ಆ್ಯಪ್ನಗರ

ಮುಂಬಯಿ: 2,000 ಕೋಟಿ ರೂ. ಹಗರಣ ಪತ್ತೆ

ಮುಂಬಯಿನ ಪ್ರಖ್ಯಾತ ವಜ್ರದ ವ್ಯಾಪಾರದ ತಾಣ, ಭಾರತ್‌ ಡೈಮಂಡ್‌ ಬೋರ್ಸ್‌ (ಬಿಡಿಬಿ) ಕೇಂದ್ರದಲ್ಲಿ 2,000 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಯ ಜಾಲವನ್ನು ಕಂದಾಯ ವಿಚಕ್ಷಣ ನಿರ್ದೇಶನಾಲಯ ಪತ್ತೆ ಹಚ್ಚಿದೆ.

Vijaya Karnataka 14 Jul 2018, 9:50 am
ಮುಂಬಯಿ: ಮುಂಬಯಿನ ಪ್ರಖ್ಯಾತ ವಜ್ರದ ವ್ಯಾಪಾರದ ತಾಣ, ಭಾರತ್‌ ಡೈಮಂಡ್‌ ಬೋರ್ಸ್‌ (ಬಿಡಿಬಿ) ಕೇಂದ್ರದಲ್ಲಿ 2,000 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಯ ಜಾಲವನ್ನು ಕಂದಾಯ ವಿಚಕ್ಷಣ ನಿರ್ದೇಶನಾಲಯ ಪತ್ತೆ ಹಚ್ಚಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
Vijaya Karnataka Web Daimond


ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿನ ಬಿಡಿಬಿ ಕೇಂದ್ರಕ್ಕೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದಾಗ ಈ ಹಗರಣ ಬಯಲಾಗಿದೆ. ದುಬೈ, ಹಾಂಕಾಂಗ್‌ ಇತ್ಯಾದಿ ಕಡೆಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಕಳಪೆ ಕಚ್ಚಾ ವಜ್ರಗಳಿಗೆ ಭಾರಿ ಮೌಲ್ಯವನ್ನು ನಿಗದಿಪಡಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಅಧಿಕಾರಿಗಳಿಗೆ, ಇದರ ಹಿಂದೆ ಅಂದಾಜು 2,000 ಕೋಟಿ ರೂ. ಮೌಲ್ಯದ ಅಕ್ರಮ ವರ್ಗಾವಣೆಯ ವಂಚನೆ ನಡೆದಿರುವುದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ