ಆ್ಯಪ್ನಗರ

ಏರ್‌ ಇಂಡಿಯಾದ 4,500 ಸಿಬ್ಬಂದಿಗೆ ವಿಆರ್‌ಎಸ್‌ ಸಂಭವ, ಕಂಪನಿ ಗಟ್ಟಿಗೊಳಿಸಲು ಟಾಟಾ ತಂತ್ರ

ನಷ್ಟದಿಂದ ತತ್ತರಿಸಿದ್ದ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಟಾಟಾ ಗ್ರೂಪ್‌, ಹೊಸ ತಂತ್ರಗಾರಿಕೆಯ ಮೂಲಕ ಕಂಪನಿಯನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದ್ದು, ಉದ್ಯೋಗಿಗಳಿಗೆ ವಿಆರ್‌ಎಸ್‌ ಆಯ್ಕೆಯನ್ನು ನೀಡಿದೆ.

Vijaya Karnataka Web 22 Jul 2022, 9:50 am

ಹೈಲೈಟ್ಸ್‌:

  • ಏರ್‌ ಇಂಡಿಯಾದಲ್ಲಿ ಸ್ವಯಂ ನಿವೃತ್ತಿ ಯೋಜನೆಯನ್ನು ಪ್ರಕಟಿಸಿದ ಹೊಸ ಮ್ಯಾನೇಜ್‌ಮೆಂಟ್‌
  • ಸ್ವಯಂ ನಿವೃತ್ತಿ ಯೋಜನೆಗೆ 4,500 ಮಂದಿ ಒಲವು
  • ನಷ್ಟದಿಂದ ತತ್ತರಿಸಿದ್ದ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿರುವ ಟಾಟಾ ಗ್ರೂಪ್‌
  • ಹೊಸ ತಂತ್ರಗಾರಿಕೆಯ ಮೂಲಕ ಕಂಪನಿಯನ್ನು ಗಟ್ಟಿಗೊಳಿಸಲು ಯತ್ನಿಸುತ್ತಿರುವ ಟಾಟಾ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Air India flight
ಹೊಸದಿಲ್ಲಿ: ಏರ್‌ ಇಂಡಿಯಾದ ಹೊಸ ಮ್ಯಾನೇಜ್‌ಮೆಂಟ್‌ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಪ್ರಕಟಿಸಿದ್ದು, 4,500 ಮಂದಿ ಒಲವು ತೋರಿದ್ದಾರೆ.
ನಷ್ಟದಿಂದ ತತ್ತರಿಸಿದ್ದ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾವನ್ನು ಟಾಟಾ ಗ್ರೂಪ್‌ ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು, ಹೊಸ ತಂತ್ರಗಾರಿಕೆಯ ಮೂಲಕ ಕಂಪನಿಯನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದೆ. ವಿಆರ್‌ಎಸ್‌ನಿಂದ ತೆರವಾಗುವ ಹುದ್ದೆಗಳಿಗೆ ಯುವ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಲು ಟಾಟಾ ಮಾಲಿಕತ್ವದ 'ಏರ್‌ ಇಂಡಿಯಾ' ಹೊರಟಿದೆ.

ವೆಚ್ಚ ಇಳಿಕೆ, ಉತ್ಪಾದಕತೆ ಹೆಚ್ಚಳ, ಡಿಜಿಟಲ್‌ ಸಂಸ್ಕೃತಿ ಮೂಲಕ ಏರ್‌ ಇಂಡಿಯಾವನ್ನು ಉನ್ನತೀಕರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಏರ್‌ ಇಂಡಿಯಾ ಸಿಬ್ಬಂದಿಗೆ ಕೊರೊನಾ ಪೂರ್ವ ವೇತನ, ಟಾಟಾದ ನಿರ್ಧಾರದಿಂದ ಸಿಬ್ಬಂದಿ ನಿಟ್ಟುಸಿರು
ಏರ್‌ ಇಂಡಿಯಾವನ್ನು ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ 13,000 ಉದ್ಯೋಗಿಗಳಿದ್ದರು. ಇದರಲ್ಲಿ 8,000 ಕಾಯಂ ಉದ್ಯೋಗಿಗಳಾಗಿದ್ದರು. ಉಳಿದವರು ಗುತ್ತಿಗೆ ನೌಕರರು.

ಯಾರಿಗೆ ವಿಆರ್‌ಎಸ್‌?

ಕಳೆದ ಜೂನ್‌ನಲ್ಲಿಯೇ ವಿಆರ್‌ಎಸ್‌ ಪಡೆಯುವ ಆಯ್ಕೆಯನ್ನು ಏರ್‌ ಇಂಡಿಯಾ ತನ್ನ ಕಾಯಂ ಉದ್ಯೋಗಿಗಳಿಗೆ ನೀಡಿತು. 55 ವರ್ಷದ ಕಾಯಂ ಉದ್ಯೋಗಿಗಳಿಗೆ ವಿಆರ್‌ಎಸ್‌ ಆಯ್ಕೆಯನ್ನು ನೀಡಲಾಗಿತ್ತು. ಬಳಿಕ ವಿಆರ್‌ಎಸ್‌ ಅರ್ಹತೆಯನ್ನು 40 ವರ್ಷಕ್ಕೆ ಇಳಿಸಲಾಯಿತು. ಇದರಿಂದ ಇನ್ನಷ್ಟು ನೌಕರರು ವಿಆರ್‌ಎಸ್‌ಗೆ ಒಲವು ತೋರಿಸಿದ್ದಾರೆ.

ಕೆಲಸಕ್ಕೆ ಚಕ್ಕರ್‌, ಏರ್‌ ಇಂಡಿಯಾ ನೇಮಕಾತಿಗೆ ಹಾಜರ್‌, ಇಂಡಿಗೋದ 55% ವಿಮಾನ ಕಾರ್ಯಾಚರಣೆ ಏರುಪೇರು!
ಏನಿದರ ಉದ್ದೇಶ?

ಸಂಸ್ಥೆಯಲ್ಲಿ ಹಳಬರ ಬದಲಿಗೆ, ಯುವ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವುದು ಟಾಟಾ ಗ್ರೂಪ್‌ ಮಾಲಿಕತ್ವದ ಏರ್‌ ಇಂಡಿಯಾ ಉದ್ದೇಶ. ಈ ಸ್ಥಾನಗಳಿಗೆ ಯುವ ಪ್ರತಿಭಾವಂತರನ್ನು ನೇಮಕ ಮಾಡಿಕೊಂಡು 'ಏರ್‌ ಇಂಡಿಯಾ'ವನ್ನು ಮತ್ತೆ ಗತ ವೈಭವದ ದಿನಗಳಿಗೆ ತರುವ ಯೋಜನೆಯನ್ನು ಟಾಟಾ ಸಮೂಹ ಹಾಕಿಕೊಂಡಿದೆ.

ಈಗಾಗಲೇ ಏರ್‌ ಇಂಡಿಯಾ ವಿಮಾನ ಸಿಬ್ಬಂದಿ ಸೇರಿ ಹಲವು ಹುದ್ದೆಗಳಿಗೆ ಆಕ್ರಮಣಕಾರಿ ರೀತಿಯಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಟಾಟಾದ ನೇಮಕ ಪ್ರಕ್ರಿಯೆಯಿಂದ ಉಳಿದ ಕಂಪನಿಗಳ ಮೇಲೂ ಅಗಾಧ ಒತ್ತಡ ಸೃಷ್ಟಿಯಾಗಿದ್ದು, ಕೈ ತುಂಬಾ ವೇತನ, ಸೌಲಭ್ಯಗಳನ್ನು ನೀಡುವ ಅನಿವಾರ್ಯತೆ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ