ಆ್ಯಪ್ನಗರ

ಕಾಳಧನದ ಅಂದಾಜು: ಮಾಹಿತಿ ಇಲ್ಲ ಎಂದ ಕೇಂದ್ರ ಸರಕಾರ

ಸ್ವಿಜರ್ಲೆಂಡ್‌ನಿಂದ ದೊರೆತಿರುವ ಕಾಳಧನ ಪ್ರಕರಣಗಳ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ...

Vijaya Karnataka Web 18 May 2019, 5:00 am
ಹೊಸದಿಲ್ಲಿ: ಸ್ವಿಜರ್ಲೆಂಡ್‌ನಿಂದ ದೊರೆತಿರುವ ಕಾಳಧನ ಪ್ರಕರಣಗಳ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಅಲ್ಲದೇ, ''ದೇಶದ ಒಳಗೆ ಮತ್ತು ಹೊರಗೆ ಚಲಾವಣೆಯಲ್ಲಿರುವ ಕಾಳಧನದ ಮೊತ್ತ ಎಷ್ಟೆಂಬ ಅಂದಾಜು ತನ್ನ ಬಳಿ ಇಲ್ಲ,'' ಎಂದು ಹಣಕಾಸು ಸಚಿವಾಲಯ ಹೇಳಿದೆ.
Vijaya Karnataka Web citing confidentiality government declines to share black money details received from switzerland
ಕಾಳಧನದ ಅಂದಾಜು: ಮಾಹಿತಿ ಇಲ್ಲ ಎಂದ ಕೇಂದ್ರ ಸರಕಾರ


ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಅಡಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಹಣಕಾಸು ಸಚಿವಾಲಯವು, ''ಗೌಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾಹಿತಿ ನೀಡಲಾಗದು,'' ಎಂದಿದೆ. ಭಾರತ ಮತ್ತು ಸ್ಜಿಜರ್ಲೆಂಡ್‌ಗಳು ತನಿಖೆ ಆಧಾರದ ಮೇಲೆ ಕಾಳಧನ ಪ್ರಕರಣಗಳ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ. ಉಭಯ ದೇಶಗಳ ಮಧ್ಯೆ 2016ರಲ್ಲಿ ಈ ಕುರಿತಾಗಿ ದ್ವಿಪಕ್ಷೀಯ ಒಪ್ಪಂದವೂ ಆಗಿದೆ. ''ಸ್ವಿಜರ್ಲೆಂಡ್‌ನಿಂದ ದೊರೆತ ಕಪ್ಪು ಹಣ ಪ್ರಕರಣಗಳ ಮಾಹಿತಿ, ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಹಾಗೂ ಪ್ರಕರಣಗಳ ಸಂಬಂಧ ಸರಕಾರ ತೆಗೆದುಕೊಂಡ ಕ್ರಮ ಏನು?'' ಎಂಬುದಾಗಿ ಆರ್‌ಟಿಐ ಅರ್ಜಿದಾರರು ಪ್ರಶ್ನೆ ಕೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ