ಆ್ಯಪ್ನಗರ

ಆಧಾರ್‌ ಸಂಖ್ಯೆ ಏಕೆ ಬೇಕು ಅನ್ನುವುದಕ್ಕೆ 10 ಕಾರಣ

ಖಾಸಗಿತನಕ್ಕೆ ಕನ್ನ, ಆಧಾರ್‌ ಮಾಹಿತಿಯ ದುರ್ಬಳಕೆ, ವೈಯಕ್ತಿಕ ಹಕ್ಕಿನ ಉಲ್ಲಂಘನೆ - ಹೀಗೆ ಏನೆಲ್ಲ ಹೇಳಿದರೂ, ‘ಆಧಾರ್‌’ ಅನ್ನುವುದು ಬದುಕಿನಲ್ಲಿನ ಬಹುತೇಕ ವ್ಯವಹಾರಗಳಿಗೆ ಕಡ್ಡಾಯವಾಗಿದೆ. ಇತರೆ ವ್ಯವಹಾರಗಳಿಗೂ ಮುಂದಿನ ದಿನಗಳಲ್ಲಿ ಕಡ್ಡಾಯವಾಗುವುದರಲ್ಲಿ ಅನುಮಾನವಿಲ್ಲ.

Vijaya Karnataka 22 Oct 2017, 9:07 am
ಈಗಾಗಲೇ ಸರಕಾರದ ಸಾಕಷ್ಟು ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್‌ ಅನ್ನು ಕಡ್ಡಾಯಗೊಳಿಸಲಾಗಿದೆ. ಖಾಸಗಿ ವಲಯಗಳಲ್ಲೂ ಆಧಾರ್‌ ಕೇಳುವ ಪರಿಪಾಠ ಈಗ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಆಧಾರ್‌ ಅನ್ನುವುದು ಬದುಕಿನ ಒಂದು ಭಾಗವೇ ಆಗಲಿದೆ.
Vijaya Karnataka Web 10 reasons why aadhaar number needed
ಆಧಾರ್‌ ಸಂಖ್ಯೆ ಏಕೆ ಬೇಕು ಅನ್ನುವುದಕ್ಕೆ 10 ಕಾರಣ


ಹೊಸದಿಲ್ಲಿ: ಖಾಸಗಿತನಕ್ಕೆ ಕನ್ನ, ಆಧಾರ್‌ ಮಾಹಿತಿಯ ದುರ್ಬಳಕೆ, ವೈಯಕ್ತಿಕ ಹಕ್ಕಿನ ಉಲ್ಲಂಘನೆ - ಹೀಗೆ ಏನೆಲ್ಲ ಹೇಳಿದರೂ, ‘ಆಧಾರ್‌’ ಅನ್ನುವುದು ಬದುಕಿನಲ್ಲಿನ ಬಹುತೇಕ ವ್ಯವಹಾರಗಳಿಗೆ ಕಡ್ಡಾಯವಾಗಿದೆ. ಇತರೆ ವ್ಯವಹಾರಗಳಿಗೂ ಮುಂದಿನ ದಿನಗಳಲ್ಲಿ ಕಡ್ಡಾಯವಾಗುವುದರಲ್ಲಿ ಅನುಮಾನವಿಲ್ಲ.

ಬ್ಯಾಂಕ್‌ ಖಾತೆ, ಐಟಿ ರಿಟರ್ನ್ಸ್‌, ರೈಲ್ವೆ ಟಿಕೆಟ್‌ಗಳ ರಿಯಾಯಿತಿ, ಪಾಸ್‌ಪೋರ್ಟ್‌ ಸೇರಿದಂತೆ 10 ಕಾರಣಗಳಿಗೆ ಆಧಾರ್‌ ಬೇಕೇಬೇಕು. ಆಧಾರ್‌ ಅಗತ್ಯವಾಗಿರುವ 10 ಮುಖ್ಯ ವ್ಯವಹಾರ/ಸಂದರ್ಭಗಳು ಇಲ್ಲಿವೆ.

1. ಬ್ಯಾಂಕ್‌ ಖಾತೆ: ಹೊಸದಾಗಿ ಬ್ಯಾಂಕ್‌ ಖಾತೆ ತೆರೆಯಲು, ಹಾಲಿ ಖಾತೆ ಮುಂದುವರಿಸಲು ಆಧಾರ್‌ ಅಗತ್ಯ. 50 ಸಾವಿರ ರೂ. ಮತ್ತು ಅದಕ್ಕೂ ಹೆಚ್ಚಿನ ಹಣಕಾಸು ವ್ಯವಹಾರ ನಡೆಸುವ ಖಾತೆದಾರರು ಆಧಾರ್‌ ಜತೆ ತಮ್ಮ ಬ್ಯಾಂಕ್‌ ಖಾತೆಯನ್ನು ಡಿ.31ರೊಳಗೆ ಜೋಡಣೆ ಮಾಡಬೇಕು. ಇಲ್ಲದೇ ಹೋದರೆ, ಖಾತೆ ಸ್ಥಗಿತ.

2. ಆದಾಯ ತೆರಿಗೆ ರಿಟರ್ನ್ಸ್‌: ಆದಾಯ ತೆರಿಗೆಯ ರಿಟರ್ನ್ಸ್‌ ಅನ್ನು ಸಮಯಕ್ಕೆ ಸರಿಯಾಗಿ ದಾಖಲಿಸಿದರೂ, ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡದೇ ಹೋದರೆ ರಿಟರ್ನ್ಸ್‌ ಅನ್ನು ತೆರಿಗೆ ಇಲಾಖೆ ಮಾನ್ಯ ಮಾಡದು.

3. ಪ್ಯಾನ್‌ ಕಾರ್ಡ್‌: ಹಣಕಾಸು ಮತ್ತು ಬ್ಯಾಂಕ್‌ ವ್ಯವಹಾರಗಳಿಗೆ ಪದೇಪದೆ ಕೇಳಲಾಗುವ ಪ್ಯಾನ್‌(ಕಾಯಂ ಖಾತೆ ಸಂಖ್ಯೆ) ಸಂಖ್ಯೆ ಪಡೆಯಲು ಆಧಾರ್‌ ಕಾರ್ಡ್‌ ಈಗ ಇರಲೇ ಬೇಕು. ಅಲ್ಲದೇ ಈಗ ಇರುವ ಪ್ಯಾನ್‌ ಅನ್ನು ಆಧಾರ್‌ ಜತೆ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

4. ಇಪಿಎಫ್‌ಒ: ಭವಿಷ್ಯ ನಿಧಿ(ಇಪಿಎಫ್‌) ಖಾತೆಯನ್ನು ಆಧಾರ್‌ ಜತೆ ಲಿಂಕ್‌ ಮಾಡುವುದನ್ನು ಇಪಿಎಫ್‌ಒ ಕಡ್ಡಾಯಗೊಳಿಸಿದೆ.

5. ಮೊಬೈಲ್‌ ಸಂಖ್ಯೆ: ಹೊಸದಾಗಿ ಮೊಬೈಲ್‌ ಸಂಖ್ಯೆ ಪಡೆಯಲು ಆಧಾರ್‌ ಕೇಳಲಾಗುತ್ತದೆ. ಹಾಲಿ ಮೊಬೈಲ್‌ದಾರರು ತಮ್ಮ ಮೊಬೈಲ್‌ ಸಂಖ್ಯೆಗೆ ಆಧಾರ್‌ ಅನ್ನು ಲಿಂಕ್‌ ಮಾಡಬೇಕು. ಡಿ.31ರ ಗಡುವು ನೀಡಲಾಗಿದೆ.

6. ವಿದ್ಯಾರ್ಥಿ ವೇತನ: ವಿದ್ಯಾರ್ಥಿಗಳು ಕೇಂದ್ರ ಸರಕಾರದ ವಿದ್ಯಾರ್ಥಿ ವೇತನ ಪಡೆಯಲು ಮತ್ತು ಇತರೆ ಆರ್ಥಿಕ ಯೋಜನೆಗಳ ನೆರವು ಪಡೆಯಲು ಆಧಾರ್‌ ಸಂಖ್ಯೆಯನ್ನು ನೀಡಬೇಕಾಗಿದೆ.

7. ಪಾಸ್‌ಪೋರ್ಟ್‌: ಪಾಸ್‌ಪೋರ್ಟ್‌ ಸಲ್ಲಿಸಲು ನಾನಾ ದಾಖಲೆಗಳ ಜತೆಗೆ ಆಧಾರ್‌ ಕಾರ್ಡ್‌ ಕಡ್ಡಾಯ ಎಂಬುದಾಗಿ ವಿದೇಶಾಂಗ ವ್ಯವಹಾರ ಸಚಿವಾಲಯ ಈಗಾಗಲೇ ಹೇಳಿದೆ. ಆಧಾರ್‌ ಇಲ್ಲದೇ
ಹೋದರೆ, ನೀವು ಪಾಸ್‌ಪೋರ್ಟ್‌ ಪಡೆಯಲಾರಿರಿ ಅನ್ನುವುದು ನೆನಪಿರಲಿ.

8. ರೈಲ್ವೆ ಟಿಕೆಟ್‌ಗಳಲ್ಲಿ ರಿಯಾಯಿತಿ: ಸರಕಾರಿ ಯೋಜನೆಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಆಧಾರ್‌ ಬಳಕೆಯಾಗುತ್ತಿದೆ. ರೈಲ್ವೆ ಟಿಕೆಟ್‌ ದರಗಳ ವಿನಾಯಿತಿ ಪಡೆಯಲು ಆಧಾರ್‌ ಅನ್ನು ಕಡ್ಡಾಯಗೊಳಿಸಿದೆ.

9. ಮಧ್ಯಾಹ್ಯದ ಬಿಸಿಯೂಟ: ಶಾಲೆಗಳಲ್ಲಿ ಸರಕಾರದ ಮಧ್ಯಾಹ್ಯದ ಬಿಸಿಯೂಟ ಪಡೆಯಲು ವಿದ್ಯಾರ್ಥಿಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ.

10. ಪಡಿತರ ಸೌಲಭ್ಯ: ಫಲಾನುಭವಿಗಳು ಪಡಿತರ ಸೌಲಭ್ಯ ಪಡೆಯಲು ಆಧಾರ್‌ ಇರಲೇ ಬೇಕು. ತಮ್ಮ ಪಡಿತರ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡುವುದು ಕಡ್ಡಾಯ. ಕೇಂದ್ರ ಸರಕಾರದ ಬಹುತೇಕ ಸಮಾಜಕಲ್ಯಾಣ ಯೋಜನೆಗಳಿಗೆ ಆಧಾರ್‌ ಇರಲೇ ಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ