ಆ್ಯಪ್ನಗರ

ಜಾಗತಿಕ ಏರ್‌ಲೈನ್ಸ್‌ಗಳಲ್ಲಿ ಬಿಕ್ಕಟ್ಟು: ಸುರೇಶ್‌ ಪ್ರಭು

ಇದು ಏರ್‌ ಇಂಡಿಯಾ ಅಥವಾ ಜೆಟ್‌ ಏರ್‌ವೇಸ್‌ ಸಮಸ್ಯೆ ಮಾತ್ರವಲ್ಲ ಜಾಗತಿಕ ವಿಮಾನಯಾನ ವಲಯವು ನಷ್ಟದಿಂದ ತತ್ತರಿಸಿದೆ ಅದಕ್ಕೆ ಭಾರತವೂ ಹೊರತಾಗಿಲ್ಲ.

Vijaya Karnataka 16 Aug 2018, 9:17 am
Vijaya Karnataka Web suresh prabhu
ಹೊಸದಿಲ್ಲಿ: ಇದು ಏರ್‌ ಇಂಡಿಯಾ ಅಥವಾ ಜೆಟ್‌ ಏರ್‌ವೇಸ್‌ ಸಮಸ್ಯೆ ಮಾತ್ರವಲ್ಲ. ಜಾಗತಿಕ ವಿಮಾನಯಾನ ವಲಯವು ನಷ್ಟದಿಂದ ತತ್ತರಿಸಿದೆ. ಅದಕ್ಕೆ ಭಾರತವೂ ಹೊರತಾಗಿಲ್ಲ. ನಷ್ಟದ ಸವಾಲು ಜಗತ್ತಿನ ಮುಂದಿದೆ ಎಂದು ವಿಮಾನಯಾನ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.

ಏರ್‌ ಇಂಡಿಯಾಗೆ ತನ್ನ ಸಿಬ್ಬಂದಿಗೆ ಜುಲೈ ತಿಂಗಳ ವೇತನ ನೀಡಲು ಈ ತನಕ ಸಾಧ್ಯವಾಗಿಲ್ಲ. ಇತ್ತ ಜೆಟ್‌ ಏರ್‌ವೇಸ್‌ ಸಹ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ವಿಮಾನಯಾನ ವಲಯಕ್ಕೆ ಕಪ್ಪು ಮೋಡಗಳು ಕವಿದಿವೆ. ಈ ಬಗೆಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಜಾಗತಿಕ ಪ್ರಭಾವಗಳಿಂದ ವಿಮಾನ ಇಂಧನ ದರ ಏರುತ್ತಲೇ ಇದೆ. ಈ ನಷ್ಟವನ್ನು ಭರಿಸುವ ಶಕ್ತಿ ವಿಮಾನಯಾನ ಕಂಪನಿಗಳಿಗೆ ಇಲ್ಲ. ಜಿಎಸ್‌ಟಿ ವ್ಯಾಪ್ತಿಗೆ ಎಟಿಎಫ್‌ ಅನ್ನು ತಂದರೆ ದರ ಗಣನೀಯವಾಗಿ ತಗ್ಗುತ್ತದೆ,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ