಇಲ್ಲೇ ಟಂಕಿಸಲಾಗುತ್ತಿದೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪದಕ, ಸ್ಮಾರಕ ನಾಣ್ಯ, ವಿವಿಧ ನಾಣ್ಯ, ಗೋಲ್ಡ್ ಬಾರ್‌ಗಳನ್ನು ಟಂಕಿಸುವ ಅವಕಾಶ ಅಲೀಪುರ ಟಂಕಸಾಲೆ ಪಡೆದಿದೆ. 1964ರಿಂದ ಇಲ್ಲಿಯ ತನಕ ಆರ್‌ಬಿಐ 70ಕ್ಕೂ ಅಧಿಕ ಸ್ಮಾರಕ ನಾಣ್ಯಗಳನ್ನು ಟಂಕಿಸಿದೆ. ಆದರೆ ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಸಹಿತ ಅನೇಕ ಗಣ್ಯ ಪ್ರಮುಖರ ಸ್ಮಾರಕ ನಾಣ್ಯವನ್ನು ಇನ್ನೂ ಆರ್‌ಬಿಐ ಟಂಕಿಸಿಲ್ಲ.
-----

150 ರೂ., 60 ರೂ. ನಾಣ್ಯವನ್ನು ಕಾರ್ಪೊರೇಷನ್ ಬ್ಯಾಂಕ್‌ನ ನಾಣ್ಯ ಸಂಗ್ರಹಾಲಯದಲ್ಲಿ ನೋಡಬಹುದು. ನಾಣ್ಯದ ಮೂಲಕ ದೇಶದ, ಗಣ್ಯ ವ್ಯಕ್ತಿಗಳ ಪರಿಚಯ, ಇತಿಹಾಸವನ್ನು ಜನರಿಗೆ ತಿಳಿಸುತ್ತೇವೆ. ಮುಂದಿನ ಜನಾಂಗಕ್ಕೆ ಇಂತಹ ನಾಣ್ಯಗಳು ದಾರಿದೀಪವಾಗಲಿವೆ.
* ಎಸ್.ಎ. ಕೃಷ್ಣಯ್ಯ, ಅಧ್ಯಕ್ಷರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಾಹಕರ ಸಂಘ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ