ಆ್ಯಪ್ನಗರ

ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ದೊಡ್ಡ ಬ್ಯಾಂಕ್‌ಗಳಾಗಿ ಮಾರ್ಪಡಿಸುವುದರಿಂದ ಲಾಭವೇನು?

ಇದೀಗ ಸಾರ್ವಜನಿಕ ವಲಯದ 10 ಬ್ಯಾಂಕುಗಳನ್ನು ವಿಲೀನ ಮಾಡಿ ಒಟ್ಟು ನಾಲ್ಕು ಬ್ಯಾಂಕುಗಳನ್ನಾಗಿ ಸರಕಾರ ರೂಪಿಸುವ ದಿಟ್ಟ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. ಅಸಲಿಗೆ ಇಂತಹ ಕ್ರಮದಿಂದ ಆಗುವ ಲಾಭವೇನು? ನಷ್ಟವೇ ಹೆಚ್ಚೇ?

Vijaya Karnataka Web 31 Aug 2019, 9:52 am
ಮೊದಲ ಪ್ರಯತ್ನದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಅದರ ಸಹವರ್ತಿ ಬ್ಯಾಂಕ್‌ಗಳ ವಿಲೀನಗೊಳಿಸಿದ್ದ ಕೇಂದ್ರ ಸರಕಾರ ಆ ಬಳಿಕ ಬ್ಯಾಂಕ್‌ ಬರೋಡಾ, ದೇನಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ಗಳನ್ನು ಒಂದಾಗಿಸಿತ್ತು. ಇದೀಗ ಸಾರ್ವಜನಿಕ ವಲಯದ 10 ಬ್ಯಾಂಕುಗಳನ್ನು ವಿಲೀನ ಮಾಡಿ ಒಟ್ಟು ನಾಲ್ಕು ಬ್ಯಾಂಕುಗಳನ್ನಾಗಿ ಸರಕಾರ ರೂಪಿಸಲಿದೆ. ಇದರಲ್ಲಿ ನಮ್ಮ ನಾಡಿನ ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಕಾರ್ಪೊರೇಷನ್‌ ಬ್ಯಾಂಕುಗಳೂ ಸೇರಿವೆ.
Vijaya Karnataka Web Bank merger 2


ಈ ಬ್ಯಾಂಕ್‌ಗಳ ವಿಲೀನದಿಂದ ಆಗುವ ಲಾಭಗಳೇನು?
  • ಬ್ಯಾಂಕಿಂಗ್‌ ನಿರ್ವಹಣಾ ವೆಚ್ಚ ಗಣನೀಯ ತಗ್ಗಲಿದೆ.
  • ಬಹುಬ್ಯಾಂಕುಗಳ ವಿಲೀನದಿಂದಾಗಿ ಹೆಚ್ಚಿನ ಗ್ರಾಹಕರನ್ನು ತಲುಪಬಹುದು. ಭೌಗೋಳಿಕವಾಗಿಯೂ ಜಾಲವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.
  • ಅನುತ್ಪಾದಕ ಸಾಲ ಮತ್ತು ಅಪಾಯ ನಿರ್ವಹಣೆ ಗಣನೀಯವಾಗಿ ತಗ್ಗಿಸಬಹುದು.
  • ದೊಡ್ಡ ಬ್ಯಾಂಕುಗಳಿದ್ದರೆ ಪ್ರತಿಯೊಂದು ಕ್ಷೇತ್ರದಲ್ಲೂ ಅದರ ತಜ್ಞತೆಯ ಪರಿಣತಿಯನ್ನು ಪಡೆಯಬಹುದು. ಇದು ಸಣ್ಣ ಬ್ಯಾಂಕುಗಳ ಕಾರ್ಯನಿರ್ವಹಣೆಯಿಂದ ಸಾಧ್ಯವಿಲ್ಲ.
  • ಒಂದೆಡೆ ಕೇಂದ್ರೀಕೃತವಾಗಿರುವ ಬ್ಯಾಂಕುಗಳು ವಿಲೀನದಿಂದಾಗಿ ಭೌಗೋಳಕವಾಗಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ವೃತ್ತಿಪರತೆ ನೈಪುಣ್ಯತೆ ಸಾಧಿಸಲು ಸಾಧ್ಯಾಗುತ್ತದೆ.
  • ಜಾಗತಿಕವಾಗಿ ಭಾರತೀಯ ಬ್ಯಾಂಕುಗಳು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.
  • ಬ್ಯಾಂಕಿಂಗ್‌ ವ್ಯವಸ್ಥೆಯ ಮೇಲೆ ಆರ್‌ಬಿಐ ಹೆಚ್ಚು ನಿಯಂತ್ರಣ ಹೊಂದಲು ಮತ್ತು ತನ್ನ ನೀತಿಗಳನ್ನು ಜಾರಿಗೆ ತರಲು ಸಾಧ್ಯವಾಗಲಿದೆ.
  • ಹೆಚ್ಚು ಬ್ಯಾಂಕುಗಳು ವಿಲೀನವಾಗುವುದರಿಂದ ಸಹಜವಾಗಿಯೇ ಶಾಖೆಗಳು ಹೆಚ್ಚಾಗುತ್ತವೆ. ಇದು ಎಲ್ಲರಿಗೂ ಬ್ಯಾಂಕಿಂಗ್‌ ಸೇವೆ ದೊರೆಯಲು ಸಾಧ್ಯವಾಗುತ್ತದೆ.
ವಿಲೀನಗೊಳ್ಳಲಿರುವ ಬ್ಯಾಂಕ್‌ಗಳ ಗ್ರಾಹಕರು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ತಜ್ಞರು ಏನು ಹೇಳುತ್ತಾರೆ?
- ಜಾಗತಿಕ ಮಟ್ಟದ ಬ್ಯಾಂಕ್‌ಗಳ ಸಾಲಿನಲ್ಲಿ 4-5 ಭಾರತೀಯ ಬ್ಯಾಂಕ್‌ಗಳು ಇದ್ದರೆ ಹಲವಾರು ಅನುಕೂಲಗಳು ಸಿಗಲಿವೆ. ಜತೆಗೆ ಸರಕಾರ ಮತ್ತು ಆರ್‌ಬಿಐಗೆ 27ರ ಬದಲು 4-5 ಬ್ಯಾಂಕ್‌ಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ ಎನ್ನುತ್ತಾರೆ ಹಿರಿಯ ಬ್ಯಾಂಕಿಂಗ್‌ ತಜ್ಞರಾದ ಎಸ್‌.ಎಸ್‌ ಭಟ್‌.
- ಈ ಹಿಂದಿನ ಬ್ಯಾಂಕ್‌ ವಿಲೀನದ ಪರಿಣಾಮಗಳನ್ನು ಅವಲೋಕಿಸಿ ಈ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಅದು ನಡೆದಿಲ್ಲ ಎಂದು ಬ್ಯಾಂಕಿಂಗ್‌ ತಜ್ಞ ಏಕನಾಥ್‌ ಬಾಳಿಗ ಬೇಸರ ವ್ಯಕ್ತ ಪಡಿಸಿದ್ದಾರೆ.
- ನಿವೃತ್ತಿ ಕಾಲ ಸನ್ನಿಹಿತವಾಗುವ ವೇಳೆ ಬ್ಯಾಂಕ್‌ಅನ್ನು ಬದಲಿಸುವುದು ಭಾವನಾತ್ಮಕವಾದ ನೋವಿನ ಸಂಗತಿ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿ ಆರ್‌.ಕೆ ಬಾಲಚಂದ್ರ.

ಮತ್ತೆ ಬ್ಯಾಂಕ್‌ಗಳ ವಿಲೀನ, ಪಿಎನ್‌ಬಿ, ಓರಿಯಂಟಲ್‌, ಯುನೈಟೆಡ್‌ ಬ್ಯಾಂಕ್‌ ವಿಲೀನ: ನಿರ್ಮಲಾ ಸೀತಾರಾಮನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ