ಹೊಸದಿಲ್ಲಿ: ಸರಕಾರ ಗೋಧಿ ಮತ್ತು ತೊಗರಿ ಬೇಳೆ ಆಮದು ಮೇಲೆ ಶೇ.10ರಷ್ಟು ಆಮದು ಸುಂಕವನ್ನು ತಕ್ಷಣದಿಂದ ಅನ್ವಯವಾಗುವಂತೆ ವಿಧಿಸಿದೆ. ಈ ವರ್ಷ ಇವೆರಡೂ ಬಂಪರ್ ಬೆಳೆಯಾಗಿದ್ದು, ರೈತರ ಹಿತಾಸಕ್ತಿ ದೃಷ್ಟಿಯಿಂದ ಶೇ.10ರಷ್ಟು ಆಮದು ಸುಂಕವನ್ನು ವಿಧಿಸಲಾಗಿದೆ.
ಸರಕಾರ ಕಳೆದ ಡಿಸೆಂಬರ್ 8ರಂದು ಗೋಧಿಯ ಮೇಲಿನ ಕಸ್ಸಮ್ಸ್ ಸುಂಕವನ್ನು ಶೇ.10ರಿಂದ ಶೂನ್ಯಕ್ಕೆ ಇಳಿಸಿತ್ತು. ದೇಶೀಯವಾಗಿ ತೊಗಿರ ಬೇಲೆಯ ಲಭ್ಯತೆ ಹೆಚ್ಚಿಸುವುದು ಮತ್ತು ರಿಟೇಲ್ ದರ ನಿಯಂತ್ರಣ ಇದರ ಉದ್ದೇಶವಾಗಿತ್ತು.
ಲೋಕಸಭೆಯಲ್ಲಿ ಹಣಕಾಸು ಖಾತೆಯ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಈ ವಿಷಯ ತಿಳಿಸಿದರು.
ಇದರಿಂದ ಈಗಿನ ಆಮದು ಮಟ್ಟವನ್ನು ಪರಿಗಣಿಸಿದರೆ, ಸರಕಾರದ ಬೊಕ್ಕಸಕ್ಕೆ 840 ಕೋಟಿ ರೂ. ತೆರಿಗೆ ಆದಾಯ ನಷ್ಟವಾಗಲಿದೆ.
ಸಗಟು ಮಾರುಕಟ್ಟೆಯಲ್ಲಿ ಗೋಧಿ, ತೊಗರಿ ದರ ಕುಸಿತವನ್ನು ಇದು ತಡೆಯಲಿದೆ. ರೈತರಿಗೆ ಇದು ಅನುಕೂಲಕರವಾಗಲಿದೆ.ಗೋಧಿಯ ಹೆಸ ಬೆಳೆ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ನ ಮಂಡಿಗಳಿಗೆ ಆವಕವಾಗತೊಡಗಿದೆ.
ಸರಕಾರದ ಅಂದಾಜು ಪ್ರಕಾರ, 2016-17ರಲ್ಲಿ 9.66 ಕೋಟಿ ಟನ್ ಗೋಧಿ ಉತ್ಪಾದನೆಯನ್ನು ಅಂದಾಜು ಮಾಡಲಾಗಿದೆ. 2015-16ರಲ್ಲಿ ಉತ್ತಮ ಮುಂಗಾರಿನ ಪರಿಣಾಮ 9.22 ಕೋಟಿ ಟನ್ ಗೋಧಿ ಉತ್ಪಾದನೆಯಾಗಿತ್ತು.