ಆ್ಯಪ್ನಗರ

ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ: ತಕ್ಷಣದಿಂದಲೇ ಈರುಳ್ಳಿ ರಫ್ತು ಬಂದ್

ದಿನೇ ದಿನೇ ಈರುಳ್ಳಿ ದರ ಏರುತ್ತಿದ್ದು, ಬೆಲೆ ಹೆಚ್ಚಳ ತಡೆಯುವ ನಿಟ್ಟಿನಲ್ಲಿ ಈರುಳ್ಳಿ ರಫ್ತು ವಹಿವಾಟನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಕೇಂದ್ರ ಸರಕಾರ ನಿರ್ಬಂಧಿಸಿದೆ.

Vijaya Karnataka Web 30 Sep 2019, 7:54 am
ಹೊಸದಿಲ್ಲಿ: ಈರುಳ್ಳಿ ದರ ದಿನದಿಂದದಿನಕ್ಕೆ ಏರುತ್ತಿದ್ದು, ಬೆಲೆ ಏರಿಕೆ ತಡೆಯುವ ನಿಟ್ಟಿನಲ್ಲಿಈರುಳ್ಳಿ ರಫ್ತು ವಹಿವಾಟನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಕೇಂದ್ರ ಸರಕಾರವು ನಿರ್ಬಂಧಿಸಿದೆ. ದೇಶೀಯ ಮಾರುಕಟ್ಟೆಯಲ್ಲಿಈರುಳ್ಳಿ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿಸರಕಾರವು ಈ ಕ್ರಮ ಕೈಗೊಂಡಿದೆ. ಅಲ್ಲದೇ, ವರ್ತಕರ ಈರುಳ್ಳಿ ದಾಸ್ತಾನಿಗೂ ಮಿತಿ ವಿಧಿಸಿದೆ.
Vijaya Karnataka Web onion


ಚಿಲ್ಲರೆ ಮಾರಾಟಗಾರರು 100 ಕ್ವಿಂಟಾಲ್‌ಗಳನ್ನು ಮತ್ತು ಸಗಟು ಮಾರಾಟಗಾರರು 500 ಕ್ವಿಂಟಾಲ್‌ಗಳನ್ನು ಮಾತ್ರ ದಾಸ್ತಾನು ಮಾಡಲು ಸರಕಾರವು ಅವಕಾಶ ನೀಡಿದೆ. ಈ ಬಗ್ಗೆ ನಿಗಾವಹಿಸುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ಸೂಚಿಸಿದೆ.

ಈರುಳ್ಳಿ ಬೆಲೆ ಗಗನಮುಖಿ

ಭೂತಾನ್‌, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾಮತ್ತಿತರ ದೇಶಗಳಿಗೆ ಭಾರತದ ಈರುಳ್ಳಿಯನ್ನು ಹೆಚ್ಚಿನ ಸಂಖ್ಯೆಯಲ್ಲಿರಫುತ್ರ್ತ ಮಾಡಲಾಗುತ್ತದೆ. ರಫ್ತು ನಿರ್ಬಂಧದ ಪರಿಣಾಮ, ಬೇರೆ ದೇಶಗಳಲ್ಲೂಈರುಳ್ಳಿ ದರ ಏರಿಕೆಯಾಗುವ ಅವಕಾಶಗಳಿವೆ.

ರಾಜಧಾನಿ ಹೊಸದಿಲ್ಲಿಸೇರಿದಂತೆ ದೇಶದ ನಾನಾ ಭಾಗಗಳಲ್ಲಿಈರುಳ್ಳಿಯು ಕೆ.ಜಿಗೆ 60-80 ರೂ.ಗೆ ಮಾರಾಟವಾಗುತ್ತಿದೆ. ಗ್ರಾಹಕರಿಗೆ ನೆರವಾಗುವ ಉದ್ದೇಶದಿಂದ ಹೊಸದಿಲ್ಲಿಯಲ್ಲಿಮದರ್‌ ಡೇರಿ ಮತ್ತು ನಫೆಡ್‌ ಮತ್ತು ಎನ್‌ಸಿಸಿಎಫ್‌ಗಳು 23.90 ರೂ.ಗೆ ಈರುಳ್ಳಿಯನ್ನು ಮಾರಾಟ ಮಾಡುತ್ತಿವೆ.

ಈರುಳ್ಳಿ ಕೃಷಿಯಲ್ಲಿಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ಎರಡನೇ ಸ್ಥಾನದಲ್ಲಿದೆ. ವಿಶ್ವದ ಒಟ್ಟು ಈರುಳ್ಳಿ ಉತ್ಪಾದನೆಯಲ್ಲಿಭಾರತದ ಪಾಲು ಶೇ.19.90ರಷ್ಟಿದೆ. ಭಾರತದಲ್ಲಿಅತಿಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ. ಇಲ್ಲಿ2,592.2 ಟನ್‌ ಈರುಳ್ಳಿ ಬೆಳೆಯಲಾಗುತ್ತದೆ. ಈ ಎರಡು ರಾಜ್ಯಗಳಲ್ಲಿನೆರೆ ಉಂಟಾಗಿ ಈರುಳ್ಳಿ ಕೊಳೆತು ಸರಬರಾಜಿಗೆ ತೊಡಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ