ಸಾಲ ಸುಸ್ತಿದಾರರ ಮಾಹಿತಿ ಬ್ಯಾಂಕ್ಗಳಿಗೆ ಒದಗಿಸಲು ಐ-ಟಿಗೆ ಸೂಚನೆ
ಸಾರ್ವಜನಿಕ ಬ್ಯಾಂಕ್ಗಳಲ್ಲಿ ಸಾಲ ತೆಗೆದುಕೊಂಡು, ಮರು ಪಾವತಿಸದೆ ಸುಸ್ತಿದಾರರಾಗಿರುವವರ ಆದಾಯ ಹಾಗೂ ಆಸ್ತಿ ವಿವರಗಳನ್ನು ಬ್ಯಾಂಕ್ಗಳಿಗೆ ಕೋರಿಕೆಯ ಮೇರೆಗೆ ಒದಗಿಸುವಂತೆ ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಗೆ ನಿರ್ದೇಶಿಸಿದೆ.
THE ECONOMIC TIMES 27 Jun 2019, 5:00 am
ಹೊಸದಿಲ್ಲಿ : ಸಾರ್ವಜನಿಕ ಬ್ಯಾಂಕ್ಗಳಲ್ಲಿ ಸಾಲ ತೆಗೆದುಕೊಂಡು, ಮರು ಪಾವತಿಸದೆ ಸುಸ್ತಿದಾರರಾಗಿರುವವರ ಆದಾಯ ಹಾಗೂ ಆಸ್ತಿ ವಿವರಗಳನ್ನು ಬ್ಯಾಂಕ್ಗಳಿಗೆ ಕೋರಿಕೆಯ ಮೇರೆಗೆ ಒದಗಿಸುವಂತೆ ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಗೆ ನಿರ್ದೇಶಿಸಿದೆ.
ಸುಸ್ತಿ ಸಾಲ ಹೊಂದಿರುವ ಕಂಪನಿಗಳ ವಿರುದ್ಧ ಕಾನೂನು ಕ್ರಮವನ್ನು ಬಿಗಿಗೊಳಿಸುವುದು ಹಾಗೂ ಸಾರ್ವಜನಿಕ ಹಣವನ್ನು ಮರು ವಸೂಲು ಮಾಡುವುದು ಇದರ ಉದ್ದೇಶವಾಗಿದೆ.
ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇಂಥ ಪ್ರಕರಣಗಳಲ್ಲಿ ಸುಸ್ತಿ ಸಾಲಗಾರರ ಸಂಪತ್ತು, ಸ್ಥಿರಾಸ್ತಿ, ಆದಾಯ, ಖಾತೆಯ ವಿವರಗಳನ್ನು ಸಾರ್ವಜನಿಕ ಬ್ಯಾಂಕ್ಗಳು ಕೋರಿದಾಗ ಸಲ್ಲಿಸುವಂತೆ ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.
ಐ-ಟಿ ಇಲಾಖೆಯ ನೀತಿಗಳನ್ನು ರೂಪಿಸುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಈ ಸಂಬಂಧ ತನ್ನ ಎಲ್ಲ ಕ್ಷೇತ್ರಾಧಿಕಾರಿಗಳಿಗೆ ಆದೇಶಿಸಿದೆ. ಇದರಿಂದ ಬ್ಯಾಂಕ್ಗಳಿಗೆ ಸಾಲ ಬಾಕಿಯನ್ನು ಮರು ವಸೂಲು ಮಾಡುವುದಕ್ಕೆ ಹಾದಿ ಸುಗಮವಾಗುವ ನಿರೀಕ್ಷೆ ಇದೆ.
ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮುಂತಾದ ಉದ್ಯಮಿಗಳು ಸಾರ್ವಜನಿಕ ಬ್ಯಾಂಕ್ಗಳಿಗೆ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ. ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈ ವಿತ್ತಾಪರಾಧಿಗಳಿಂದ ಸಾಲ ಮರು ವಸೂಲಿಗೆ ಬ್ಯಾಂಕ್ಗಳು ಶತಾತಗತಾಯ ಯತ್ನಿಸುತ್ತಿವೆ.
ಸುಸ್ತಿ ಸಾಲ ಹೊಂದಿರುವ ಕಂಪನಿಗಳ ವಿರುದ್ಧ ಕಾನೂನು ಕ್ರಮವನ್ನು ಬಿಗಿಗೊಳಿಸುವುದು ಹಾಗೂ ಸಾರ್ವಜನಿಕ ಹಣವನ್ನು ಮರು ವಸೂಲು ಮಾಡುವುದು ಇದರ ಉದ್ದೇಶವಾಗಿದೆ.
ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇಂಥ ಪ್ರಕರಣಗಳಲ್ಲಿ ಸುಸ್ತಿ ಸಾಲಗಾರರ ಸಂಪತ್ತು, ಸ್ಥಿರಾಸ್ತಿ, ಆದಾಯ, ಖಾತೆಯ ವಿವರಗಳನ್ನು ಸಾರ್ವಜನಿಕ ಬ್ಯಾಂಕ್ಗಳು ಕೋರಿದಾಗ ಸಲ್ಲಿಸುವಂತೆ ಸಿಬಿಡಿಟಿಯು ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ.
ಐ-ಟಿ ಇಲಾಖೆಯ ನೀತಿಗಳನ್ನು ರೂಪಿಸುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಈ ಸಂಬಂಧ ತನ್ನ ಎಲ್ಲ ಕ್ಷೇತ್ರಾಧಿಕಾರಿಗಳಿಗೆ ಆದೇಶಿಸಿದೆ. ಇದರಿಂದ ಬ್ಯಾಂಕ್ಗಳಿಗೆ ಸಾಲ ಬಾಕಿಯನ್ನು ಮರು ವಸೂಲು ಮಾಡುವುದಕ್ಕೆ ಹಾದಿ ಸುಗಮವಾಗುವ ನಿರೀಕ್ಷೆ ಇದೆ.
ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮುಂತಾದ ಉದ್ಯಮಿಗಳು ಸಾರ್ವಜನಿಕ ಬ್ಯಾಂಕ್ಗಳಿಗೆ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ. ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈ ವಿತ್ತಾಪರಾಧಿಗಳಿಂದ ಸಾಲ ಮರು ವಸೂಲಿಗೆ ಬ್ಯಾಂಕ್ಗಳು ಶತಾತಗತಾಯ ಯತ್ನಿಸುತ್ತಿವೆ.