ಆ್ಯಪ್ನಗರ

ಆಯುಷ್ಮಾನ್‌ ಭಾರತ್‌: ಎರಡನೇ ಸಲ ಚಿಕಿತ್ಸೆಗೆ ಆಧಾರ್‌ ಕಡ್ಡಾಯ

ಆಯುಷ್ಮಾನ್‌ ಭಾರತ್‌-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ(ಎಬಿ-ಪಿಎಂಜೆಎವೈ) ಮೊದಲ ಸಲ ಚಿಕಿತ್ಸೆ ಪಡೆಯಲು ಆಧಾರ್‌ ಕಡ್ಡಾಯ

Vijaya Karnataka 7 Oct 2018, 8:58 pm
ಹೊಸದಿಲ್ಲಿ : ಇತ್ತೀಚೆಗೆ ಆರಂಭಗೊಂಡಿರುವ ಆಯುಷ್ಮಾನ್‌ ಭಾರತ್‌-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ(ಎಬಿ-ಪಿಎಂಜೆಎವೈ) ಮೊದಲ ಸಲ ಚಿಕಿತ್ಸೆ ಪಡೆಯಲು ಆಧಾರ್‌ ಅಗತ್ಯವಿಲ್ಲ. ಒಂದು ವೇಳೆ, ನೀವು ಎರಡನೇ ಬಾರಿಗೆ ಚಿಕಿತ್ಸೆ ಪಡೆಯಬೇಕಾದರೆ ಆಧಾರ್‌ ಇರಲೇ ಬೇಕು.
Vijaya Karnataka Web ಆಧಾರ್‌ ಕಾರ್ಡ್‌
ಆಧಾರ್‌ ಕಾರ್ಡ್‌


ವಿಮೆ ಸುರಕ್ಷೆ ಕಲ್ಪಿಸುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಎಬಿ-ಪಿಎಂಜೆಎವೈ ಜಾರಿಯ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಿಇಒ ಇಂದೂ ಭೂಷಣ್‌, ಆಧಾರ್‌ ಕಡ್ಡಾಯದ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ''ನಾವು ಸುಪ್ರೀಂ ಕೋರ್ಟ್‌ ಆದೇಶವನ್ನು ಅಧ್ಯಯನ ಮಾಡುತ್ತಿದ್ದೇವೆ. ಎಬಿ-ಪಿಎಂಜೆಎವೈ ಫಲಾನುಭವಿಗಳು ಎರಡನೇ ಸಲ ಚಿಕಿತ್ಸೆ ಪಡೆವ ಸಂದರ್ಭದಲ್ಲಿ 12 ಅಂಕಿಗಳ ಆಧಾರ್‌ ಅಥವಾ ನೋಂದಣಿ ಮಾಡಿಸಿದ ದಾಖಲೆಗಳನ್ನಾದರೂ ನೀಡಬೇಕು. ಇದು ಕಡ್ಡಾಯ,'' ಎಂದು ಭೂಷಣ್‌ ಹೇಳಿದ್ದಾರೆ.

'ಆಯುಷ್ಮಾನ್‌ ಭಾರತ- ರಾಷ್ಟ್ರೀಯ ಆರೋಗ್ಯ ಸಂರಕ್ಷ ಣಾ ಅಭಿಯಾನ'ವನ್ನು 'ಆಯುಷ್ಮಾನ್‌ ಭಾರತ್‌- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ' ಎಂದು ಮರು ನಾಮಕರಣ ಮಾಡಿ, ಯೋಜನೆಗೆ ಜಾರ್ಖಂಡ್‌ನಲ್ಲಿ ಸೆ.23ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಏನು, ಎತ್ತ?

ಮೊದಲ ಸಲ ಚಿಕಿತ್ಸೆ ಪಡೆಯುವಾಗ ಆಧಾರ್‌ ಇಲ್ಲದೇ ಹೋದರೂ ಚಿಂತೆಯಿಲ್ಲ. ಮತದಾರರ ಗುರುತಿನ ಚೀಟಿ ಅಥವಾ ದೃಢೀಕರಣದ ಯಾವುದಾದರೂ ದಾಖಲೆ ನೀಡಿದರೆ ಸಾಕು.

ಎರಡನೇ ಸಲ ಚಿಕಿತ್ಸೆ ಪಡೆಯುವಾಗ ಆಧಾರ್‌ ಅಥವಾ ಆಧಾರ್‌ ನೋಂದಣಿಗೆ ಸಂಬಂಧಿಸಿದ ದಾಖಲೆ ಅತ್ಯಗತ್ಯ.

ಆಯುಷ್ಮಾನ್‌ ಭಾರತ್‌-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ(ಎಬಿ-ಪಿಎಂಜೆಎವೈ) ಈ ತನಕ ಸುಮಾರು 47 ಸಾವಿರ ಜನರು ಅನುಕೂಲ ಪಡೆದುಕೊಂಡಿದ್ದಾರೆ. 92 ಸಾವಿರ ಜನರಿಗೆ ಗೋಲ್ಡ್‌ ಕಾರ್ಡ್‌ ನೀಡಲಾಗಿದೆ.

ಯೋಜನೆಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷ ವಿಮೆ ರಕ್ಷೆ ಸಿಗಲಿದೆ. ಪೇಪರ್‌ರಹಿತ, ನಗದುರಹಿತ ಸೇವೆಗಳು ಲಭ್ಯ.

10.74 ಕೋಟಿಗೂ ಅಧಿಕ ಬಡ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ರಕ್ಷೆ

ತೆಲಂಗಾಣ, ಒಡಿಶಾ, ದಿಲ್ಲಿ ಮತ್ತು ಕೇರಳ ರಾಜ್ಯಗಳು ಯೋಜನೆಯಿಂದ ಹೊರಗುಳಿದಿವೆ.

ಕರ್ನಾಟಕ ರಾಜ್ಯವು ಸಮ್ಮತಿಸಿದೆ. ಆದರೆ, ಯೋಜನೆ ಇನ್ನೂ ಜಾರಿಗೆ ಬಂದಿಲ್ಲ.

ಯೋಜನೆಯ ಶೇ.98ರಷ್ಟು ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ