ಆ್ಯಪ್ನಗರ

ತೈಲ ದರ ಇಳಿಕೆಗೆ ಕೇಂದ್ರದಿಂದ ಶೀಘ್ರದಲ್ಲೇ ಕ್ರಮ: ಅಮಿತ್‌ ಶಾ

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಶೀಘ್ರದಲ್ಲಿಯೇ ಕ್ರಿಯಾ ಯೋಜನೆಯೊಂದನ್ನು ಜಾರಿಗೊಳಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಶನಿವಾರ ಹೇಳಿದ್ದಾರೆ.

Vijaya Karnataka Web 15 Sep 2018, 9:59 pm
ಹೈದರಾಬಾದ್‌: ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಶೀಘ್ರದಲ್ಲಿಯೇ ಕ್ರಿಯಾ ಯೋಜನೆಯೊಂದನ್ನು ಜಾರಿಗೊಳಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಶನಿವಾರ ಹೇಳಿದ್ದಾರೆ.
Vijaya Karnataka Web New Delhi: BJP National President, Amit Shah gestures as he addresses the conclu...


ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಹಾಗೂ ತೈಲ ಬೆಲೆ ದಿನೇದಿನೆ ಏರಿಕೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಬಗ್ಗೆ ಜನತೆಯ ಆತಂಕ ನಮಗೆ ಅರ್ಥವಾಗುತ್ತಿದೆ. ಆದಷ್ಟು ಶೀಘ್ರ ಕೇಂದ್ರ ಸರಕಾರ ದರ ಇಳಿಕೆಗೆ ಸಂಬಂಧಿಸಿ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲಿದೆ ಎಂದರು.

ಹೈದರಾಬಾದ್‌ನಲ್ಲಿ ಸುದ್ದಿಗೋಷಿಯೊಂದರಲ್ಲಿ ಮಾತನಾಡಿದ ಶಾ, ಅಂತಾರಾಷ್ಟ್ರೀಉ ಮಾರುಕಟ್ಟೆಯಲ್ಲಿನ ಏರುಪೇರುಗಳ ಪರಿಣಾಮ ತೈಲ ದರ ಹೆಚ್ಚಳವಾಗಿದೆ. ಇದೇ ಸಂದರ್ಭ ರೂಪಾಯಿ ಮೌಲ್ಯ ಕೂಡ ಕುಸಿದಿದೆ. ಹೀಗಿದ್ದರೂ ಇತರ ಹಲವು ರಾಷ್ಟ್ರಗಳ ಕರೆನ್ಸಿಗಳೂ ಕುಸಿದಿವೆ. ಜನ ಪ್ರತಿಭಟನೆಗಿಳಿದಿರುವುದರ ಬಗ್ಗೆ ನಮಗೆ ಅರಿವು ಇದೆ. ಬಿಜೆಪಿ ಕೂಡ ದರ ಏರಿಕೆಗೆ ಚಿಂತಿತವಾಗಿದೆ ಎಂದರು.

ತೆಲಂಗಾಣದಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಅಮಿತ್‌ ಶಾ, ತೈಲ ದರ ಏರಿಕೆಯಿಂದ ಉಂಟಾಗಿರುವ ಪರಿಸ್ಥಿತಿಯ್ನು ವಿವರಿಸಿದರು. ಪೆಟ್ರೋಲ್‌ ದರ ಆಗಸ್ಟ್‌ 1ರಿಂದ ಶೇ.6 ಹಾಗೂ ಡೀಸೆಲ್‌ ದರ ಶೇ.8ರಷ್ಟು ವೃದ್ಧಿಸಿದೆ. ಮುಂಬಯಿನಲ್ಲಿ ಪೆಟ್ರೋಲ್‌ ದರ 89 ರೂ, ದಿಲ್ಲಿಯಲ್ಲಿ 81.63 ರೂ.ಗೆ ಏರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ