ಆ್ಯಪ್ನಗರ

ಎಟಿಎಂ ಬಳಕೆದಾರರಿಂದ ಸರಾಸರಿ 5,000 ರೂ. ನಗದು ಹಿಂತೆಗೆತ, ದಾಖಲೆ ಮಟ್ಟಕ್ಕೆ ಏರಿಕೆ

2020 ಆಗಸ್ಟ್‌ನಲ್ಲಿ ಎಟಿಎಂನಿಂದ ನಗದು ಹಿಂತೆಗೆತದ ಸರಾಸರಿ 4,959 ರೂಪಾಯಿಗೆ ಏರಿಕೆಯಾಗಿದ್ದರೆ, ಇದೇ ಅವಧಿಯಲ್ಲಿ ಯುಪಿಐ ಪೇಮೆಂಟ್‌ ಗಳ ಸರಾಸರಿ 1,850 ರೂಪಾಯಿಗಳಾಗಿವೆ. ಡಿಜಿಟಲ್‌ ಪೇಮೆಂಟ್‌, ಯುಪಿಐ ಹೊರತಾಗಿಯೂ ನಗದು ಚಲಾವಣೆಯೇ ಇಂದಿಗೂ ಅಧಿಕವಾಗಿದೆ.

Agencies 20 Nov 2020, 8:23 pm
ಹೊಸದಿಲ್ಲಿ: ಕಳೆದ ಆಗಸ್ಟ್‌ನಲ್ಲಿ ಎಟಿಎಂಗಳಿಂದ ನಗದು ವಿತ್‌ ಡ್ರಾವಲ್ಸ್‌ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಬಳಕೆದಾರರು ಸರಾಸರಿ 5,000 ರೂ.ಗಳಂತೆ ಹಿಂತೆಗೆದುಕೊಂಡಿದ್ದಾರೆ. ಆಗಸ್ಟ್‌ನಲ್ಲಿ ಒಟ್ಟು 26 ಲಕ್ಷ ಕೋಟಿ ರೂ. ನಗದು ಚಲಾವಣೆಯಲ್ಲಿತ್ತು. ಇದರೊಂದಿಗೆ ವ್ಯವಸ್ಥೆಯಲ್ಲಿ ಈಗಲೂ ನಗದು ಕಿಂಗ್‌ ಎನ್ನಿಸಿದೆ.
Vijaya Karnataka Web atm


ಜಿಡಿಪಿಯ 12 ಪರ್ಸೆಂಟ್‌ನಷ್ಟು ನಗದು ಚಲಾವಣೆಯಲ್ಲಿದೆ. ಕಳೆದ ನವೆಂಬರ್‌ನಿಂದ ನಗದು ವಿತ್‌ ಡ್ರಾವಲ್ಸ್‌ 10 ಪರ್ಸೆಂಟ್‌ ವೃದ್ಧಿಸಿದೆ. ಯುಪಿಐ ಪೇಮೆಂಟ್‌ಗಳು ಶೇ.20ರಷ್ಟು ಹೆಚ್ಚಳವಾಗಿದೆ. ಇದರ ಸರಾಸರಿ 1,850 ರೂ.ಗಳಾಗಿವೆ.

‘‘ನಗದು ಭಾರತದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಎಟಿಎಂಗಳು ಜನತೆಗೆ ಹಣಕಾಸು ವರ್ಗಾವಣೆಗೆಳಿಗೆ ಮಹತ್ವದ ಸೌಲಭ್ಯವೆನಿಸಿದೆ’’ ಎನ್ನುತ್ತಾರೆ ಹಿಟಾಚಿ ಪೇಮೆಂಟ್‌ ಸರ್ವೀಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರುಸ್ತುಮ್‌ ಇರಾನಿ.

ಹಬ್ಬದ ಸೀಸನ್‌ ಆದ್ದರಿಂದ ಜನತೆ ಹೆಚ್ಚುವರಿ ಖರ್ಚು ವೆಚ್ಚಗಳಿಗೆ ನಗದು ಹಿಂತೆಗೆತ ಮಾಡಿದ್ದಾರೆ. ಜನ ಈಗ 100-300 ರೂ.ಗಳ ಸಣ್ಣ ಮೊತ್ತಕ್ಕೆಲ್ಲ ಎಟಿಎಂ ಬಳಸುವುದಿಲ್ಲ. ಒಮ್ಮೆಗೆ ದೊಡ್ಡ ಮೊತ್ತ ತೆಗೆಯುತ್ತಾರೆ. ಸಣ್ಣ ಮೊತ್ತಕ್ಕೆ ಡಿಜಿಟಲ್‌ ಸಾಧನಗಳನ್ನು ಬಳಸುತ್ತಾರೆ.

"ಭಾರತೀಯರು ನಗದನ್ನು ಹೆಚ್ಚಾಗಿ ಇಷ್ಟಪಡಲು ಕಾರಣಗಳಲ್ಲೊಂದು ಅವರು ತೆರಿಗೆಯನ್ನು ಕಟ್ಟಲು ಬಯಸದಿರುವುದು. ಕೇವಲ 3 ಪರ್ಸೆಂಟ್‌ ಜನ ಮಾತ್ರ ತೆರಿಗೆ ಕಟ್ಟುತ್ತಾರೆ. ಅವರಲ್ಲಿ ಬಹುತೇಕ ಮಂದಿ ವೇತನದಾರರು. ಜನ ನೋಟು ಅಮಾನ್ಯತೆಯನ್ನು ದ್ವೇಷಿಸಲು ಇದೂ ಒಂದು ಕಾರಣ. ಅಭಿವೃದ್ಧಿ ಹೊಂದಿದ ದೇಶದಲ್ಲಿ 40-60 ಪರ್ಸೆಂಟ್‌ ಜನ ಬಡವರಿರಲಿ, ಸಿರಿವಂತರಿರಲಿ ತೆರಿಗೆ ಪಾವತಿಸುತ್ತಾರೆ. ಇಲ್ಲಿ ಜನ ಪ್ರತಿಯೊಂದನ್ನೂ ಸರಕಾರದಿಂದ ಬಯಸುತ್ತಾರೆ, ಆದರೆ ತೆರಿಗೆ ಕಟ್ಟಲು ಬಯಸುವುದಿಲ್ಲ" ಎನ್ನುತ್ತಾರೆ ತಜ್ಞರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ