ಆ್ಯಪ್ನಗರ

ಮೋದಿ 2.0 ಬಜೆಟ್‌ ಹೀಗಿರಬಹುದೇ?

ಶುಕ್ರವಾರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡಲಿದ್ದಾರೆ. ಮೋದಿ 2.0 ಆಡಳಿತದಲ್ಲಿ ಹಲವಾರು ನಿರೀಕ್ಷೆಗಳು ಇವೆ.

THE ECONOMIC TIMES 4 Jul 2019, 5:30 am
ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದೆ. ದೇಶದ ನಾನಾ ಕಡೆಗಳಲ್ಲಿ ಬರದ ಸನ್ನಿವೇಶ ಇದೆ. ಈ ಸಂದರ್ಭ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯನ್ನು ಪರಿಗಣಿಸುವುದಿದ್ದರೆ, ಬಜೆಟ್‌ನಲ್ಲಿ 6 ಮುಖ್ಯ ಅಂಶಗಳಿಗೆ ಆದ್ಯತೆ ಸಿಗಬಹುದು. ವಿವರ ಇಂತಿದೆ.
Vijaya Karnataka Web ಬಜೆಟ್‌ 2019
ಬಜೆಟ್‌ 2019


1. ರೈತರಿಗೆ ಬಡ್ಡಿ ರಹಿತ ಸಾಲ:

ಬಿಜೆಪಿಯ ಪ್ರಣಾಳಿಕೆಯಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ 1ರಿಂದ 5 ವರ್ಷಗಳ ಅವಧಿಗೆ ನೀಡುವ 1 ಲಕ್ಷ ರೂ. ತನಕದ ಸಾಲದ ಭರವಸೆ ಇದೆ. ಸದ್ಯಕ್ಕೆ ಈ ಸಾಲಕ್ಕೆ ಶೇ.7ರ ಬಡ್ಡಿ ದರ ಇದೆ. ದೇಶದಲ್ಲಿ 7 ಕೋಟಿಗೂ ಹೆಚ್ಚು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಲಾಗಿದೆ.

2. ಉದ್ಯಮಶೀಲರಿಗೆ 50 ಲಕ್ಷ ರೂ. ತನಕ ಅಡಮಾನ ರಹಿತ ಸಾಲ:

ಮುದ್ರಾ ಯೋಜನೆಗೆ ಬಜೆಟ್‌ನಲ್ಲಿ ಆದ್ಯತೆ ಸಿಗುವ ಸಾಧ್ಯತೆ ಇದೆ. ಸರಕಾರ ಉದ್ಯಮಶೀಲ ಮಹಿಳಾ ಉದ್ಯಮಿಗಳಿಗೆ ಶೇ.50ರಷ್ಟು ಸಾಲಕ್ಕೆ ಹಾಗೂ ಪುರುಷರಿಗೆ ಶೇ.25ರಷ್ಟು ಸಾಲಕ್ಕೆ ತಾನೇ ಖಾತರಿ ನೀಡುವ ಸಾಧ್ಯತೆ ಇದೆ. ಇದು ಉದ್ಯಮಶೀಲತೆಯನ್ನು ಉತ್ತೇಜಿಸಲಿದೆ.

3. 10,000 ರೈತರ ಸಹಕಾರ ಸೊಸೈಟಿ:

ಪ್ರಣಾಳಿಕೆಯಲ್ಲಿ 2022ರ ವೇಳೆಗೆ 10,000 ನೂತನ ರೈತ ಉತ್ಪಾದಕರ ಸಂಸ್ಥೆಗಳನ್ನು (ಎಫ್‌ಪಿಒ) ಸೃಷ್ಟಿಸುವ ಭರವಸೆ ನೀಡಲಾಗಿದೆ. ಕೃಷಿ ಉತ್ಪನ್ನಗಳನ್ನು ನೇರವಾಗಿ ನಗರಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಿಕೊಡಲು ಇದು ಸಹಾಯಕ.

4. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ (ಪಿಡಿಎಸ್‌) ಬಡ ಕುಟುಂಬಗಳಿಗೆ ವಿತರಿಸುವ ಸಬ್ಸಿಡಿ ದರದ ಸಕ್ಕರೆಯ ಪ್ರಮಾಣವನ್ನು ಪ್ರತಿ ಕುಟುಂಬಕ್ಕೆ ಮಾಸಿಕ 13 ಕೆ.ಜಿಗೆ ಏರಿಸುವ ಭರವಸೆಯನ್ನು ಪ್ರಣಾಳಿಕೆ ನೀಡಿದ್ದು, ಬಜೆಟ್‌ನಲ್ಲಿ ಘೋಷಣೆ ನಿರೀಕ್ಷಿಸಲಾಗಿದೆ.

5. ಆಯುಷ್ಮಾನ್‌ ಭಾರತ್‌ ವ್ಯಾಪಕ ವಿಸ್ತರಣೆ ಸಂಭವ.

6. ಜಿಎಸ್‌ಟಿ ಅಡಿಯಲ್ಲಿ ನೋಂದಾಯಿತ ವರ್ತಕರಿಗೆ ತೆರಿಗೆ ರಿಯಾಯಿತಿ ನಿರೀಕ್ಷೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ