ಆ್ಯಪ್ನಗರ

ಬ್ಯಾಂಕಿಂಗ್‌ ವಲಯಕ್ಕೆ ಕಿಸಾನ್‌ ಸ್ಕೀಮ್‌ನಿಂದ ಲಾಭ

ದೇಶದ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ 6,000 ರೂಪಾಯಿ ವಿತರಿಸುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಿಂದ, ಕೃಷಿ ವಲಯಕ್ಕೆ ...

THE ECONOMIC TIMES 6 Feb 2019, 5:00 am
ಹೊಸದಿಲ್ಲಿ: ದೇಶದ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ 6,000 ರೂಪಾಯಿ ವಿತರಿಸುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಿಂದ, ಕೃಷಿ ವಲಯಕ್ಕೆ ಮಾತ್ರವಲ್ಲ ಬ್ಯಾಂಕಿಂಗ್‌ ವಲಯಕ್ಕೂ ಅನುಕೂಲವಾಗಲಿದೆ.
Vijaya Karnataka Web budget 2019 banks to also reap the benefits
ಬ್ಯಾಂಕಿಂಗ್‌ ವಲಯಕ್ಕೆ ಕಿಸಾನ್‌ ಸ್ಕೀಮ್‌ನಿಂದ ಲಾಭ


ಬಜೆಟ್‌ನಲ್ಲಿ ಘೋಷಿಸಲಾದ ಈ ಯೋಜನೆಯಡಿ ವಾರ್ಷಿಕ 75,000 ಕೋಟಿ ರೂ. ಮಂಜೂರಾಗಲಿದೆ. ಬ್ಯಾಂಕ್‌ಗಳ ಮೂಲಕ ರೈತರಿಗೆ ಹಣವನ್ನು ವಿತರಿಸುವ ಪದ್ಧತಿಯನ್ನು ಸರಕಾರ ಅನುಸರಿಸಲಿದೆ. ಸುಮಾರು 12 ಕೋಟಿ ಫಲಾನುಭವಿ ರೈತರ ಜನ್‌ ಧನ್‌ ಖಾತೆಗಳಿಗೆ ಸರಕಾರವು ಹಣ ಹಾಕುತ್ತದೆ. ಇದರಿಂದ ಬ್ಯಾಂಕ್‌ ವ್ಯವಹಾರಗಳಿಗೆ ಅನುಕೂಲವಾಗಲಿದೆ.

ಜ.4ರ ವರೆಗಿನ ಮಾಹಿತಿ ಪ್ರಕಾರ ಬ್ಯಾಂಕ್‌ ಠೇವಣಿಗಳ ಬೆಳವಣಿಗೆ ಶೇ.9.9ರಷ್ಟಿದ್ದರೆ, ಸಾಲ ವಿತರಣೆ ಪ್ರಮಾಣವು ಶೇ.15.5ಕ್ಕೆ ವಿಸ್ತರಣೆಯಾಗಿದೆ. ನೋಟು ಅಮಾನ್ಯತೆ ಬಳಿಕ ಜನಧನ್‌ ಖಾತೆಗಳಲ್ಲಿ ಠೇವಣಿ ಗಣನೀಯ ಏರಿಕೆಯಾಗಿತ್ತು.

ಬ್ಯಾಂಕ್‌ಗಳ ರಾಷ್ಟ್ರೀಕರಣವಾಗಿ 50 ವರ್ಷಗಳು ಆದರೂ, ಈಗಲೂ ದೇಶದ ಬಹುತೇಕ ಜನರು ಆರ್ಥಿಕತೆಯ ಮುಖ್ಯವಾಹಿನಿಯಿಂದ ಹೊರಗುಳಿದಿದ್ದಾರೆ. ಬ್ಯಾಂಕ್‌ಗಳ ಬಳಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಬ್ಯಾಂಕ್‌ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಲು ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯು ಅವಕಾಶ ಕಲ್ಪಿಸುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ