ಆ್ಯಪ್ನಗರ

ರಾಜ್ಯ ವಿಮೆ ಕಂಪನಿಗಳಿಗೆ 12,000 ಕೋಟಿ ರೂ.

ಸರಕಾರ ಸಾರ್ವಜನಿಕ ವಲಯದ ನ್ಯಾಶನಲ್‌ ಇನ್ಷೂರೆನ್ಸ್‌, ಒರಿಯೆಂಟಲ್‌ ಇನ್ಷೂರೆನ್ಸ್‌ ಮತ್ತು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಕಂಪನಿಗಳಿಗೆ 12,000 ಕೋಟಿ ರೂ. ಬಂಡವಾಳ ನೆರವನ್ನು ಪ್ರಕಟಿಸಿದೆ.

Vijaya Karnataka Web 7 Sep 2019, 5:00 am
ಹೊಸದಿಲ್ಲಿ : ಸರಕಾರ ಸಾರ್ವಜನಿಕ ವಲಯದ ನ್ಯಾಶನಲ್‌ ಇನ್ಷೂರೆನ್ಸ್‌, ಒರಿಯೆಂಟಲ್‌ ಇನ್ಷೂರೆನ್ಸ್‌ ಮತ್ತು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಕಂಪನಿಗಳಿಗೆ 12,000 ಕೋಟಿ ರೂ. ಬಂಡವಾಳ ನೆರವನ್ನು ಪ್ರಕಟಿಸಿದೆ.
Vijaya Karnataka Web centre to infuse 12000 crore in state general insurance firms
ರಾಜ್ಯ ವಿಮೆ ಕಂಪನಿಗಳಿಗೆ 12,000 ಕೋಟಿ ರೂ.


ಈ ಸಾಮಾನ್ಯ ವಿಮೆ ಕಂಪನಿಗಳು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಿನ್ನೆಲೆಯಲ್ಲಿ 12,000 ಕೋಟಿ ರೂ. ಬಂಡವಾಳ ನೆರವನ್ನು ಹಣಕಾಸು ಇಲಾಖೆ ಮಂಜೂರು ಮಾಡಿದೆ.

ಬಂಡವಾಳ ನೆರವು ಯಾಕೆ?

ಕಳೆದ ವರ್ಷ ಬಜೆಟ್‌ನಲ್ಲಿ ನ್ಯಾಶನಲ್‌ ಇನ್ಷೂರೆನ್ಸ್‌, ಒರಿಯೆಂಟಲ್‌ ಇನ್ಷೂರೆನ್ಸ್‌ ಮತ್ತು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಕಂಪನಿಯ ವಿಲೀನದ ಪ್ರಸ್ತಾಪವನ್ನು ಘೋಷಿಸಲಾಗಿತ್ತು. ಇವುಗಳ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವುದರಿಂದ ವಿಲೀನದ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಹೀಗಾಗಿ ವಿಲೀನದ ಸಿದ್ಧತೆಗೆ ಪೂರ್ವಭಾವಿಯಾಗಿ ಈ ಕ್ರಮ ಕೈಗೊಂಡಿದೆ.

ಬಂಡವಾಳ ಹಿಂತೆಗೆತದ ಭಾಗವಾಗಿ ಸರಕಾರ ಸಾರ್ವಜನಿಕ ವಿಮೆ ಕಂಪನಿಗಳ ವಿಲೀನಕ್ಕೆ ಮುಂದಾಗಿದೆ. ಅರ್ನೆಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಸಂಸ್ಥೆಯನ್ನು ಈ ವಿಲೀನ ಪ್ರಕ್ರಿಯೆ ಕುರಿತ ಕನ್ಸಲ್ಟೆಂಟ್‌ ಆಗಿ ಕೇಂದ್ರ ನಿಯುಕ್ತಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ 1.05 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿಯನ್ನು ಸರಕಾರ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ