ಆ್ಯಪ್ನಗರ

14 ವರ್ಷಗಳಲ್ಲಿ ಬಡತನ ರೇಖೆಯಿಂದ ಮೇಲೆದ್ದ 30 ಕೋಟಿ ಭಾರತೀಯರು!

14 ವರ್ಷಗಳಲ್ಲಿಸುಮಾರು 30 ಕೋಟಿ ಭಾರತೀಯರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತಲಾಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಹೇಳಿದ್ದಾರೆ.

Vijaya Karnataka 7 Oct 2019, 8:42 am
ಹೈದರಾಬಾದ್‌: 2004 ಮತ್ತು 2018ರ ನಡುವಿನ 14 ವರ್ಷಗಳಲ್ಲಿ ಸುಮಾರು 30 ಕೋಟಿ ಭಾರತೀಯರನ್ನು ಬಡತನ ರೇಖೆಯಿಂದ ಮೇಲಕ್ಕೆ ಎತ್ತಲಾಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಹೇಳಿದ್ದಾರೆ.
Vijaya Karnataka Web indian


ಕಾರ್ಯಕ್ರಮವೊಂದರಲ್ಲಿಮಾತನಾಡಿದ ಅವರು, ''ದೇಶದಲ್ಲಿನ ಪ್ರತಿಯೊಬ್ಬ ಪೌರರು ಬಯೋಮೆಟ್ರಿಕ್‌ ಐಡಿ ಕಾರ್ಡ್‌, ಮೊಬೈಲ್‌ ಫೋನ್‌ ಮತ್ತು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ. ಭಾರತದಲ್ಲಿನ ಮೊಬೈಲ್‌ ಡೇಟಾ ಇಂದು, ಅಮೆರಿಕ ಮತ್ತು ಚೀನಾ ಎರಡೂ ದೇಶಗಳಲ್ಲಿನ ಮೊಬೈಲ್‌ ಡೇಟಾಗಿಂತಲೂ ಹೆಚ್ಚಿನದಾಗಿದೆ,'' ಎಂದರು.

''ಭಾರತದಲ್ಲಿನ ಮೊಬೈಲ್‌ ಡೇಟಾ ದರವು ಇಂದು ಬಹಳ ಕಡಿಮೆ ಇದೆ. ಬ್ರಿಟನ್‌ಗೆ ಹೋಲಿಸಿದರೆ 10ನೇ ಒಂದು ಭಾಗ, ಅಮೆರಿಕಕ್ಕೆ ಹೋಲಿಸಿದರೆ 20ನೇ ಒಂದು ಭಾಗದಷ್ಟಿದೆ,'' ಎಂದು ಅಭಿಪ್ರಾಯಪಟ್ಟರು.

''ಕೃತಕ ಬುದ್ಧಿಮತ್ತೆ(ಎಐ), ಮೆಷಿನ್‌ ಲರ್ನಿಂಗ್‌ ಮತ್ತು ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ಗೆ ಸೆಮಿಕಂಡಕ್ಟರ್‌ ಉದ್ಯಮವು ಬೆನ್ನುಮೂಳೆಯಾಗಿದ್ದು, ಭಾರತವು ಈ ವಲಯದಲ್ಲಿ ಮುಂಚೂಣಿಯಲ್ಲಿದೆ. ಹೆಚ್ಚಿನ ಅವಕಾಶಗಳು ಪ್ರಸ್ತುತ ಸೃಷ್ಟಿಯಾಗುತ್ತಿವೆ,'' ಎಂದು ಕಾಂತ್‌ ವಿವರಿಸಿದರು.

ದೇಶದ ಕಾರ್ಪೊರೇಟ್‌ ತೆರಿಗೆ ದರವನ್ನು ಇತ್ತೀಚೆಗೆ ಗಣನೀಯವಾಗಿ ಇಳಿಸಲಾಗಿದೆ. ಅಮೆರಿಕ ಸೇರಿದಂತೆ ವಿಶ್ವದಯಾವುದೇ ದೇಶಕ್ಕೆ ಹೋಲಿಸಿದರೂ ಭಾರತದ ದರವು ಹೆಚ್ಚು ಸ್ಪರ್ಧಾತ್ಮಕವಾಗಿದೆ.

ಡಿಜಿಟಲ್‌ ಪೇಮೆಂಟ್ಸ್‌ ಭಾರತದಲ್ಲಿಹೆಚ್ಚುತ್ತಿದ್ದು, ಸರಕಾರವು ತನ್ನ 600 ಯೋಜನೆಗಳ ಫಲಾನುಭವಿಗಳಿಗೆ ಹಣ ಪಾವತಿಸಲು ನೇರ ಹಣ ವರ್ಗಾವಣೆ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ