ಆ್ಯಪ್ನಗರ

ಶೇ.5ರ ಜಿಡಿಪಿ ಕುಸಿತ ದೊಡ್ಡ ಅಚ್ಚರಿ ತಂದಿದೆ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್

ದೇಶದ ಜಿಡಿಪಿ ಜೂನ್‌ ತ್ರೈಮಾಸಿಕದಲ್ಲಿಶೇ5ಕ್ಕೆ ಕುಸಿದಿರುವುದು ರಿಸವ್‌ರ್‍ ಬ್ಯಾಂಕ್‌ ಪಾಲಿಗೆ ದೊಡ್ಡ ಅಚ್ಚರಿ. ಇದನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಹೇಳಿದ್ದಾರೆ.

Vijaya Karnataka Web 16 Sep 2019, 9:42 pm
ಹೊಸದಿಲ್ಲಿ: ದೇಶದ ಜಿಡಿಪಿ ಜೂನ್‌ ತ್ರೈಮಾಸಿಕದಲ್ಲಿಶೇ.5ಕ್ಕೆ ಕುಸಿದಿರುವುದು ರಿಸವ್‌ರ್‍ ಬ್ಯಾಂಕ್‌ ಪಾಲಿಗೆ ದೊಡ್ಡ ಅಚ್ಚರಿ. ಈ ಅವಧಿಯಲ್ಲಿ ಶೇ.5.8ರ ಜಿಡಿಪಿಯನ್ನು ನಿರೀಕ್ಷೆ ಮಾಡಿದ್ದೆವು. ಆದರೆ, ಜಿಡಿಪಿ ಇಷ್ಟೊಂದು ಕುಸಿಯುತ್ತದೆಯೆಂದು ನಿರೀಕ್ಷಿಸಿರಲಿಲ್ಲ. ನಾವು ಎಲ್ಲಿತಪ್ಪು ಮಾಡಿದ್ದೇವೆ, ಏನು ಮತ್ತು ಎಲ್ಲಿತಪ್ಪಾಗಿದೆ ಎನ್ನುವ ಬಗ್ಗೆ ಪರಾಮರ್ಶೆ ಮಾಡುತ್ತಿದ್ದೇವೆ.
Vijaya Karnataka Web ಶಕ್ತಿಕಾಂತ ದಾಸ್‌
ಶಕ್ತಿಕಾಂತ ದಾಸ್‌


- ಜಿಡಿಪಿ ಕುಸಿತದ ಬಗ್ಗೆ ಇಟಿನೌಗೆ ನೀಡಿದ ಸಂದರ್ಶನದಲ್ಲಿಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ ಮಾತುಗಳಿವು. ''ಕಳೆದ ಫೆಬ್ರವರಿಯಲ್ಲಿಯೇ ಆರ್ಥಿಕ ಮಂದಗತಿಯನ್ನು ಆರ್‌ಬಿಐ ಗುರುತಿಸಿತ್ತು. ಹೀಗಾಗಿಯೇ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಮತ್ತು ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿರೆಪೊ ದರದಲ್ಲಿಶೇ.0.25 ಬಡ್ಡಿ ದರವನ್ನು ಕಡಿತ ಮಾಡಿದ್ದೆವು,'' ಎಂದು ದಾಸ್‌ ಹೇಳಿದ್ದಾರೆ. ''ಆರ್‌ಬಿಐನ ಹಣದುಬ್ಬರದ ಮುನ್ನೋಟವು ಬಹುತೇಕ ಸರಿಯಾಗಿಯೇ ಇದೆ. ಜಿಡಿಪಿಯನ್ನು ಕರಾರುವೊಕ್ಕಾಗಿ ಅಂದಾಜು ಮಾಡಲು ನಾವು ಆದ್ಯತೆ ನೀಡಿದ್ದೇವೆ. ಜಿಡಿಪಿ ಲೆಕ್ಕಾಚಾರದ ಪದ್ಧತಿಗಳನ್ನೂ ಸುಧಾರಿಸಲಿದ್ದೇವೆ. ಜಿಡಿಪಿ ಬೆಳವಣಿಗೆಯ ಮುನ್ನೋಟದ ವಿಷಯವನ್ನು ಮುಂದಿನ ಸಭೆಯಲ್ಲಿಆರ್‌ಬಿಐನ ಆರ್ಥಿಕ ಪರಾಮರ್ಶೆ ಸಮಿತಿಯು ಪರಾಮರ್ಶಿಸಲಿದೆ'' ಎಂದಿದ್ದಾರೆ.

''ಜಿಡಿಪಿ ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆ ಆರ್‌ಬಿಐಗೆ ಇದೆಯೇ?'' ಎನ್ನುವ ಪ್ರಶ್ನೆಗೆ, ಚೇತರಿಕೆಗೆ ನಿರ್ದಿಷ್ಟ ಕಾಲಮಿತಿ ಹೇಳಲು ನಿರಾಕರಿಸಿದರು. ''ನಾವು ಎರಡನೇ ತ್ರೈಮಾಸಿಕದ ಅಂಕಿಅಂಶಗಳನ್ನು ನೋಡುತ್ತೇವೆ. ಆರ್ಥಿಕ ಮಂದಗತಿಯು ಮುಂದುವರಿಯಲಿದೆಯೇ ಎಂದು ಲೆಕ್ಕಾಚಾರ ಮಾಡಲಿದ್ದೇವೆ'' ಎಂದು ದಾಸ್‌ ಹೇಳಿದ್ದಾರೆ. ಸರಕಾರ ಕೈಗೊಂಡಿರುವ ಕ್ರಮಗಳಿಂದಾಗಿ ಆರ್ಥಿಕತೆಯು ಚೇತರಿಸಿಕೊಳ್ಳುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ಬೇಕು

''ಆರ್ಥಿಕ ವ್ಯವಹಾರಗಳು ಸಹಜವಾಗಿ ನಡೆಯುತ್ತಿಲ್ಲ. ಆರ್ಥಿಕತೆ ಉತ್ತೇಜನಕ್ಕೆ ಮತ್ತಷ್ಟು ಕ್ರಮಗಳು ಬೇಕು. ಹೀಗಾಗಿಯೇ ಆಗಸ್ಟ್‌ನಲ್ಲಿಶೇ.0.35ರಷ್ಟು ಬಡ್ಡಿ ಕಡಿತಕ್ಕೆ ಆರ್‌ಬಿಐ ಮುಂದಾಯಿತು'' ಎಂದು ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಆರ್ಥಿಕತೆ ಚೇತರಿಕೆಗೆ ಪೂರಕವಾಗಿ ಆರ್‌ಬಿಐ ಸತತ ನಾಲ್ಕು ಬಾರಿ ರಿಪೊ ದರವನ್ನು ಇಳಿಕೆ ಮಾಡಿದೆ. ರೆಪೊ ದರ ಒಟ್ಟು ಶೇ.1.10ರಷ್ಟು ಇಳಿಕೆಯಾಗಿದೆ. ಇದೇ ವೇಳೆ, ಖಾಸಗಿ ವಲಯದವರೂ ಸೇರಿದಂತೆ ಪ್ರತಿಯೊಬ್ಬರೂ ಆರ್ಥಿಕತೆ ಚೇತರಿಕೆಗೆ ಒತ್ತು ನೀಡಬೇಕು ಎಂದು ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ