ಆ್ಯಪ್ನಗರ

ರಾಜ್ಯ ಬಜೆಟ್‌ಗೆ ಮುನ್ನವೇ ಸಿಗರೇಟ್‌, ಗುಟ್ಕಾ ದುಬಾರಿ: ಕಾಳಸಂತೆಯೇ ಇದಕ್ಕೆ ಕಾರಣ

ರಾಜ್ಯ ಬಜೆಟ್‌ಗೆ ಮುನ್ನವೇ ಸಿಗರೇಟ್‌, ಗುಟ್ಕಾ ಬೆಲೆ ದುಬಾರಿಯಾಗಿದ್ದು, ಧೂಮಪಾನ ಪ್ರಿಯರಿಗೆ ಬಿಸಿ ತಟ್ಟಿದೆ.''ಸಿಗರೇಟ್‌ ಪ್ಯಾಕ್‌ವೊಂದಕ್ಕೆ ಸಗಟು ದರ 165 ರೂ. ಇದ್ದರೆ, ಅಂಗಡಿಗಳಲ್ಲಿ ತಲಾ ಒಂದು ಸಿಗರೇಟ್‌ಗೆ 20 ರೂ.ಗೆ ಮಾರಾಟವಾಗುತ್ತಿದೆ.

Vijaya Karnataka Web 8 Jan 2021, 11:06 pm
ಹಾಸನ: ರಾಜ್ಯ ಬಜೆಟ್‌ಗೆ ಮುನ್ನವೇ ಸಿಗರೇಟ್‌, ಗುಟ್ಕಾ ಬೆಲೆ ದುಬಾರಿಯಾಗಿದ್ದು, ಧೂಮಪಾನ ಪ್ರಿಯರಿಗೆ ಬಿಸಿ ತಟ್ಟಿದೆ. ''ಸಿಗರೇಟ್‌ ಪ್ಯಾಕ್‌ವೊಂದಕ್ಕೆ ಸಗಟು ದರ 165 ರೂ. ಇದ್ದರೆ, ಅಂಗಡಿಗಳಲ್ಲಿ ತಲಾ ಒಂದು ಸಿಗರೇಟ್‌ಗೆ 20 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಬೇಡಿಕೆ ಇರುವ ಬ್ರ್ಯಾಂಡ್‌ಗಳ ಸಿಗರೇಟ್‌ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.
Vijaya Karnataka Web cigarettes-getty


ಗುಟ್ಕಾ ಪ್ಯಾಕೇಟ್‌ಗೆ 4 ರೂ. ಇದ್ದರೆ, ಏಳು ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕಾನೂನು ರೀತಿ ನಿಗದಿತ ದರದಲ್ಲೇ ಮಾರಾಟವಾಗುವಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು,'' ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.

ಮುಂದಿನ ಬಜೆಟ್‌ನ ನಂತರ ಪಡಿತರ ಚೀಟಿ (ರೇಷನ್‌ ಕಾರ್ಡ್‌) ಹೊಂದಿರುವ ಗ್ರಾಹಕರಿಗೆ ಪಡಿತರದ ಜತೆಗೆ ಸೋಪು, ಎಣ್ಣೆ, ಉಪ್ಪು ಮಾರಾಟಕ್ಕೂ ಚಿಂತನೆ ನಡೆಸಲಾಗಿದೆ ಎಂದು ಸಚಿವ ಕೆ. ಗೋಪಾಲಯ್ಯ ಅವರು ಇತ್ತೀಚೆಗೆ ತಿಳಿಸಿದ್ದರು

ಎಸ್‌ಬಿಐ ಗೃಹ ಸಾಲದ ಮೇಲಿನ ಬಡ್ಡಿ ಶೇ. 0.3ರಷ್ಟು ಇಳಿಕೆ

''ರಾಜ್ಯ ಬಜೆಟ್‌ ಮಂಡನೆ ನಂತರ ಪಡಿತರದ ಜತೆಗೆ ಮೈಸೂರು ಸ್ಯಾಂಡಲ್‌ ಸೋಪು, ಅಡುಗೆ ಎಣ್ಣೆ, ಉಪ್ಪು ಮಾರಾಟಕ್ಕೂ ಅವಕಾಶ ಕಲ್ಪಿಸಲಾಗುವುದು. ಹಂತ ಹಂತವಾಗಿ ರಾಜ್ಯಾದ್ಯಂತ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಈ ಬಗ್ಗೆ ಬಜೆಟ್‌ನಲ್ಲಿ ಸೇರಿಸಲು ಸಿಎಂಗೆ ಪ್ರಸ್ತಾಪ ಸಲ್ಲಿಸಲಾಗುವುದು'' ಎಂದು ಇತ್ತೀಚೆಗೆ ನಡೆದ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಮಟ್ಟದ ಸಮ್ಮೇಳನದಲ್ಲಿ ತಿಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ