ಆ್ಯಪ್ನಗರ

ಇಎಸ್‌ಐ ವಂತಿಗೆ ದರ ಕಡಿತ

ಸದ್ಯ ಶೇ.6.5ರಷ್ಟಿರುವ ಉದ್ಯೋಗಿ ಮತ್ತು ಮಾಲೀಕರ ವಿಮೆ ವಂತಿಗೆ ಪಾಲನ್ನು ಶೇ.4ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಕಂಪನಿಗಳಿಗೆ ವಾರ್ಷಿಕ 5,000 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

THE ECONOMIC TIMES 14 Jun 2019, 9:30 am
ಹೊಸದಿಲ್ಲಿ: ನೌಕರರ ಆರೋಗ್ಯ ವಿಮಾ (ಇಎಸ್‌ಐ) ಯೋಜನೆಗೆ ಕಂಪನಿಯ ಮಾಲೀಕರು ಮತ್ತು ಉದ್ಯೋಗಿಗಳಿಂದ ಸಂದಾಯವಾಗುತ್ತಿದ್ದ ವಿಮೆ ವಂತಿಗೆ ಪಾಲಿನಲ್ಲಿ ಕಡಿತ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
Vijaya Karnataka Web ESI


ಸದ್ಯ ಶೇ.6.5ರಷ್ಟಿರುವ ಉದ್ಯೋಗಿ ಮತ್ತು ಮಾಲೀಕರ ವಿಮೆ ವಂತಿಗೆ ಪಾಲನ್ನು ಶೇ.4ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಕಂಪನಿಗಳಿಗೆ ವಾರ್ಷಿಕ 5,000 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಸರಕಾರದ ಈ ಕ್ರಮದಿಂದ ಮಾಲೀಕರ ಆರೋಗ್ಯ ವಂತಿಗೆ ಪಾಲು ಶೇ.4.75ರಿಂದ 3.25ಕ್ಕೆ ಇಳಿಕೆಯಾದರೆ, ಉದ್ಯೋಗಿಗಳ ವಂತಿಗೆ ಪಾಲು ಶೇ.1.75ರಿಂದ 0.75ಕ್ಕೆ ಇಳಿಕೆಯಾಗಲಿದೆ. ಇಎಸ್‌ಐ ವಿಮೆ ಕಡಿತದ ಈ ಆದೇಶ ಜುಲೈ 1ರಿಂದ ಜಾರಿಗೆ ಬರಲಿದೆ. ಇದರಿಂದ ದೇಶದ 3.6 ಕೋಟಿ ಉದ್ಯೋಗಿಗಳಿಗೆ ಮತ್ತು 12.85 ಲಕ್ಷ ಮಾಲೀಕರಿಗೆ ಉಳಿತಾಯ ಅನುಕೂಲವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಪ್ರಕಟಣೆ ತಿಳಿಸಿದೆ.

2018-19ರ ಸಾಲಿನಲ್ಲಿ ಉದ್ಯೋಗಿಗಳು ಮತ್ತು ಮಾಲೀಕರಿಂದ ಇಎಸ್‌ಐಗೆ ಸಂದಾಯವಾದ ಆರೋಗ್ಯ ವಿಮೆಯ ಒಟ್ಟು ಮೊತ್ತ 22,279 ಕೋಟಿ ರೂ.ಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ