ಆ್ಯಪ್ನಗರ

ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ಗೆ ಸಿಐಸಿ ನೋಟಿಸ್‌

50 ಕೋಟಿ ರೂ. ಮತ್ತು ಅದಕ್ಕೂ ಹೆಚ್ಚಿನ ಸಾಲವನ್ನು ಬಾಕಿ ಉಳಿಸಿಕೊಂಡಿದ್ದ ಉದ್ದೇಶಪೂರ್ವಕ ಸಾಲಗಾರರ ಪಟ್ಟಿಯನ್ನು ಆರ್‌ಬಿಐ ಸಿದ್ಧಪಡಿಸಿತ್ತು. ಅದನ್ನು ಬಹಿರಂಗಪಡಿಸಲು ಆರ್‌ಬಿಐ ನಿರಾಕರಿಸಿತ್ತು.

Vijaya Karnataka Web 5 Nov 2018, 10:55 am
ಹೊಸದಿಲ್ಲಿ: ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಗೊಳಿಸದ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಗವರ್ನರ್‌ ಉರ್ಜಿತ್‌ ಪಟೇಲ್‌ಗೆ ಕೇಂದ್ರೀಯ ಮಾಹಿತಿ ಆಯೋಗವು(ಸಿಐಸಿ) ಶೋಕಾಸ್‌ ನೋಟಿಸ್‌ ನೀಡಿದೆ.
Vijaya Karnataka Web Urjit Patel


ಈ ಬೃಹತ್‌ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಪಡಿಸದೆ ಉರ್ಜಿತ್‌ ಅವರು ಸುಪ್ರೀಂ ಕೋರ್ಟ್‌ಗೆ 'ಅಗೌರವ' ತೋರಿದ್ದಾರೆ ಎಂದು ಸಿಐಸಿ ಹೇಳಿದೆ. ಇದೇ ವೇಳೆ, ವಸೂಲಾಗದ ಸಾಲಗಳ(ಎನ್‌ಪಿಎ) ಕುರಿತಾಗಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಅವರ ಪತ್ರವನ್ನು ಬಹಿರಂಗಗೊಳಿಸುವಂತೆ ಪ್ರಧಾನಿ ಕಾರ್ಯಾಲಯ, ಹಣಕಾಸು ಸಚಿವಾಲಯ ಮತ್ತು ಆರ್‌ಬಿಐಗೆ ಸಿಐಸಿ ಹೇಳಿದೆ.

50 ಕೋಟಿ ರೂ. ಮತ್ತು ಅದಕ್ಕೂ ಹೆಚ್ಚಿನ ಸಾಲವನ್ನು ಬಾಕಿ ಉಳಿಸಿಕೊಂಡಿದ್ದ ಉದ್ದೇಶಪೂರ್ವಕ ಸಾಲಗಾರರ ಪಟ್ಟಿಯನ್ನು ಆರ್‌ಬಿಐ ಸಿದ್ಧಪಡಿಸಿತ್ತು. ಅದನ್ನು ಬಹಿರಂಗಪಡಿಸಲು ಆರ್‌ಬಿಐ ನಿರಾಕರಿಸಿತ್ತು. ಇದು ಸಿಐಸಿ ಅಸಮಾಧಾನಕ್ಕೆ ಕಾರಣವಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಬೇಕು ಅನ್ನುವುದು ಸಿಐಸಿ ಉದ್ದೇಶ. ಸಣ್ಣ ಸಾಲಗಳನ್ನು ಕಟ್ಟದ ರೈತರ ಮರ್ಯಾದೆಯನ್ನು ಬ್ಯಾಂಕ್‌ಗಳು ಹರಾಜಾಗುತ್ತವೆ. ಆದರೆ, ದೊಡ್ಡ ಸಾಲಗಾರರ ಹೆಸರನ್ನು ಬಹಿರಂಗಪಡಿಸಲು ಹಿಂಜರಿಕೆ ಏಕೆ? ಎಂದು ಈ ಹಿಂದೆ ಸಿಐಸಿ ಪ್ರಶ್ನಿಸಿತ್ತು.

ಸುಪ್ರೀಂ ಕೋರ್ಟ್‌ ಆದೇಶವನ್ನೂ ಗೌರವಿಸದೇ, ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗೊಳಿಸದ ನಿಮಗೆ(ಉರ್ಜಿತ್‌ ಪಟೇಲ್‌) ಏಕೆ ಗರಿಷ್ಠ ದಂಡ ವಿಧಿಸಬಾರದು ಎಂಬುದನ್ನು ವಿವರಿಸಿ.
ಕೇಂದ್ರ ಮಾಹಿತಿ ಆಯೋಗ

ಉರ್ಜಿತ್‌ ಪಟೇಲ್‌ ತಲೆದಂಡಕ್ಕೆ ಸರಕಾರದ ಯತ್ನ: ಚಿದು

ರಘುರಾಮ್‌ ರಾಜನ್‌ ಕತೆಯು ಮತ್ತೆ ಪುನರಾವರ್ತನೆಯಾಗಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರ ತಲೆದಂಡಕ್ಕೆ ನರೇಂದ್ರ ಮೋದಿ ಸರಕಾರ ಪ್ರಯತ್ನಿಸಿದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ದೂರಿದ್ದಾರೆ.

ಪಟೇಲ್‌ ತಲೆದಂಡಕ್ಕೆ ಸ್ವದೇಶಿ ಜಾಗ್ರಣ್‌ ಮಂಚ್‌(ಎಸ್‌ಜೆಎಂ) ಇಚ್ಛಿಸಿದೆ. ಹೀಗಾಗಿಯೇ ಮೋದಿ ಸರಕಾರವೂ ಪ್ರಯತ್ನಗಳನ್ನು ನಡೆಸಿದೆ. ಮತ್ತೆ ರಘುರಾಮ್‌ ರಾಜನ್‌ ಕತೆ ಪುನರಾವರ್ತನೆಯಾಗುತ್ತಿದೆ ಎಂದು ಚಿದಂಬಬರಂ ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ