ಆ್ಯಪ್ನಗರ

ಬಜೆಟ್‌ಗೆ ಸಿದ್ಧತೆ ಆರಂಭ, ವಿತ್ತ ಸಚಿವಾಲಯದ ಸುತ್ತ ನಿರ್ಬಂಧ

ಕೇಂದ್ರ ಸರಕಾರದ 2019-20ರ ಸಾಲಿನ ಬಜೆಟ್‌ ಮಂಡನೆಗೆ ಸಿದ್ಧತೆ ಆರಂಭವಾಗಿದ್ದು, ಸೋಮವಾರದಿಂದ ಹಣಕಾಸು ಸಚಿವಾಲಯದ ಕಚೇರಿ ಇರುವ ನಾರ್ತ್‌ ಬ್ಲಾಕ್‌ಗೆ ವೀಕ್ಷ ...

PTI 5 Jun 2019, 5:00 am
ಹೊಸದಿಲ್ಲಿ: ಕೇಂದ್ರ ಸರಕಾರದ 2019-20ರ ಸಾಲಿನ ಬಜೆಟ್‌ ಮಂಡನೆಗೆ ಸಿದ್ಧತೆ ಆರಂಭವಾಗಿದ್ದು, ಸೋಮವಾರದಿಂದ ಹಣಕಾಸು ಸಚಿವಾಲಯದ ಕಚೇರಿ ಇರುವ ನಾರ್ತ್‌ ಬ್ಲಾಕ್‌ಗೆ ವೀಕ್ಷ ಕರು ಹಾಗೂ ಮಾಧ್ಯಮಗಳ ಚಲನವಲನಗಳಿಗೆ ನಿರ್ಬಂಧ ವಿಧಿಸಲಾಗಿದೆ.
Vijaya Karnataka Web budget making exercise begins
ಬಜೆಟ್‌ಗೆ ಸಿದ್ಧತೆ ಆರಂಭ, ವಿತ್ತ ಸಚಿವಾಲಯದ ಸುತ್ತ ನಿರ್ಬಂಧ


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಬಜೆಟ್‌ ಟೀಮ್‌ನಲ್ಲಿ ಸಹಾಯಕ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌, ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಇದ್ದಾರೆ. ಅಧಿಕಾರಿಗಳ ತಂಡದಲ್ಲಿ ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್‌ ನೇತೃತ್ವವಹಿಸಿದ್ದು, ವೆಚ್ಚಗಳ ಕಾರ್ಯದರ್ಶಿ ಗಿರೀಶ್‌ ಚಂದ್ರ ಮರ್ಮು, ಕಂದಾಯ ಕಾರ್ಯದರ್ಶಿ ಅಜಯ್‌ ಭೂಷನ್‌ ಪಾಂಡೆ, ಡಿಐಪಿಎಎಂ ಕಾರ್ಯದರ್ಶಿ ಅತನು ಚಕ್ರವರ್ತಿ, ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಇದ್ದಾರೆ.

ಜುಲೈ 5ರಂದು ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಲಿದ್ದು, ಈ ಸಂಬಂಧಿ ಪ್ರಕ್ರಿಯೆಗಳು ಸೋಮವಾರದಿಂದಲೇ ಆರಂಭವಾಗಿವೆ.

ಲೋಕಸಭೆ ಚುನಾವಣೆಗೆ ಮುನ್ನ ಫೆ.1ರಂದು ಮಧ್ಯಂತರ ಬಜೆಟ್‌ ಅನ್ನು ಹಂಗಾಮಿ ಹಣಕಾಸು ಸಚಿವ ಪಿಯೂಶ್‌ ಗೋಯಲ್‌ ಮಂಡಿಸಿದ್ದರು. ಎರಡನೇ ಅವಧಿಗೆ ಎನ್‌ಡಿಎ ಸರಕಾರ ಅಧಿಕಾರ ಹಿಡಿದಿದ್ದು, ಇದೀಗ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದೆ.

ಕಳೆದ 5 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ದೇಶೀಯ ಆರ್ಥಿಕತೆ ಕುಸಿದಿದೆ. ನಿರುದ್ಯೋಗ ಸಮಸ್ಯೆಯೂ ಹೆಚ್ಚುತ್ತಿದೆ. ಈ ಸವಾಲುಗಳ ಮಧ್ಯೆ, ಕೇಂದ್ರ ಬಜೆಟ್‌ ಅನ್ನು ನೂತನ ಸರಕಾರ ರೂಪಿಸಬೇಕಾಗಿದೆ. ಜೆಎನ್‌ಯು ವಿದ್ಯಾರ್ಥಿಯಾದ 59 ವರ್ಷದ ಸೀತಾರಾಮನ್‌, ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ನಿಧಾನಗತಿಯ ಆರ್ಥಿಕತೆ, ಎನ್‌ಪಿಎ, ಉದ್ಯೋಗ ಸೃಷ್ಟಿ, ಎನ್‌ಬಿಎಫ್‌ಸಿ ಬಿಕ್ಕಟ್ಟು, ಖಾಸಗಿ ಹೂಡಿಕೆಗಳು, ರಫ್ತು, ಕೃಷಿ ಸೇರಿದಂತೆ ನಾನಾ ಸಮಸ್ಯೆಗಳಿಗೆ ಆದ್ಯತೆ ನೀಡಬೇಕಾಗಿದೆ.

ಚಿನ್ನಕ್ಕೆ ಕಾವಲು ಕಾಯುವಂತೆ ಎಚ್ಚರಿಕೆ:

ಬಜೆಟ್‌ ಅನ್ನುವುದು ಗೌಪ್ಯತೆಯ ವಿಷಯವಾಗಿದ್ದು, ಚಿನ್ನಕ್ಕೆ ಕಾವಲು ಕಾಯುವಂತೆಯೇ ಹಣಕಾಸು ಸಚಿವಾಲಯದ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿದ್ದಾರೆ. ಬಜೆಟ್‌ ಗೌಪ್ಯತೆಯನ್ನು ರಕ್ಷಿಸುವ ಸಲುವಾಗಿ ಹಣಕಾಸು ಸಚಿವಾಲಯದ ಕಚೇರಿಗಳ ಬಹುತೇಕ ಕಂಪ್ಯೂಟರ್‌ಗಳಲ್ಲಿ ಖಾಸಗಿ ಇ-ಮೇಲ್‌ ಸೌಲಭ್ಯಗಳನ್ನು ಬ್ಲಾಕ್‌ ಮಾಡಲಾಗಿದೆ.

17ನೇ ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸಂಸದರು, ಜೂನ್‌ 17ರಿಂದ ಜುಲೈ 26ರ ನಡುವಿನ ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿದೆ. 2010-20ರ ಆರ್ಥಿಕ ಸಮೀಕ್ಷೆಯನ್ನು ಜು.4ರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಇದರ ಮರುದಿನವಾದ ಜೂ.5ರಂದು ಬಜೆಟ್‌ ಮಂಡನೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ