ಆ್ಯಪ್ನಗರ

ಎರಿಕ್‌ಸನ್‌ ಋಣಮುಕ್ತಿಗೆ ನೆರವಾದ ಅಣ್ಣ ಮುಕೇಶ್‌ಗೆ ಅನಿಲ್ ಅಂಬಾನಿ ಭಾವಪೂರ್ಣ ಕೃತಜ್ಞತೆ

ಮಾರ್ಚ್‌ 19ರ ಮೊದಲು ಸ್ವೀಡಿಶ್ ಟೆಲಿಕಾಂ ಕಂಪನಿ ಎರಿಕ್‌ಸನ್‌ಗೆ ಪಾವತಿಸಬೇಕಿರುವ 462 ಕೋಟಿ ರೂ.ಗಳ ಸಾಲ ಮರು ಪಾವತಿ ಮಾಡದಿದ್ದರೆ ಜೈಲಿಗೆ ಹೋಗಬೇಕಾದೀತು ಎಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಡುವಿಗೆ ಒಂದು ಮೊದಲೇ ಅಣ್ಣ ಮುಕೇಶ್ ಅಂಬಾನಿ, ತಮ್ಮ ಅನಿಲ್ ಅಂಬಾನಿ ಪರವಾಗಿ ಸಾಲ ಮರುಪಾವತಿ ಮಾಡಿದ್ದಾರೆ.

Vijaya Karnataka Web 19 Mar 2019, 10:13 am
ಹೊಸದಿಲ್ಲಿ: ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ (ADAG) ಮುಖ್ಯಸ್ಥ ಅನಿಲ್ ಅಂಬಾನಿ ಎರಿಕ್‌ಸನ್‌ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ.ಗಳ ಸಂಪೂರ್ಣ ಸಾಲವನ್ನು ಮರುಪಾವತಿಸಿ ತಮ್ಮನ್ನು ಬಂಧನದಿಂದ ಪಾರು ಮಾಡಿದ ಅಣ್ಣ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಅತ್ತಿಗೆ ನೀತಾ ಅಂಬಾನಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Vijaya Karnataka Web Mukesh_Ambani_With_Anil_Ambani


ಮಾರ್ಚ್‌ 19ರ ಮೊದಲು ಸ್ವೀಡಿಶ್ ಟೆಲಿಕಾಂ ಕಂಪನಿ ಎರಿಕ್‌ಸನ್‌ಗೆ ಪಾವತಿಸಬೇಕಿರುವ 462 ಕೋಟಿ ರೂ.ಗಳ ಸಾಲ ಮರು ಪಾವತಿ ಮಾಡದಿದ್ದರೆ ಜೈಲಿಗೆ ಹೋಗಬೇಕಾದೀತು ಎಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗಡುವಿಗೆ ಒಂದು ಮೊದಲೇ ಅಣ್ಣ ಮುಕೇಶ್ ಅಂಬಾನಿ, ತಮ್ಮ ಅನಿಲ್ ಅಂಬಾನಿ ಪರವಾಗಿ ಸಾಲ ಮರುಪಾವತಿ ಮಾಡಿದ್ದಾರೆ.

ಇದರೊಂದಿಗೆ ಎರಿಕ್‌ಸನ್‌ ಋಣದಿಂದ ಅನಿಲ್ ಅಂಬಾನಿ ಮುಕ್ತರಾಗಿದ್ದು, ಬಂಧನದಿಂದ ಪಾರು ಮಾಡಿದ ಅಣ್ಣನಿಗೆ ಕೃತಜ್ಞತೆ ಸಲ್ಲಿಸಿ ಅನಿಲ್ ಅಂಬಾನಿ ಪತ್ರ ಬರೆದಿದ್ದಾರೆ. ಪತ್ರದ ಪೂರ್ಣಪಾಠ ಇಲ್ಲಿದೆ:

ತಮ್ಮನ 580 ಕೋಟಿ ರೂ. ಸಾಲ ತೀರಿಸಿ ಜೈಲು ಪಾಲಾಗುವುದನ್ನು ತಪ್ಪಿಸಿದ ಮುಕೇಶ್ ಅಂಬಾನಿ

'ನನ್ನ ಹಿರಿಯ ಸೋದರ ಮುಕೇಶ್ ಮತ್ತು ನೀತಾ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಸಂಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ಅವರಿಗೆ, ನಮ್ಮ ನಡುವಿನ ಬಲಿಷ್ಠವಾದ ಕೌಟುಂಬಿಕ ಬಾಂಧವ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿದು ಸಕಾಲಿಕವಾಗಿ ನೆರವಿಗೆ ಬಂದ ಅವರಿಗೆ ನಾವು ಋಣಿಯಾಗಿರುತ್ತೇವೆ. ಹಿಂದೆಯೂ ನಾನು ಮತ್ತು ನನ್ನ ಕುಟುಂಬಕ್ಕೆ ಮುಕೇಶ್ ನೆರವಾಗಿದ್ದಾರೆ. ಅವರ ಔದಾರ್ಯದಿಂದ ನನ್ನ ಹೃದಯ ತುಂಬಿ ಬಂದಿದೆ' ಎಂದು ಅನಿಲ್ ಅಂಬಾನಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ಆರ್‌ಕಾಮ್ ವಕ್ತಾರರು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ