ಹೊಸದಿಲ್ಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಅವ್ಯವಸ್ಥೆಯನ್ನು ನಿವಾರಿಸಲು ಸರಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಎಟಿಎಂ ಫೀ ರದ್ದುಗೊಳಿಸಲು ಆದೇಶಿಸಿದೆ. ಇದರಿಂದ ಒಂದು ಬ್ಯಾಂಕಿನ ಎಟಿಎಂ ಕಾರ್ಡ್ನಿಂದ ಮತ್ತೊಂದು ಬ್ಯಾಂಕಿನ ಎಟಿಎಂಗಳಲ್ಲಿ ಹಣ ಪಡೆಯಲು ಎಷ್ಟು ಸಾರಿ ಬೇಕಾದರೂ ಬಳಸಬಹುದಾಗಿದ್ದು, ಇದಕ್ಕೆ ಡಿ.31ರವರೆಗೆ ಯಾವುದೇ ತೆರಿಗೆಯನ್ನು ವಿಧಿಸಲಾಗುವುದಿಲ್ಲ.
ಸೋಮವಾರದಿಂದ ಎಟಿಎಂ ಹಾಗೂ ಬ್ಯಾಂಕ್ಗಳಲ್ಲಿ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಲಾಗಿದೆ. ಇದೀಗ ಎಟಿಎಂಗಳಲ್ಲಿ ಹಣ ಪಡೆಯಲು ಬಳಸುವ ಡೆಬಿಟ್ ಹಾಗೂ ಕ್ರಿಡಿಟ್ ಕಾರ್ಡ್ಗಳ ಮೇಲಿನ ತೆರಿಗೆಯನ್ನೂ ಕಡಿತಗೊಳಿಸಲು ಆರ್ಬಿಐ ಆದೇಶಿಸಿದೆ. ಈಗಾಗಲೇ ಎಟಿಎಂಗಳು ಹೊಸ ನೋಟುಗಳನ್ನು ನೀಡುವ ಸಾಮರ್ಥ್ಯವನ್ನು ಹೆಚ್ಚಿಸಲು ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಸುಗಮ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಈಗ ಉದ್ಭವವಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಹಣವಿದ್ದು, ಚಿಂತಿಸುವ ಅಗತ್ಯವಿಲ್ಲವೆಂದು ಈಗಾಗಲೇ ಆರ್ಬಿಐ ಅಭಯ ನೀಡಿದೆ. ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಕಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ವಿದ್ಯುನ್ಮಾನ ಪಾವತಿಗೆ ಹೆಚ್ಚು ಪ್ರೋತ್ಸಾಹಿಸುವ ಮೂಲಕ ಬ್ಯಾಂಕ್ ಮೇಲಿನ ಒತ್ತಡವನ್ನು ನಿವಾರಿಸಲಾಗುತ್ತಿದ್ದು, ಕೇಂದ್ರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಮೊತ್ತವನ್ನು ಇ-ಪಾವತಿಸಲು ಅನುವು ಮಾಡಿಕೊಡಲಾಗಿದೆ. ಇದಕ್ಕೆ ಇದುವರೆಗೆ ತೆಗೆದುಕೊಳ್ಳುತ್ತಿದ್ದ ತೆರಿಗೆಯನ್ನು ಡಿ.31ರ ತನಕ ರದ್ದುಗೊಳಿಸುವಂತೆ ಆರ್ಬಿಐ ಎನ್ಪಿಸಿಐಗೆ ಸೂಚಿಸಿದೆ.
'ಬ್ಯಾಂಕ್ ವ್ಯವಸ್ಥೆಗೆ ಚಲಾವಣೆಯಲ್ಲಿರುವ ಹಣ ಸುಗಮವಾಗಿ ಹರಿದು ಹೋಗುವಂತೆ ಎಲ್ಲ ಮಾರ್ಗಗಳಿಂದಲೂ ಯತ್ನಿಸಲಾಗುತ್ತಿದೆ. ಈಗಾಗಲೇ ಬ್ಯಾಂಕ್ ಪ್ರತಿನಿಧಿಗಳು ಇಟ್ಟುಕೊಳ್ಳುವ ಹಣದ ಮೊತ್ತವನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಹಾಗೂ ಯಾವುದೋ ಮೂಲೆಯೊಂದರಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್ ಪ್ರತಿನಿಧಿಗಳು ಎಷ್ಟು ಸಾರಿ ಬೇಕಾದರೂ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ,' ಎಂದು ವಿತ್ರ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋಮವಾರದಿಂದ ಎಟಿಎಂ ಹಾಗೂ ಬ್ಯಾಂಕ್ಗಳಲ್ಲಿ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಲಾಗಿದೆ. ಇದೀಗ ಎಟಿಎಂಗಳಲ್ಲಿ ಹಣ ಪಡೆಯಲು ಬಳಸುವ ಡೆಬಿಟ್ ಹಾಗೂ ಕ್ರಿಡಿಟ್ ಕಾರ್ಡ್ಗಳ ಮೇಲಿನ ತೆರಿಗೆಯನ್ನೂ ಕಡಿತಗೊಳಿಸಲು ಆರ್ಬಿಐ ಆದೇಶಿಸಿದೆ. ಈಗಾಗಲೇ ಎಟಿಎಂಗಳು ಹೊಸ ನೋಟುಗಳನ್ನು ನೀಡುವ ಸಾಮರ್ಥ್ಯವನ್ನು ಹೆಚ್ಚಿಸಲು ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಸುಗಮ ವಹಿವಾಟಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಈಗ ಉದ್ಭವವಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಹಣವಿದ್ದು, ಚಿಂತಿಸುವ ಅಗತ್ಯವಿಲ್ಲವೆಂದು ಈಗಾಗಲೇ ಆರ್ಬಿಐ ಅಭಯ ನೀಡಿದೆ. ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಕಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದೆ.
ವಿದ್ಯುನ್ಮಾನ ಪಾವತಿಗೆ ಹೆಚ್ಚು ಪ್ರೋತ್ಸಾಹಿಸುವ ಮೂಲಕ ಬ್ಯಾಂಕ್ ಮೇಲಿನ ಒತ್ತಡವನ್ನು ನಿವಾರಿಸಲಾಗುತ್ತಿದ್ದು, ಕೇಂದ್ರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಮೊತ್ತವನ್ನು ಇ-ಪಾವತಿಸಲು ಅನುವು ಮಾಡಿಕೊಡಲಾಗಿದೆ. ಇದಕ್ಕೆ ಇದುವರೆಗೆ ತೆಗೆದುಕೊಳ್ಳುತ್ತಿದ್ದ ತೆರಿಗೆಯನ್ನು ಡಿ.31ರ ತನಕ ರದ್ದುಗೊಳಿಸುವಂತೆ ಆರ್ಬಿಐ ಎನ್ಪಿಸಿಐಗೆ ಸೂಚಿಸಿದೆ.
'ಬ್ಯಾಂಕ್ ವ್ಯವಸ್ಥೆಗೆ ಚಲಾವಣೆಯಲ್ಲಿರುವ ಹಣ ಸುಗಮವಾಗಿ ಹರಿದು ಹೋಗುವಂತೆ ಎಲ್ಲ ಮಾರ್ಗಗಳಿಂದಲೂ ಯತ್ನಿಸಲಾಗುತ್ತಿದೆ. ಈಗಾಗಲೇ ಬ್ಯಾಂಕ್ ಪ್ರತಿನಿಧಿಗಳು ಇಟ್ಟುಕೊಳ್ಳುವ ಹಣದ ಮೊತ್ತವನ್ನು 50 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಹಾಗೂ ಯಾವುದೋ ಮೂಲೆಯೊಂದರಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್ ಪ್ರತಿನಿಧಿಗಳು ಎಷ್ಟು ಸಾರಿ ಬೇಕಾದರೂ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ,' ಎಂದು ವಿತ್ರ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.