ಆ್ಯಪ್ನಗರ

ಆರ್ಥಿಕ ಪ್ರಗತಿಯ ವಿಘ್ನ ನಿವಾರಣೆಗೆ ಕೇಂದ್ರ ಕ್ರಮ

ಆರ್ಥಿಕ ಪ್ರಗತಿಗೆ ಎದುರಾಗಿರುವ ಎಲ್ಲ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ ಸುಧಾರಣೆ ಕ್ರಮಗಳು ಜಾರಿಗೆ ಬರಲಿವೆ.

THE ECONOMIC TIMES 12 Aug 2019, 5:00 am
ಹೊಸದಿಲ್ಲಿ: ದೇಶದ ಆರ್ಥಿಕ ಪ್ರಗತಿಗೆ ಎದುರಾಗಿರುವ ವಿಘ್ನಗಳನ್ನು ತೊಡೆದುಹಾಕಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.
Vijaya Karnataka Web ಆರ್ಥಿಕ ಪ್ರಗತಿ
ಆರ್ಥಿಕ ಪ್ರಗತಿ


ಉತ್ಪಾದಕ ಕ್ಷೇತ್ರಗಳಿಗೆ ಹಣಕಾಸು ನೆರವು ಲಭಿಸುವಂತೆ ನೋಡಿಕೊಳ್ಳುವುದು, ಸಮಗ್ರ ಬೆಳವಣಿಗೆಗೆ ಉತ್ತೇಜನ ಸರಕಾರದ ಮುಂದಿರುವ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯಮ ವಲಯದ ಪ್ರಮುಖರ ಜತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾತುಕತೆ ನಡೆಸಿದ ನಂತರ ಸರಕಾರ ಈ ಬಗ್ಗೆ ಪರಿಶೀಲಿಸುತ್ತಿದೆ.ಹೀಗಿದ್ದರೂ ಜಿಎಸ್‌ಟಿ ದರ ಇಳಿಕೆಯ ಪ್ರಸ್ತಾಪ ಕಾರ‍್ಯತಂತ್ರದ ಭಾಗವಾಗಿರುವ ನಿರೀಕ್ಷೆ ಇಲ್ಲ. ತೆರಿಗೆ ದರಗಳು ಈಗಾಗಲೇ ಹಿಂದಿಗಿಂತ ಕಡಿಮೆ ಇದೆ ಎಂದು ಸರಕಾರ ಭಾವಿಸಿರುವುದು ಇದಕ್ಕೆ ಕಾರಣ.

ಬ್ಯಾಂಕಿಂಗ್‌, ಎಂಎಸ್‌ಎಂಇ, ಆಟೊಮೊಬೈಲ್‌ ವಲಯಕ್ಕೆ ಸರಕಾರ ಉತ್ತೇಜನ ನೀಡುವ ಸಾಧ್ಯತೆ ಇದೆ. ಸಾಲದ ವಿತರಣೆ, ಕಡಿಮೆ ಬಡ್ಡಿ ದರದಲ್ಲಿ ಸಾಲ, ನೀತಿಗಳನ್ನು ಸಡಿಲಗೊಳಿಸುವುದು ಇತ್ಯಾದಿ ಕ್ರಮಗಳು ಅಗತ್ಯ ಎಂದು ಉದ್ಯಮ ವಲಯದ ತಜ್ಞರು ಒತ್ತಾಯಿಸಿದ್ದಾರೆ.

ಚುನಾವಣೆಯ ವೇಳೆಯಾಗಿದ್ದರೂ ಏಪ್ರಿಲ್‌-ಜೂನ ತ್ರೈಮಾಸಿಕದಲ್ಲಿ ಜಿಡಿಪಿ ಸಂಗ್ರಹದಲ್ಲಿ ಶೇ.9ರಷ್ಟು ಏರಿಕೆಯಾಗಿದೆ. ನೇರ ತೆರಿಗೆ ಸಂಗ್ರಹದಲ್ಲಿ ಶೇ.12ರಷ್ಟು ಹೆಚ್ಚಳವಾಗಿದೆ. ಕಾರ್ಪೊರೇಟ್‌ ತೆರಿಗೆ ಶೇ.13ರ ಪ್ರಗತಿ ದಾಖಲಿಸಿದೆ. ಮಾಸಿಕ ಸರಾಸರಿ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗುತ್ತಿರುವುದು ಸಕಾರಾತ್ಮಕ ಸಂಗತಿ. ಜಿಎಸ್‌ಟಿ ಸಂಗ್ರಹದಲ್ಲಿ ಮತ್ತಷ್ಟು ಸುಧಾರಣೆಗೆ ಅವಕಾಶಗಳು ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ