ಆ್ಯಪ್ನಗರ

ಆರ್ಥಿಕ ಕುಸಿತ: ಕೇಂದ್ರದಿಂದ 2 ಲಕ್ಷ ಕೋಟಿ ರೂ. ವೆಚ್ಚ ಕಡಿತ?

ತೆರಿಗೆ ಆದಾಯ ಕುಸಿತವಾಗಿದ್ದು, ಕೇಂದ್ರ ಸರಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿತನ್ನ ವೆಚ್ಚವನ್ನು 2 ಲಕ್ಷ ಕೋಟಿ ರೂ ಕಡಿತ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

Vijaya Karnataka Web 7 Jan 2020, 10:12 pm
ಹೊಸದಿಲ್ಲಿ: ತೆರಿಗೆ ಆದಾಯ ಕುಸಿತವಾಗಿದ್ದು, ಕೇಂದ್ರ ಸರಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿತನ್ನ ವೆಚ್ಚವನ್ನು 2 ಲಕ್ಷ ಕೋಟಿ ರೂ. ಕಡಿತ ಮಾಡುವ ಸಾಧ್ಯತೆ ಇದೆ.
Vijaya Karnataka Web ಹಣ ಉಳಿತಾಯ
ಹಣ ಉಳಿತಾಯ


ಕೇಂದ್ರವು 27.86 ಲಕ್ಷ ಕೋಟಿ ರೂ.ಗಳ ಒಟ್ಟು ವೆಚ್ಚದ ಪೈಕಿ ಶೇ.65ರಷ್ಟನ್ನು ನವೆಂಬರ್‌ ಅಂತ್ಯದ ಹೊತ್ತಿಗೆ ಖರ್ಚು ಮಾಡಿದೆ. ತೆರಿಗೆ ಆದಾಯದ ಇಳಿಕೆ, ಆರ್ಥಿಕತೆ ಬೆಳವಣಿಗೆಯಲ್ಲಿನ ಕುಸಿತ ಮತ್ತಿತರ ಅಂಶಗಳು ಸರಕಾರದ ಮೇಲೆ ಒತ್ತಡ ಸೃಷ್ಟಿಸಿವೆ. ವಿತ್ತೀಯ ಕೊರತೆಯ ಗುರಿ ದಾಟುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಸರಿದೂಗಿಸಲು ವೆಚ್ಚದಲ್ಲಿಕಡಿತ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

2 ಲಕ್ಷ ಕೋಟಿ ರೂ. ಅಂದರೇ, ಒಟ್ಟು ವೆಚ್ಚದಲ್ಲಿ ಶೇ.7ರಷ್ಟನ್ನು ಕಡಿತ ಮಾಡಲು ಸರಕಾರ ಮುಂದಾಗಿದೆ.

ಕಳೆದ ಎರಡು ದಿನಗಳಲ್ಲಿ10 ಗ್ರಾಮ್‌ಗೆ 1,200 ರೂ. ಏರಿಕೆಯಾಗಿದ್ದ ಚಿನ್ನದ ದರ, ಮಂಗಳವಾರ ತುಸು ಇಳಿಕೆಯಾಗಿದೆ. ರಾಜಧಾನಿ ದಿಲ್ಲಿಯಲ್ಲಿಚಿನ್ನದ ದರ 10 ಗ್ರಾಮ್‌ಗೆ 200 ರೂ. ಇಳಿದಿದ್ದು 40,265 ರೂ.ಗೆ ಬಂದಿದೆ.

ಬೆಂಗಳೂರಿನಲ್ಲಿಶುದ್ಧ ಚಿನ್ನದ ದರ 41,230 ರೂ.ಗೆ ಇಳಿದಿದೆ. ಬೆಳ್ಳಿ ದರವು ಕೆ.ಜಿಗೆ 250 ರೂ. ಇಳಿಕೆಯಾಗಿದ್ದು 50,750 ರೂ.ಗೆ ತಗ್ಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಚಿನ್ನ-ಬೆಳ್ಳಿ ದರ ತೀವ್ರ ಪ್ರಮಾಣದಲ್ಲಿಏರಿಕೆಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ