ಆ್ಯಪ್ನಗರ

ಗ್ರಾಹಕರೇ ಎಚ್ಚರ; ಅಕ್ಟೋಬರ್ 23ರಂದು ರಾಷ್ಟ್ರಾದ್ಯಂತ ಬ್ಯಾಂಕ್‌ ಮುಷ್ಕರ

ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಬ್ಯಾಂಕ್‌ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಇದರಲ್ಲಿ ಲಕ್ಷಾಂತರ ಸಿಬ್ಬಂದಿ ಭಾಗವಹಿಸುವ ಎಲ್ಲ ಸಾಧ್ಯತೆಗಳು ಇವೆ. ಗ್ರಾಹಕರು ಬ್ಯಾಂಕ್ ವ್ಯವಹಾರಗಳನ್ನು ಮಂಗಳವಾರವೇ ಮುಗಿಸುವುದು ಒಳಿತು.

Vijaya Karnataka Web 22 Oct 2019, 10:52 am
ಹೊಸದಿಲ್ಲಿ: ಬ್ಯಾಂಕ್‌ಗಳ ವಿಲೀನ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕಿಂಗ್‌ ನೌಕೌರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್‌ ಉದ್ಯೋಗಿಗಳ ಫೆಡರೇಷನ್‌ ಆಫ್‌ ಇಂಡಿಯಾ (ಬಿಇಎಫ್‌ಐ) ಮಂಗಳವಾರ (ಅಕ್ಟೋಬರ್‌ 22) ದಂದು ಮುಷ್ಕರಕ್ಕೆ ಕರೆ ನೀಡಿದೆ.
Vijaya Karnataka Web ಬ್ಯಾಂಕ್‌ ವಿಲೀನ
ಬ್ಯಾಂಕ್‌ ವಿಲೀನ


ಇದರಿಂದ (ಅಕ್ಟೋಬರ್ 22) ಬ್ಯಾಂಕ್‌ ವ್ಯವಹಾರದಲ್ಲಿ ಭಾರಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಗ್ರಾಹಕರು ಹಣ ತೆಗೆಯುವ, ಠೇವಣಿ ಇಡುವ, ಚೆಕ್ ಸಂದಾಯ ಮಾಡುವ ಇತ್ಯಾದಿ ವ್ಯವಹಾರಗಳನ್ನು ಮಂಗಳವಾರವೇ ಮುಗಿಸುವುದು ಒಳಿತು. ಅವಶ್ಯಕತೆಗನುಗುಣವಾಗಿ ಸ್ವಲ್ಪ ಹಣವನ್ನು ತೆಗೆದಿಟ್ಟುಕೊಳ್ಳುವುದು ಸೂಕ್ತ.

ಮುಷ್ಕರದಲ್ಲಿ ರಾಷ್ಟ್ರಾದ್ಯಂತ 3.5 ಲಕ್ಷಕ್ಕೂ ಹೆಚ್ಚು ಬ್ಯಾಂಕ್‌ ಸಿಬ್ಬಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಾರ್ವಜನಿಕ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ.

ತಿಂಗಳಿನಲ್ಲಿ ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ರಜಾ ದಿನ. ಭಾನುವಾರ ವಾರದ ರಜೆ ಇರುತ್ತದೆ. ಹೀಗಾಗಿ ಈ ವಾರ ಸಾರ್ವಜನಿಕರು ಬ್ಯಾಂಕ್‌ ವ್ಯವಹಾರಗಳನ್ನು ನೋಡಿಕೊಂಡು ನಿರ್ವಹಿಸುವುದು ಸೂಕ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ