ಆ್ಯಪ್ನಗರ

ನೋಟು ಅಮಾನ್ಯತೆಯ 3 ವರ್ಷದ ಬಳಿಕ ‘ಭ್ರಷ್ಟ’ ಜ್ಯುವೆಲರ್ಸ್‌ಗಳಿಗೆ ಎದುರಾಗಿದ ಭೀತಿ!

2016ರ ನೋಟು ಅಮಾನ್ಯತೆಯ ಬಳಿಕ ಬ್ಯಾಂಕ್‌ಗಳಿಗೆ ಭಾರಿ ನಗದು ಜಮೆ ಮಾಡಿದ್ದ ಜ್ಯುವೆಲ್ಲರ್ಸ್ ವಿರುದ್ಧ ತನಿಖೆ ಚುರುಕುಗೊಳಿಸಲಾಗಿದೆ. ನಗದು ಮೂಲವನ್ನು ವಿವರಿಸುವಲ್ಲಿ ವಿಫಲರಾಗಿರುವ ಜ್ಯುವೆಲರ್ಸ್‌ಗಳು ಈಗ ಪಜೀತಿಗೆ ಬಿದ್ದಿದ್ದಾರೆ.

Vijaya Karnataka Web 23 Jan 2020, 3:43 pm
ಹೊಸದಿಲ್ಲಿ: ನೋಟು ಅಮಾನ್ಯತೆಯ ಮೂರು ವರ್ಷಗಳ ಬಳಿಕ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ಭ್ರಷ್ಟ ಜ್ಯುವೆಲರ್ಸ್ ವಿರುದ್ಧ ತನಿಖೆ ತೀವ್ರಗೊಳಿಸಿದ್ದಾರೆ.
Vijaya Karnataka Web demonetization


2016ರಲ್ಲಿನೋಟು ಅಮಾನ್ಯತೆ ಬಳಿಕ ಭಾರಿ ಮೊತ್ತದ ನಗದನ್ನು ಬ್ಯಾಂಕ್‌ಗಳಿಗೆ ಜಮೆ ಮಾಡಿದ್ದ, ಆದರೆ ಐಟಿಆರ್‌ನಲ್ಲಿ ಕಡಿಮೆ ಆದಾಯ ತೋರಿಸಿರುವ ಮತ್ತು ಭಾರಿ ನಗದು ಜಮೆಯ ಮೂಲದ ಬಗ್ಗೆ ಸೂಕ್ತ ವಿವರಣೆಯನ್ನು ನೀಡುವಲ್ಲಿ ವಿಫಲರಾಗಿರುವ ಜ್ಯುವೆಲರ್ಸ್ಗಳ ವಿರುದ್ಧ ತನಿಖೆ ಚುರುಕಾಗಿದೆ.

ಉದಾಹರಣೆಗೆ ಜ್ಯುವೆಲ್ಲರ್‌ ಒಬ್ಬರು ನೋಟು ಅಮಾನ್ಯತೆಯಾದ ಮೂರೇ ದಿನಗಳಲ್ಲಿ4.1 ಕೋಟಿ ರೂ.ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರು. ಆದರೆ ಅವರು ಐಟಿಆರ್‌ನಲ್ಲಿಆದಾಯವನ್ನು 1.2 ಲಕ್ಷ ರೂ. ಎಂದು ತಿಳಿಸಿದ್ದರು.

ನಗದು ಬಳಕೆ ಇಳಿಕೆ, ನಕಲಿ ಕರೆನ್ಸಿ, ಭಯೋತ್ಪಾದನೆಗೆ ಹಣಕಾಸು ತಡೆ: ನೋಟು ಅಮಾನ್ಯತೆಯ ಸಾಧನೆಗಳು

ಮತ್ತೊಂದು ಪ್ರಕರಣದಲ್ಲಿ ಜ್ಯುವೆಲ್ಲರ್‌ ಒಬ್ಬರು ತಮ್ಮ ಆದಾಯವನ್ನು 2.7 ಲಕ್ಷ ರೂ. ಎಂದು ತಿಳಿಸಿದ್ದರೂ, ನೋಟು ಅಮಾನ್ಯತೆಯ ಎರಡನೇ ದಿನಕ್ಕೆ 3.3 ಕೋಟಿ ರೂ. ಜಮೆ ಮಾಡಿದ್ದರು.

ಮೂರನೇ ಪ್ರಕರಣದಲ್ಲಿ ವಾರ್ಷಿಕ 26 ಲಕ್ಷ ರೂ. ಆದಾಯ ಇದೆ ಎಂದು ತಿಳಿಸಿದ್ದ ಜ್ಯುವೆಲ್ಲರ್‌, 2016ರ ನವೆಂಬರ್‌ 5 ಮತ್ತು 8ರ ನಡುವೆ 573 ಮಂದಿಯಿಂದ 9.6 ಕೋಟಿ ರೂ. ನಗದು ಮುಂಗಡ ಪಡೆದಿರುವುದಾಗಿ ತಿಳಿಸಿದ್ದರು. ಆದರೆ, ಈ ವ್ಯಕ್ತಿಗಳ ವಿಳಾಸ ಅಥವಾ ದೂರವಾಣಿ ಸಂಪರ್ಕ ಸಂಖ್ಯೆ ನೀಡುವಲ್ಲಿ ವಿಫಲರಾಗಿದ್ದರು.

ನೋಟು ಅಮಾನ್ಯೀಕರಣ ಆರ್ಥಿಕತೆ ಮೇಲಾದ ಭಯೋತ್ಪಾದಕ ದಾಳಿ : ರಾಹುಲ್‌ ಗಾಂಧಿ ವಾಗ್ದಾಳಿ

ಬಹುತೇಕ ಜ್ಯುವೆಲ್ಲರ್‌ಗಳು ನೋಟು ಅಮಾನ್ಯತೆಯ ವೇಳೆ ಬ್ಯಾಂಕ್‌ನಲ್ಲಿಇಟ್ಟಿದ್ದ ಭಾರಿ ಠೇವಣಿಯ ಮೂಲವನ್ನು ತಿಳಿಸುವಲ್ಲಿ ವಿಫಲರಾಗಿದ್ದಾರೆ. 2017-18ರ ಮೌಲ್ಯಮಾಪನ ವರ್ಷದ ರಿಟರ್ನ್ಸ್‌ ಪರಿಶೀಲನೆಯಿಂದ ಇದು ಗೊತ್ತಾಗಿದೆ. ಪ್ರಕರಣವೊಂದರಲ್ಲಿ ಕೋಟಿಗಟ್ಟಲೆ ಬಿಸಿನೆಸ್‌ ದಾಖಲಿಸಿದ ಚಿನ್ನದ ವ್ಯಾಪಾರಿಯ ವಿದ್ಯುತ್‌ ಬಿಲ್‌ ಕೇವಲ 1,500 ರೂ.ಗಿಂತಲೂ ಕಡಿಮೆ ಇತ್ತು!

ಗುಜರಾತ್‌ ಮೂಲದ ಜ್ಯುವೆಲ್ಲರ್‌ ಒಬ್ಬರು ನೋಟು ಅಮಾನ್ಯತೆ ಘೋಷಣೆಯಾದ 2016ರ ನವೆಂಬರ್‌ 8ರಂದು 4.1 ಕೋಟಿ ರೂ. ನಗದು ಜಮೆ ಮಾಡಿದ್ದರು. ಆದರೆ 2015ರ ಇದೇ ಅವಧಿಯಲ್ಲಿಅವರು ಕೇವಲ 44,260 ರೂ. ಠೇವಣಿ ಇರಿಸಿದ್ದರು. ಇಂಥ ಸಂಶಯಾಸ್ಪದ ಪ್ರಕರಣಗಳನ್ನು ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ