ಬ್ಯಾಂಕ್ಗಳ ವಿಲೀನದ ಸಾಧಕ-ಬಾಧಕ
ಕೇಂದ್ರ ಸರಕಾರ ಇತ್ತೀಚೆಗೆ ಸಾರ್ವಜನಿಕ ವಲಯದ 10 ಬ್ಯಾಂಕ್ಗಳನ್ನು 4ಕ್ಕೆ ಇಳಿಸಿದೆ. ಇದರೊಂದಿಗೆ ಪಿಎಸ್ಯು ಬ್ಯಾಂಕ್ಗಳ ಸಂಖ್ಯೆ ಕಳೆದ ಎರಡು ವರ್ಷದಲ್ಲಿ 27ರಿಂದ 12ಕ್ಕೆ ತಗ್ಗಿದೆ. ಇದರ ಸಾಧಕ-ಬಾಧಕಗಳೇನು? ಇಲ್ಲಿದೆ ವಿವರ.
Vijaya Karnataka Web 7 Sep 2019, 5:00 am
ಕೇಂದ್ರ ಸರಕಾರ ಇತ್ತೀಚೆಗೆ ಸಾರ್ವಜನಿಕ ವಲಯದ 10 ಬ್ಯಾಂಕ್ಗಳನ್ನು 4ಕ್ಕೆ ಇಳಿಸಿದೆ. ಇದರೊಂದಿಗೆ ಪಿಎಸ್ಯು ಬ್ಯಾಂಕ್ಗಳ ಸಂಖ್ಯೆ ಕಳೆದ ಎರಡು ವರ್ಷದಲ್ಲಿ 27ರಿಂದ 12ಕ್ಕೆ ತಗ್ಗಿದೆ. ಇದರ ಸಾಧಕ-ಬಾಧಕಗಳೇನು? ಇಲ್ಲಿದೆ ವಿವರ.
==============
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
-ಸರಕಾರ ಜಾಗತಿಕ ದರ್ಜೆಯ ನೆಕ್ಸ್ಟ್ ಜನರೇಷನ್ ಬ್ಯಾಂಕ್ಗಳನ್ನು ನಿರ್ಮಿಸಲು ಯತ್ನಿಸುತ್ತಿದೆ.
-12 ವ್ಯವಸ್ಥಿತ, ಪ್ರಬಲ, ಸೂಕ್ತ ಬಂಡವಾಳ ಇರುವ ಬ್ಯಾಂಕ್ಗಳು ಕಾರ್ಯನಿರ್ವಹಿಸಲಿವೆ.
----------
ವಿಲೀನ ಯಾಕೆ?
- ಟಾಪ್ 20 ಜಾಗತಿಕ ಬ್ಯಾಂಕ್ಗಳ ಪಟ್ಟಿಯಲ್ಲಿ ಭಾರತದ ಒಂದು ಬ್ಯಾಂಕ್ ಕೂಡ ಇಲ್ಲ. 5 ಅತಿ ದೊಡ್ಡ ಬ್ಯಾಂಕ್ ಚೀನಾದ್ದಾಗಿದೆ. ಚೀನಾದ ಪ್ರಗತಿಯಲ್ಲಿ ಅವುಗಳ ಪಾತ್ರ ಪ್ರಮುಖ.
- 27 ಬ್ಯಾಂಕ್ಗಳಿದ್ದರೆ ಸರಕಾರ, ಆರ್ಬಿಐಗೆ ಅವುಗಳ ಉಸ್ತುವಾರಿ ಕಷ್ಟಕರ. 4-5ಕ್ಕೆ ಇಳಿಸಿದರೆ ಅನುಕೂಲ.
- ಸಾಲದ ವೆಚ್ಚ ಇಳಿಕೆಯಾಗಲಿದ್ದು, ಬ್ಯಾಂಕಿನ ಸಾಲ ವಿತರಣೆಯ ಸಾಮರ್ಥ್ಯ ವೃದ್ಧಿಸುವ ನಿರೀಕ್ಷೆ
-ದುರ್ಬಲ ಬ್ಯಾಂಕ್ಗಳ ಭವಿಷ್ಯದ ದೃಷ್ಟಿಯಿಂದ ವಿಲೀನ ಸೂಕ್ತ
-ವಸೂಲಾಗದ ಸಾಲದ ನಿರ್ವಹಣೆಗೆ ಅನುಕೂಲ. ಖಾಸಗಿ ಬ್ಯಾಂಕ್ಗಳಲ್ಲಿರುವಂತೆ ಸಾಲ ವಸೂಲಾತಿಗೆ ಹೆಚ್ಚಿನ ಸಿಬ್ಬಂದಿ, ನೆಟ್ವರ್ಕ್ ಸ್ಥಾಪಿಸಬಹುದು.
=============
ವಿಲೀನ ಸೃಷ್ಟಿಸುವ ಸಮಸ್ಯೆಗಳು
-ಪ್ರಾದೇಶಿಕ ಮಟ್ಟದಲ್ಲಿ ಪ್ರಬಲವಾಗಿರುವ ಬ್ಯಾಂಕ್ಗಳ ವಿಲೀನದಿಂದ ಬ್ಯಾಂಕಿಂಗ್ ವಿಕೇಂದ್ರೀಕರಣಕ್ಕೆ ಧಕ್ಕೆ
-ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಗೆ ಹೊಡೆತ.
-ಬಲಿಷ್ಠ ಬ್ಯಾಂಕ್ಗಳಿಗೆ ದುರ್ಬಲ ಬ್ಯಾಂಕ್ಗಳ ಒತ್ತಡ
- ಬ್ಯಾಂಕ್ ಸಿಬ್ಬಂದಿಯ ಅಸಮಾಧಾನ ಬಿಕ್ಕಟ್ಟಿಗೆ ಕಾರಣವಾದೀತು.
-ವಿಲೀನವಾದರೂ ಸೇವೆಯಲ್ಲಿ ಸುಧಾರಣೆ ಆಗದಿದ್ದರೆ ಸಮಸ್ಯೆ
- ಹೆಚ್ಚಿನ ಸ್ವಾಯತ್ತತೆ ಸಿಗದಿದ್ದರೂ ಕಷ್ಟ
=============
ವಿಲೀನದ ಬೆನ್ನಲ್ಲೇ ಬ್ಯಾಂಕ್ಗಳ ಷೇರು ಕುಸಿತ!
ಸಾರ್ವಜನಿಕ ಬ್ಯಾಂಕ್ಗಳ ಮೆಗಾ ವಿಲೀನಕ್ಕೆ ಷೇರು ಹೂಡಿಕೆದಾರರು ನಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಲೀನದ ಬೆನ್ನಲ್ಲೇ ಬಹುತೇಕ ಪಿಎಸ್ಯು ಬ್ಯಾಂಕ್ಗಳ ಷೇರು ದರದಲ್ಲಿ ಶೇ.9-12ರಷ್ಟು ನಷ್ಟವಾಗಿತ್ತು. ವಿಲೀನವಾಗಲಿರುವ ಬ್ಯಾಂಕ್ಗಳ ಷೇರುಗಳೂ ನಷ್ಟಕ್ಕೀಡಾಗಿತ್ತು. ಬ್ಯಾಂಕ್ ವಿಲೀನದ ನಂತರ ಷೇರುಗಳ ಮೌಲ್ಯ ಇಳಿಕೆಯಾಗಬಹುದು ಎಂಬ ಆತಂಕ ಹೂಡಿಕೆದಾರರನ್ನು ಕಾಡುತ್ತಿದೆ. ಸರಕಾರ ಇತ್ತೀಚೆಗೆ ಬಂಡವಾಳ ನೆರವು ಘೋಷಿಸಿದ್ದರೂ, ಷೇರು ಬೆಲೆ ಇಳಿದಿದೆ. ಎಲ್ಐಸಿ ಈ ಬ್ಯಾಂಕ್ಗಳಲ್ಲಿ ಹೊಂದಿರುವ ಷೇರುಗಳ ಮೌಲ್ಯವೂ ಇಳಿಕೆಯಾಗಿದೆ.
ಬ್ಯಾಂಕ್ನ ಗಾತ್ರ ಮುಖ್ಯವಲ್ಲ
ಸಾರ್ವಜನಿಕ ಬ್ಯಾಂಕ್ಗಳ ವಿಲೀನ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಲಿದೆ. ಬ್ಯಾಂಕ್ಗಳ ಗಾತ್ರ ಮುಖ್ಯವಲ್ಲ. ಇದರಿಂದ ಆರ್ಥಿಕ ಮಂದಗತಿಯನ್ನು ತಡೆಯಲು ಅಸಾಧ್ಯ. ದೀರ್ಘಾವಧಿಯಲ್ಲಿ ಒಂದೊಮ್ಮೆ ಯಾವುದಾದರೂ ದೊಡ್ಡ ಬ್ಯಾಂಕ್ ದಿವಾಳಿಯಾದರೆ, ಸರಕಾರಕ್ಕೆ ಅದನ್ನು ಉಳಿಸಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಮೆರಿಕದಲ್ಲಿ ಮಹಾ ಆರ್ಥಿಕ ಹಿಂಜರಿತದ ವೇಳೆ ಇಂಥ ಸನ್ನಿವೇಶ ಉಂಟಾಗಿತ್ತು. ಹೀಗಾಗಿ ವಿಲೀನದ ಬದಲು ಸರಕಾರ ತನ್ನ ಷೇರುಗಳನ್ನು ಮಾರಾಟಕ್ಕೆ ಸಿದ್ಧತೆ ನಡೆಸುವುದು ಒಳಿತು.
- ಡಿ. ಸುಬ್ಬರಾವ್, ಮಾಜಿ ಗವರ್ನರ್, ಆರ್ಬಿಐ.
==============
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
-ಸರಕಾರ ಜಾಗತಿಕ ದರ್ಜೆಯ ನೆಕ್ಸ್ಟ್ ಜನರೇಷನ್ ಬ್ಯಾಂಕ್ಗಳನ್ನು ನಿರ್ಮಿಸಲು ಯತ್ನಿಸುತ್ತಿದೆ.
-12 ವ್ಯವಸ್ಥಿತ, ಪ್ರಬಲ, ಸೂಕ್ತ ಬಂಡವಾಳ ಇರುವ ಬ್ಯಾಂಕ್ಗಳು ಕಾರ್ಯನಿರ್ವಹಿಸಲಿವೆ.
----------
ವಿಲೀನ ಯಾಕೆ?
- ಟಾಪ್ 20 ಜಾಗತಿಕ ಬ್ಯಾಂಕ್ಗಳ ಪಟ್ಟಿಯಲ್ಲಿ ಭಾರತದ ಒಂದು ಬ್ಯಾಂಕ್ ಕೂಡ ಇಲ್ಲ. 5 ಅತಿ ದೊಡ್ಡ ಬ್ಯಾಂಕ್ ಚೀನಾದ್ದಾಗಿದೆ. ಚೀನಾದ ಪ್ರಗತಿಯಲ್ಲಿ ಅವುಗಳ ಪಾತ್ರ ಪ್ರಮುಖ.
- 27 ಬ್ಯಾಂಕ್ಗಳಿದ್ದರೆ ಸರಕಾರ, ಆರ್ಬಿಐಗೆ ಅವುಗಳ ಉಸ್ತುವಾರಿ ಕಷ್ಟಕರ. 4-5ಕ್ಕೆ ಇಳಿಸಿದರೆ ಅನುಕೂಲ.
- ಸಾಲದ ವೆಚ್ಚ ಇಳಿಕೆಯಾಗಲಿದ್ದು, ಬ್ಯಾಂಕಿನ ಸಾಲ ವಿತರಣೆಯ ಸಾಮರ್ಥ್ಯ ವೃದ್ಧಿಸುವ ನಿರೀಕ್ಷೆ
-ದುರ್ಬಲ ಬ್ಯಾಂಕ್ಗಳ ಭವಿಷ್ಯದ ದೃಷ್ಟಿಯಿಂದ ವಿಲೀನ ಸೂಕ್ತ
-ವಸೂಲಾಗದ ಸಾಲದ ನಿರ್ವಹಣೆಗೆ ಅನುಕೂಲ. ಖಾಸಗಿ ಬ್ಯಾಂಕ್ಗಳಲ್ಲಿರುವಂತೆ ಸಾಲ ವಸೂಲಾತಿಗೆ ಹೆಚ್ಚಿನ ಸಿಬ್ಬಂದಿ, ನೆಟ್ವರ್ಕ್ ಸ್ಥಾಪಿಸಬಹುದು.
=============
ವಿಲೀನ ಸೃಷ್ಟಿಸುವ ಸಮಸ್ಯೆಗಳು
-ಪ್ರಾದೇಶಿಕ ಮಟ್ಟದಲ್ಲಿ ಪ್ರಬಲವಾಗಿರುವ ಬ್ಯಾಂಕ್ಗಳ ವಿಲೀನದಿಂದ ಬ್ಯಾಂಕಿಂಗ್ ವಿಕೇಂದ್ರೀಕರಣಕ್ಕೆ ಧಕ್ಕೆ
-ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಗೆ ಹೊಡೆತ.
-ಬಲಿಷ್ಠ ಬ್ಯಾಂಕ್ಗಳಿಗೆ ದುರ್ಬಲ ಬ್ಯಾಂಕ್ಗಳ ಒತ್ತಡ
- ಬ್ಯಾಂಕ್ ಸಿಬ್ಬಂದಿಯ ಅಸಮಾಧಾನ ಬಿಕ್ಕಟ್ಟಿಗೆ ಕಾರಣವಾದೀತು.
-ವಿಲೀನವಾದರೂ ಸೇವೆಯಲ್ಲಿ ಸುಧಾರಣೆ ಆಗದಿದ್ದರೆ ಸಮಸ್ಯೆ
- ಹೆಚ್ಚಿನ ಸ್ವಾಯತ್ತತೆ ಸಿಗದಿದ್ದರೂ ಕಷ್ಟ
=============
ವಿಲೀನದ ಬೆನ್ನಲ್ಲೇ ಬ್ಯಾಂಕ್ಗಳ ಷೇರು ಕುಸಿತ!
ಸಾರ್ವಜನಿಕ ಬ್ಯಾಂಕ್ಗಳ ಮೆಗಾ ವಿಲೀನಕ್ಕೆ ಷೇರು ಹೂಡಿಕೆದಾರರು ನಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಲೀನದ ಬೆನ್ನಲ್ಲೇ ಬಹುತೇಕ ಪಿಎಸ್ಯು ಬ್ಯಾಂಕ್ಗಳ ಷೇರು ದರದಲ್ಲಿ ಶೇ.9-12ರಷ್ಟು ನಷ್ಟವಾಗಿತ್ತು. ವಿಲೀನವಾಗಲಿರುವ ಬ್ಯಾಂಕ್ಗಳ ಷೇರುಗಳೂ ನಷ್ಟಕ್ಕೀಡಾಗಿತ್ತು. ಬ್ಯಾಂಕ್ ವಿಲೀನದ ನಂತರ ಷೇರುಗಳ ಮೌಲ್ಯ ಇಳಿಕೆಯಾಗಬಹುದು ಎಂಬ ಆತಂಕ ಹೂಡಿಕೆದಾರರನ್ನು ಕಾಡುತ್ತಿದೆ. ಸರಕಾರ ಇತ್ತೀಚೆಗೆ ಬಂಡವಾಳ ನೆರವು ಘೋಷಿಸಿದ್ದರೂ, ಷೇರು ಬೆಲೆ ಇಳಿದಿದೆ. ಎಲ್ಐಸಿ ಈ ಬ್ಯಾಂಕ್ಗಳಲ್ಲಿ ಹೊಂದಿರುವ ಷೇರುಗಳ ಮೌಲ್ಯವೂ ಇಳಿಕೆಯಾಗಿದೆ.
ಬ್ಯಾಂಕ್ನ ಗಾತ್ರ ಮುಖ್ಯವಲ್ಲ
ಸಾರ್ವಜನಿಕ ಬ್ಯಾಂಕ್ಗಳ ವಿಲೀನ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಲಿದೆ. ಬ್ಯಾಂಕ್ಗಳ ಗಾತ್ರ ಮುಖ್ಯವಲ್ಲ. ಇದರಿಂದ ಆರ್ಥಿಕ ಮಂದಗತಿಯನ್ನು ತಡೆಯಲು ಅಸಾಧ್ಯ. ದೀರ್ಘಾವಧಿಯಲ್ಲಿ ಒಂದೊಮ್ಮೆ ಯಾವುದಾದರೂ ದೊಡ್ಡ ಬ್ಯಾಂಕ್ ದಿವಾಳಿಯಾದರೆ, ಸರಕಾರಕ್ಕೆ ಅದನ್ನು ಉಳಿಸಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅಮೆರಿಕದಲ್ಲಿ ಮಹಾ ಆರ್ಥಿಕ ಹಿಂಜರಿತದ ವೇಳೆ ಇಂಥ ಸನ್ನಿವೇಶ ಉಂಟಾಗಿತ್ತು. ಹೀಗಾಗಿ ವಿಲೀನದ ಬದಲು ಸರಕಾರ ತನ್ನ ಷೇರುಗಳನ್ನು ಮಾರಾಟಕ್ಕೆ ಸಿದ್ಧತೆ ನಡೆಸುವುದು ಒಳಿತು.
- ಡಿ. ಸುಬ್ಬರಾವ್, ಮಾಜಿ ಗವರ್ನರ್, ಆರ್ಬಿಐ.