ಆ್ಯಪ್ನಗರ

ಹಾಲು ಉತ್ಪಾದಕರಿಗೆ ಶುಭ ಸುದ್ದಿ: ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದ ಬಮೂಲ್!

ರೈತರು ಹಾಕುವ ಪ್ರತಿ ಲೀಟರ್‌ ಹಾಲಿಗೆ ಇದೇ ಫೆ.1ರಿಂದ ಎರಡು ರೂ. ಹೆಚ್ಚಿಸಲಾಗಿದೆ. ಇದು ರೈತರಿಗೆ ರಾಜ್ಯದ ಹಾಲು ಒಕ್ಕೂಟ ನೀಡಿದ ಸಂಕ್ರಾಂತಿ ಸಿಹಿಯಾಗಿದೆ ಎಂದು ಬಮೂಲ್‌ ನಿರ್ದೇಶಕ ಹರೀಶ್‌ಕುಮಾರ್‌ ಹೇಳಿದರು.

Vijaya Karnataka Web 22 Jan 2021, 9:23 pm
ಕನಕಪುರ: ರೈತರು ಹಾಕುವ ಪ್ರತಿ ಲೀಟರ್‌ ಹಾಲಿಗೆ ಇದೇ ಫೆ.1ರಿಂದ ಎರಡು ರೂ. ಹೆಚ್ಚಿಸಲಾಗಿದೆ. ಇದು ರೈತರಿಗೆ ರಾಜ್ಯದ ಹಾಲು ಒಕ್ಕೂಟ ನೀಡಿದ ಸಂಕ್ರಾಂತಿ ಸಿಹಿಯಾಗಿದೆ ಎಂದು ಬಮೂಲ್‌ ನಿರ್ದೇಶಕ ಹರೀಶ್‌ಕುಮಾರ್‌ ಹೇಳಿದರು.
Vijaya Karnataka Web milk
Representative image


ಕನಕಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್‌-19 ನಿಂದ ಎಲ್ಲಾ ಕ್ಷೇತ್ರಗಳಂತೆ ಹಾಲು ಉತ್ಪಾದನಾ ಕ್ಷೇತ್ರಕ್ಕೆ ಮಾರಾಟ ಬಿಸಿ ತಟ್ಟಿದ್ದು, ಹಾಲು ಒಕ್ಕೂಟ ಸುಮಾರು 110 ಕೋಟಿ ನಷ್ಟದತ್ತ ಸಾಗಿತ್ತು, ಈಗ ಮಾರಾಟ ವೃದ್ದಿಸಿದ್ದು ನಷ್ಟ ಸರಿದೂಗಿಸುವತ್ತ ಸಾಗಿದೆ ಎಂದರು.

ಕೋವಿಡ್ ನಡುವೆಯೂ 'ಹಾಸನ ಹಾಲು ಒಕ್ಕೂಟ'ಕ್ಕೆ ₹15 ಕೋಟಿ ಲಾಭ!

3 ರೂ. ಹೆಚ್ಚಿಸುವ ಉದ್ದೇಶವಿತ್ತು:
ನಷ್ಟದಿಂದ ಲಾಭದತ್ತ ಸಾಗುತ್ತಿರುವ ಹಾಲುಒಕ್ಕೂಟ ಮಹಾ ಮಂಡಳಿ ಸಭೆಯಲ್ಲಿ ನಮ್ಮ ರೈತ ಹಿತ ಕಾಯುವ ಉದ್ದೇಶದಿಂದ 3 ರೂ ಹೆಚ್ಳಕ್ಕೆ ಬೇಡಿಕೆ ಮುಂದಿಟ್ಟಿದ್ದೆವು. ಆದರೆ ಎಲ್ಲರ ಸಹಮತದಂತೆ 2 ರೂ ಹೆಚ್ಚಳ ಮಾಡಲಾಗುತ್ತಿದೆ ಎಂದರು.

ಸಹಕಾರ ಮಂತ್ರಿಗಳಾದ ಸೋಮಶೇಖರ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ಅವರ ಸಹಕಾರದಿಂದ ರೈತರಿಗೆ ಈ ಅನುಕೂಲ ಕಲ್ಪಿಸಲು ಮುಂದಾಗಿದ್ದು, ರೈತರು ಮತ್ತಷ್ಟು ಗುಣಮಟ್ಟದತ್ತ ಉತ್ಪಾದನೆಗೆ ಗಮನ ಹರಿಸಿದಲ್ಲಿಇನ್ನಷ್ಟು ಲಾಭದತ್ತ ಸಾಗಿದೆ ಮತ್ತಷ್ಟು ಹೆಚ್ಚು ಧರ ನಿಗದಿ ಮಾಡಲು ಸಹಕಾರಿಯಾಗಲಿದೆ ಎಂದರು.

ಹಾಲು ಉತ್ಪಾದಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌, 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ

ಚೀಸ್‌ ಮತ್ತು ಪೌಡರ್‌ ಘಟಕ :
ಕನಕಪುರದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ನಂದಿನಿ ಉತ್ಪನ್ನಗಳ ಘಟಕ ನಿರ್ಮಾಣದಿಂದ ಕೋವಿಡ್‌ ಕಾಲದಲ್ಲಿ ಆಗಬಹುದಾದ ಹೆಚ್ಚುವರಿ ನಷ್ಟ ತಪ್ಪಿಸಲು ಕಾರಣವಾಗಿದ್ದು, ಹಾಲು ಒಕ್ಕೂಟ ಈ ಸಂದರ್ಬದ ಹೆಚ್ಚುವರಿ ಹಾಲನ್ನು ಚೀಸ್‌ ಮತ್ತು ಪೌಡರನ್ನಾಗಿ ಸಂಗ್ರಹ ಮಾಡಿದ್ದರಿಂದ ಇಂದು ಅದನ್ನು ಮಾರಾಟ ಮಾಡಿ ನಷ್ಟವನ್ನು ಸರಿದೂಗಿಸಿಕೊಳ್ಳಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಉಮೇಶ್‌, ಪಾಪಣ್ಣ, ವಿಜಯ್‌ಕುಮಾರ್‌, ವಿಸ್ತರಣಾಧಿಕಾರಿಗಳಾದ ಮಾದೇಗೌಡ, ಪ್ರವೀಣ್‌ಕುಮಾರ್‌, ಸೇರಿದಂತೆ ಅನೇಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ