ಆ್ಯಪ್ನಗರ

ಸೆಪ್ಟೆಂಬರ್‌ 26ರಿಂದ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ

ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಸಿಬ್ಬಂದಿ ಈ ಮಾಸಾಂತ್ಯದಲ್ಲಿ ಮುಷ್ಕರ ನಡೆಸಲು ಮುಂದಾಗಿವೆ. ಸಾಲು ಸಾಲು ರಜೆ ಬರುವುದರಿಂದ ಗ್ರಾಹಕರು ತೀವ್ರ ತೊಂದರೆ ಎದುರಿಸಬೇಕಾಗಬಹುದು.

Vijaya Karnataka Web 19 Sep 2019, 7:27 pm
ಮುಂಬಯಿ: ಬ್ಯಾಂಕ್ ವಹಿವಾಟುಗಳು ಏನೇ ಇದ್ದರೂ ಜನರು ಮುಂದಿನ ವಾರದಲ್ಲಿ ಮುಗಿಸಿಕೊಳ್ಳುವುದು ಒಳಿತು. ಏಕೆಂದರೆ ಸಾಲು ಸಾಲು ರಜೆ ಬರಲಿದೆ.
Vijaya Karnataka Web ಬ್ಯಾಂಕ್‌ ಮುಷ್ಕರ
ಬ್ಯಾಂಕ್ ಮುಷ್ಕರ


ಸೆಪ್ಟೆಂಬರ್‌ 26ರಿಂದ ಐದು ದಿನ ಬ್ಯಾಂಕಿಂಗ್‌ ವ್ಯವಹಾರ ಕಷ್ಟಸಾಧ್ಯ.

ಏಕೆಂದರೆ, ಬ್ಯಾಂಕ್‌ ಮುಷ್ಕರ ಹಿನ್ನೆಲೆಯಲ್ಲಿ ಮಾಸಾಂತ್ಯ ಸುದೀರ್ಘ ರಜೆ ಇದೆ. ಸಾಲು ಸಾಲು ರಜೆಗಳಿಂದ ಚೆಕ್‌ ಕ್ಲಿಯರೆನ್ಸ್‌, ನಗದು-ಜಮೆ ಸೇರಿದಂತೆ ಬ್ಯಾಂಕಿಂಗ್‌ ವ್ಯವಹಾರಗಳಿಗೆ ಅಡಚಣೆಯಾಗಬಹುದು. ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೂ ತೊಡಕಾಗಿ, ಹಣದ ಕೊರತೆ ಉಂಟಾಗಬಹುದು.

ಸೆಪ್ಟೆಂಬರ್‌ 26, 27 ರಂದು ಬ್ಯಾಂಕ್‌ ಮುಷ್ಕರ ಇರಲಿದೆ. ಆ ನಂತರ 28, 29 ನಾಲ್ಕನೇ ಶನಿವಾರ, ಭಾನುವಾರ. ಅಂದು ಕಚೇರಿಗಳಿಗೆ ಬೀಗ.

ಇನ್ನು ಸೆಪ್ಟೆಂಬರ್‌ 30 ಬ್ಯಾಂಕ್‌ ವ್ಯವಹಾರದ ಅರ್ಧವಾರ್ಷಿಕ ದಿನ. ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಿದರೂ ಗ್ರಾಹಕರಿಗೆ ಯಾವುದೇ ಸೇವೆ ಲಭ್ಯವಿರುವುದಿಲ್ಲ.

ಹೀಗಾಗಿ ಮುಂಜಾಗ್ರತೆ ವಹಿಸಿಕೊಂಡು ಬ್ಯಾಂಕ್‌ ವಹಿವಾಟುಗಳನ್ನು ಆದಷ್ಟು ಬೇಗ ಮುಗಿಸಿಕೊಂಡರೆ ಕ್ಷೇಮ.

ಹೀಗಿದೆ ರಜಾ ದಿನಗಳು

ಸೆ.26, 27: ಬ್ಯಾಂಕ್‌ ಮುಷ್ಕರ

ಸೆ.28: ನಾಲ್ಕನೇ ಶನಿವಾರ

ಸೆ. 29: ಭಾನುವಾರ

ಸೆ.30: ಬ್ಯಾಂಕ್‌ ಅರ್ಧ ವಾರ್ಷಿಕ ದಿನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ