ಆ್ಯಪ್ನಗರ

12,000 ಕೋಟಿ ರೂ.ಗೆ ಕೃಷ್ಣಪಟ್ಣಂ ಬಂದರು ಖರೀದಿಸಿದ ಗೌತಮ್‌ ಅದಾನಿ

2025ರ ಹೊತ್ತಿಗೆ 500 ಮಿಲಿಯನ್‌ ಮೆಟ್ರಿಕ್‌ ಟನ್‌ ಸರಕು ನಿರ್ವಹಣೆಯ ಗುರಿಯನ್ನು ಗೌತಮ್‌ ಅದಾನಿ ಒಡೆತನದ ಅದಾನಿ ಪೋರ್ಟ್ಸ್‌ ಹಾಕಿಕೊಂಡಿದ್ದು, ಇದೇ ದಿಸೆಯಲ್ಲಿ ಇದೀಗ ಕೃಷ್ಣಪಟ್ಣಂ ಬಂದರನ್ನು ಖರೀದಿಸಿದೆ.

Agencies 6 Oct 2020, 6:07 pm
ಹೈದರಾಬಾದ್‌: ಉದ್ಯಮಿ ಗೌತಮ್‌ ಅದಾನಿ ಒಡೆತನದ 'ಅದಾನಿ ಪೋರ್ಟ್ಸ್‌ ಆಂಡ್‌ ಸ್ಪೆಷಲ್‌ ಎಕಾನಾಮಿಕ್‌ ಝೋನ್‌ ಲಿ.' ಆಂಧ್ರ ಪ್ರದೇಶದ ಪ್ರಮುಖ ಬಂದರು 'ಕೃಷ್ಣಪಟ್ಣಂ ಪೋರ್ಟ್‌ ಕೊ.ಲಿ. (ಕೆಪಿಸಿಎಲ್‌)'ನ ಶೇ. 75ರಷ್ಟು ಷೇರುಗಳನ್ನು 12,000 ಕೋಟಿ ರೂಪಾಯಿಗೆ ಖರೀದಿಸಿದೆ.
Vijaya Karnataka Web gautam-adani


ಸಿವಿಆರ್‌ ಗ್ರೂಪ್‌ ಮತ್ತು ಇತರ ಹೂಡಿಕೆದಾರರಿಂದ ಬಂದರನ್ನು ಖರೀದಿಸಿರುವುದಾಗಿ ಅದಾನಿ ಗ್ರೂಪ್ ಬಾಂಬೆ ಷೇರು ಮಾರುಕಟ್ಟೆಗೆ ತಿಳಿಸಿದೆ. ‌

ಜನವರಿಯಲ್ಲಿಯೇ ಅದಾನಿ ಗ್ರೂಪ್‌ ಕೃಷ್ಣಪಟ್ಣಂ ಬಂದರನ್ನು 13.500 ಕೋಟಿ ರೂಪಾಯಿಗೆ ಖರೀದಿಸುವುದಾಗಿ ಹೇಳಿತ್ತು. ಇದಿಗ 12,000 ಕೋಟಿ ರೂಪಾಯಿಗೆ ಶೇ.75ರಷ್ಟು ಷೇರುಗಳನ್ನು ಖರೀದಿಸಲಾಗಿದೆ. ಆಂತರಿಕ ಸಂಚಯ ನಿಧಿ ಮತ್ತು ಕೈಯಲ್ಲಿರುವ ನಗದಿನ ಮೂಲಕ ಈ ಖರೀದಿ ನಡೆಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಕೆಪಿಸಿಎಲ್‌ ಆಂಧ್ರ ಪ್ರದೇಶ ಕರಾವಳಿಯ ದಕ್ಷಿಣ ಭಾಗದಲ್ಲಿದ್ದು, ಬಹು ಸರಕು ಸೌಲಭ್ಯ ಹೊಂದಿರುವ ಬಂದರು ಇದಾಗಿದೆ. 2019-20ರಲ್ಲಿ ಈ ಬಂದರಿನ ಮೂಲಕ 54 ಮಿಲಿಯನ್‌ ಮೆಟ್ರಿಕ್‌ ಟನ್‌ ಸರಕುಗಳನ್ನು ನಿರ್ವಹಿಸಲಾಗಿದೆ.

ಈ ಖರೀದಿಯೊಂದಿಗೆ 2025ಕ್ಕೆ 500 ಮಿಲಿಯನ್‌ ಮೆಟ್ರಿಕ್‌ ಟನ್‌ ಸರಕು ನಿರ್ವಹಣೆ ಸಾಮರ್ಥ್ಯವನ್ನು ಪಡೆಯುವ ಗುರಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೇವೆ ಎಂದು ಅದಾನಿ ಕಂಪನಿ ಹೇಳಿದೆ. ಇದೇ ಬಂದರಿನ ಮೂಲಕ 2025ರ ಹೊತ್ತಿಗೆ 100 ಮಿಲಿಯನ್‌ ಮೆಟ್ರಿಕ್‌ ಟನ್‌ ಸರಕುಗಳನ್ನು ನಿರ್ವಹಿಸುವ ಗುರಿಯನ್ನೂ ಕಂಪನಿ ಹಾಕಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ