ಆ್ಯಪ್ನಗರ

ಬ್ಯಾಂಕ್ ಮುಷ್ಕರ ಬಿಸಿಗೆ ಗ್ರಾಹಕರು ತತ್ತರ

ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ಬುಧವಾರ ನಡೆದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಪ್ರತಿನಿಧಿಸುವ ಭಾರತೀಯ ಬ್ಯಾಂಕ್‌ಗಳ ಸಂಘಟನೆ(ಐಬಿಎ) ಕರೆ ನೀಡಿರುವ 2 ದಿನಗಳ ಮುಷ್ಕರ ಇಂದೂ ಮುಂದುವರಿಯಲಿದೆ.

TNN & Agencies 31 May 2018, 11:12 am
ಹೊಸದಿಲ್ಲಿ: ಕರ್ನಾಟಕವೂ ಸೇರಿದಂತೆ ದೇಶದೆಲ್ಲೆಡೆ ಬುಧವಾರ ನಡೆದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಷ್ಕರಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. 10 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಪ್ರತಿನಿಧಿಸುವ ಭಾರತೀಯ ಬ್ಯಾಂಕ್‌ಗಳ ಸಂಘಟನೆ(ಐಬಿಎ) ಕರೆ ನೀಡಿರುವ 2 ದಿನಗಳ ಮುಷ್ಕರ ಇಂದೂ ಮುಂದುವರಿಯಲಿದೆ. ಹಳೆ ತಲೆಮಾರಿಗೆ ಸೇರಿದ 13 ಖಾಸಗಿ ಬ್ಯಾಂಕ್‌ಗಳು, 6 ವಿದೇಶಿ ಬ್ಯಾಂಕ್‌ಗಳು, 56 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮುಷ್ಕರವನ್ನು ಬೆಂಬಲಿಸಿದ್ದಾರೆ. ಹೊಸ ತಲೆಮಾರಿನ ಬ್ಯಾಂಕ್‌ಗಳಾದ ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ, ಏಕ್ಸಿಸ್‌ ಬ್ಯಾಂಕ್‌ನಲ್ಲಿ ವ್ಯವಹಾರ ಸಹಜವಾಗಿತ್ತು.
Vijaya Karnataka Web Bank Strike


21 ಸಾರ್ವಜನಿಕ ವಲಯದ ಬ್ಯಾಂಕ್‌ಗಳು 85,000 ಶಾಖೆಗಳನ್ನು ಹೊಂದಿವೆ. ದೇಶದ ಬ್ಯಾಂಕಿಂಗ್‌ ವಲಯದಲ್ಲಿ ಶೇ.70ರ ಪಾಲನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹೊಂದಿವೆ. ''ಎರಡು ದಿನಗಳ ಮುಷ್ಕರದಿಂದ ಗ್ರಾಹಕರ 20 ಸಾವಿರ ಕೋಟಿ ರೂ. ವಹಿವಾಟಿಗೆ ತೊಡಕಾಗಲಿದೆ,'' ಎಂದು ಅಸೋಚಮ್‌ ಅಂದಾಜು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ