ಆ್ಯಪ್ನಗರ

ಸಾಫ್ಟ್‌ವೇರ್‌ ಕಂಪನಿಗೆ ಹದಿಮೂರರ ಬಾಲಕನೇ ಬಾಸ್‌!

ಕೇರಳ ಮೂಲದ ಆದಿತ್ಯನ್‌ ರಾಜೇಶ್‌ ಎನ್ನುವ ಬಾಲಕ, 'ಟ್ರೈನೆಟ್‌ ಸಲೂಷನ್ಸ್‌' ಕಂಪನಿಯನ್ನು ದುಬೈನಲ್ಲಿ ಆರಂಭಿಸಿದ್ದು ಆತನ ಮೂವರು ಸ್ನೇಹಿತರು/ಸಹಪಾಠಿಗಳೇ ಉದ್ಯೋಗಿಗಳು. ಈ ಕಂಪನಿಗೆ 12ಕ್ಕೂ ಅಧಿಕ ಕ್ಲೈಂಟ್‌ಗಳೂ ಇದ್ದಾರೆ. ''ಹದಿನೆಂಟು ವರ್ಷ ಮುಗಿದಾಗ ಅಧಿಕೃತವಾಗಿ ನಾನು ಕಂಪನಿಯ ಮಾಲೀಕನಾಗುತ್ತೇನೆ. ಆದರೂ, ನಾವು ಕಂಪನಿಯಂತೆಯೇ ಕೆಲಸ ಮಾಡುತ್ತಿದ್ದೇವೆ. ಹನ್ನೆರಡಕ್ಕೂ ಅಧಿಕ ಕ್ಲೈಂಟ್‌ಗಳಿದ್ದು, ಡಿಸೈನ್‌ ಮತ್ತು ಕೋಡಿಂಗ್‌ ಸರ್ವೀಸ್ ಅನ್ನು ಉಚಿತವಾಗಿಯೇ ನೀಡುತ್ತಿದ್ದೇವೆ,'' ಎನ್ನುತ್ತಾನೆ ರಾಜೇಶ್‌.

TNN & Agencies 17 Dec 2018, 8:45 am
ದುಬೈ : ಹದಿಮೂರು ವರ್ಷದ ಭಾರತೀಯ ಬಾಲಕನೊಬ್ಬ ದುಬೈನಲ್ಲಿ ಸ್ವಂತದ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಕಂಪನಿಯೊಂದನ್ನು ಆರಂಭಿಸಿದ್ದಾನೆ. 9ನೇ ವಯಸ್ಸಿನಲ್ಲಿಯೇ ಈ ಕಿಶೋರ, ಮೊದಲ ಮೊಬೈಲ್‌ ಆ್ಯಪ್‌ ರೂಪಿಸುವ ಮೂಲಕ ಟೆಕ್‌ ಜಗತ್ತಿನ ಗಮನ ಸೆಳೆದಿದ್ದ.
Vijaya Karnataka Web Kishor


ಕೇರಳ ಮೂಲದ ಆದಿತ್ಯನ್‌ ರಾಜೇಶ್‌ ಎನ್ನುವ ಬಾಲಕ, 'ಟ್ರೈನೆಟ್‌ ಸಲೂಷನ್ಸ್‌' ಕಂಪನಿಯನ್ನು ದುಬೈನಲ್ಲಿ ಆರಂಭಿಸಿದ್ದು ಆತನ ಮೂವರು ಸ್ನೇಹಿತರು/ಸಹಪಾಠಿಗಳೇ ಉದ್ಯೋಗಿಗಳು. ಈ ಕಂಪನಿಗೆ 12ಕ್ಕೂ ಅಧಿಕ ಕ್ಲೈಂಟ್‌ಗಳೂ ಇದ್ದಾರೆ.

''ಹದಿನೆಂಟು ವರ್ಷ ಮುಗಿದಾಗ ಅಧಿಕೃತವಾಗಿ ನಾನು ಕಂಪನಿಯ ಮಾಲೀಕನಾಗುತ್ತೇನೆ. ಆದರೂ, ನಾವು ಕಂಪನಿಯಂತೆಯೇ ಕೆಲಸ ಮಾಡುತ್ತಿದ್ದೇವೆ. ಹನ್ನೆರಡಕ್ಕೂ ಅಧಿಕ ಕ್ಲೈಂಟ್‌ಗಳಿದ್ದು, ಡಿಸೈನ್‌ ಮತ್ತು ಕೋಡಿಂಗ್‌ ಸರ್ವೀಸ್ ಅನ್ನು ಉಚಿತವಾಗಿಯೇ ನೀಡುತ್ತಿದ್ದೇವೆ,'' ಎನ್ನುತ್ತಾನೆ ರಾಜೇಶ್‌.

ಗ್ರಾಹಕರಿಗೆ ಲೋಗೊಗಳು ಮತ್ತು ವೆಬ್‌ಸೈಟ್‌ ಅನ್ನು ಇವರ ಕಂಪನಿ ವಿನ್ಯಾಸ ಮಾಡಿ ಕೊಡುತ್ತಿದೆ.

ನಾನು ಕೇರಳದ ತಿರುವಿಲ್ಲಾದಲ್ಲಿ ಜನಿಸಿದೆ. ನಾನು 5ನೇ ವಯಸ್ಸಿನಲ್ಲಿದ್ದಾಗಲೇ ಕುಟುಂಬವು ದುಬೈಗೆ ವಲಸೆ ಬಂತು. ಮಕ್ಕಳು ಟೈಪಿಂಗ್‌ ಕಲಿಯಲು ನೆರವಾಗುವ ಬಿಬಿಸಿ ಟೈಪಿಂಗ್‌ ವೆಬ್‌ಸೈಟ್‌ ಅನ್ನು ಮೊದಲ ಸಲ ನಮ್ಮ ತಂದೆ ತೋರಿಸಿದರು. ಇದೇ ನಾನು ನೋಡಿದ ಮೊದಲ ಜಾಲತಾಣ. ಬೇಸರ ಕಳೆಯಲು ಸಾಫ್ಟ್‌ವೇರ್‌ನತ್ತ ಮುಖ ಮಾಡಿದೆ. ಆಟದಂತೆ ಕಲಿಯುತ್ತಲೇ ಹೋದೆ..-ಆದಿತ್ಯನ್‌ ರಾಜೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ