ಹೊಸದಿಲ್ಲಿ: ನೂತನ ಫಾರ್ಮಾ ಆರ್&ಡಿ ನೀತಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಲಿದೆ. ಚೀನಾ ಮೇಲಿನ ಅವಲಂಬನೆ ತಡೆಯಲು ಹೊಸ ನೀತಿಯ ಅಗತ್ಯ ಇದೆ ಎಂದು ವಿಶ್ಲೇಷಿಸಲಾಗಿದೆ.
ಹೊಸ ನೀತಿಯ ಪರಿಣಾಮ ದೇಶದಲ್ಲಿ ಜಾಗತಿಕ ದರ್ಜೆಯ ಔಷಧ ಸಂಶೋಧನೆ ಮತ್ತು ಅಭಿವೃದ್ಧಿಯ ವ್ಯವಸ್ಥೆ ಉಂಟಾಗಲಿದೆ ಎಂದು ಫಾರ್ಮಾ ಕಾರ್ಯದರ್ಶಿ ಪಿ.ಡಿ. ವಘೇಲಾ ತಿಳಿಸಿದ್ದಾರೆ.
ಸಗಟು ಔಷಧ ಖರೀದಿಯಲ್ಲಿ ಭಾರತವು ಸ್ವಾವಲಂಬಿಯಾಗಲು ಹೊಸ ನೀತಿ ಸಹಾಯಕವಾಗಲಿದೆ. ಚೀನಾದ ಮೇಲೆ ಅತಿಯಾದ ಅವಲಂಬನೆಯನ್ನು ತಡೆಯಬಹುದು ಎಂದು ಅವರು ತಿಳಿಸಿದರು.
ಚಿನ್ನದ ಸಾಲಕ್ಕೆ ಬೇಡಿಕೆ ಹೆಚ್ಚಳ, ಸಾಲ ನೀಡಲು ಬ್ಯಾಂಕ್ ಗಳಲ್ಲಿ ಪೈಪೋಟಿ
ವಘೇಲಾ ನೇತೃತ್ವದ ಸಮಿತಿಯು ನೂತನ ಫಾರ್ಮಾ ಆರ್ಆ್ಯಂಡ್ಡಿ ಪಾಲಿಸಿಯನ್ನು ಅಂತಿಮಪಡಿಸಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಮುಖರು, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮೊದಲಾದವರು ಸಮಿತಿಯಲ್ಲಿ ಇದ್ದಾರೆ.
ಕೊರೊನೋತ್ತರ ಅವಧಿಯಲ್ಲಿ ಭಾರತ ಔಷಧ ಉತ್ಪಾದನಾ ವಲಯದಲ್ಲಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ವಘೇಲಾ ತಿಳಿಸಿದ್ದಾರೆ.
ಋುಣಮುಕ್ತ ಕಾಯಿದೆ ನಂಬಿ ಕೈಸುಟ್ಟುಕೊಂಡ ಜನ: ಜಾರಿಗೆ ಬರದ ಕಾನೂನು, ಎಚ್ಡಿಕೆ ಗರಂ!
ಸಗಟು ಔಷಧಕ್ಕೆ ಸಂಬಂಧಿಸಿ 63 ಪರ್ಸೆಂಟ್ನಷ್ಟು ಬೇಡಿಕೆಯನ್ನು ಆಮದು ಮೂಲಕ ಪೂರೈಸಲಾಗುತ್ತಿದೆ. ಇದನ್ನು ತಪ್ಪಿಸಬೇಕಾಗಿದೆ. ಭಾರತದಲ್ಲಿ ಔಷಧಗಳಿಗೆ ಸಂಬಂಧಿಸಿದಂತೆ ಸುಸಜ್ಜಿತ ಆರ್ ಆ್ಯಂಡ್ ಡಿ ಕೇಂದ್ರಗಳ ಅಗತ್ಯತೆ ಇದೆ. ಹೀಗಾಗಿ ಔಷಧ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಲಿದೆ ಎಂದಿದ್ದಾರೆ.
ಹೊಸ ನೀತಿಯ ಪರಿಣಾಮ ದೇಶದಲ್ಲಿ ಜಾಗತಿಕ ದರ್ಜೆಯ ಔಷಧ ಸಂಶೋಧನೆ ಮತ್ತು ಅಭಿವೃದ್ಧಿಯ ವ್ಯವಸ್ಥೆ ಉಂಟಾಗಲಿದೆ ಎಂದು ಫಾರ್ಮಾ ಕಾರ್ಯದರ್ಶಿ ಪಿ.ಡಿ. ವಘೇಲಾ ತಿಳಿಸಿದ್ದಾರೆ.
ಸಗಟು ಔಷಧ ಖರೀದಿಯಲ್ಲಿ ಭಾರತವು ಸ್ವಾವಲಂಬಿಯಾಗಲು ಹೊಸ ನೀತಿ ಸಹಾಯಕವಾಗಲಿದೆ. ಚೀನಾದ ಮೇಲೆ ಅತಿಯಾದ ಅವಲಂಬನೆಯನ್ನು ತಡೆಯಬಹುದು ಎಂದು ಅವರು ತಿಳಿಸಿದರು.
ಚಿನ್ನದ ಸಾಲಕ್ಕೆ ಬೇಡಿಕೆ ಹೆಚ್ಚಳ, ಸಾಲ ನೀಡಲು ಬ್ಯಾಂಕ್ ಗಳಲ್ಲಿ ಪೈಪೋಟಿ
ವಘೇಲಾ ನೇತೃತ್ವದ ಸಮಿತಿಯು ನೂತನ ಫಾರ್ಮಾ ಆರ್ಆ್ಯಂಡ್ಡಿ ಪಾಲಿಸಿಯನ್ನು ಅಂತಿಮಪಡಿಸಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪ್ರಮುಖರು, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮೊದಲಾದವರು ಸಮಿತಿಯಲ್ಲಿ ಇದ್ದಾರೆ.
ಕೊರೊನೋತ್ತರ ಅವಧಿಯಲ್ಲಿ ಭಾರತ ಔಷಧ ಉತ್ಪಾದನಾ ವಲಯದಲ್ಲಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಹೊಸ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ವಘೇಲಾ ತಿಳಿಸಿದ್ದಾರೆ.
ಋುಣಮುಕ್ತ ಕಾಯಿದೆ ನಂಬಿ ಕೈಸುಟ್ಟುಕೊಂಡ ಜನ: ಜಾರಿಗೆ ಬರದ ಕಾನೂನು, ಎಚ್ಡಿಕೆ ಗರಂ!
ಸಗಟು ಔಷಧಕ್ಕೆ ಸಂಬಂಧಿಸಿ 63 ಪರ್ಸೆಂಟ್ನಷ್ಟು ಬೇಡಿಕೆಯನ್ನು ಆಮದು ಮೂಲಕ ಪೂರೈಸಲಾಗುತ್ತಿದೆ. ಇದನ್ನು ತಪ್ಪಿಸಬೇಕಾಗಿದೆ. ಭಾರತದಲ್ಲಿ ಔಷಧಗಳಿಗೆ ಸಂಬಂಧಿಸಿದಂತೆ ಸುಸಜ್ಜಿತ ಆರ್ ಆ್ಯಂಡ್ ಡಿ ಕೇಂದ್ರಗಳ ಅಗತ್ಯತೆ ಇದೆ. ಹೀಗಾಗಿ ಔಷಧ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಲಿದೆ ಎಂದಿದ್ದಾರೆ.