ಆ್ಯಪ್ನಗರ

ಚಾವಿ ಲೇ ಲೋ: ಮೋದಿ ಸರ್ಕಾರಕ್ಕೆ 'ಯೆಸ್ ಬ್ಯಾಂಕ್' ಟಾಂಗ್ ಕೊಟ್ಟ ಕಾಂಗ್ರೆಸ್!

ತೀವ್ರ ಆರ್ಥಿಕ ಸಂಕಷ್ಟದ ಪರಿಣಾಮ ಖಾಸಗಿ ಯೆಸ್ ಬ್ಯಾಂಕ್ ಬಾಗಲು ಬಂದ್ ಮಾಡಿದ್ದು, ಪ್ರತಿಪಕ್ಷ ಕಾಂಗ್ರೆಸ್‌ಗೆ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಲು ಅವಕಾಶ ಒದಗಿಸಿದೆ. ಯೆಸ್ ಬ್ಯಾಂಕ್ ದುಸ್ಥಿಗೆ ಮೋದಿ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಹರಿಹಾಯ್ದಿರುವ ಪ್ರತಿಪಕ್ಷ ಕಾಂಗ್ರೆಸ್, ಸರಣಿ ಟ್ವೀಟ್ ಗಳ ಮೂಲಕ ಕೇಂದ್ರ ಸರ್ಕಾರವನ್ನು ಅಣುಕಿಸಿದೆ.

Vijaya Karnataka Web 6 Mar 2020, 1:49 pm
ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟದ ಪರಿಣಾಮ ಖಾಸಗಿ ಯೆಸ್ ಬ್ಯಾಂಕ್ ಬಾಗಲು ಬಂದ್ ಮಾಡಿದ್ದು, ಪ್ರತಿಪಕ್ಷ ಕಾಂಗ್ರೆಸ್ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಲು ಅವಕಾಶ ಒದಗಿಸಿದೆ.
Vijaya Karnataka Web Narendra Modi
ಯೆಸ್ ಬ್ಯಾಂಕ್ ಆರ್ಥಿಕ ದಿವಾಳಿತನ ಮೋದಿ ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್‌ಗೆ ಅವಕಾಶ ಒದಗಿಸಿದೆ.


ಯೆಸ್ ಬ್ಯಾಂಕ್ ಆಡಳಿತವನ್ನು ಆರ್‌ಬಿಐ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಗ್ರಾಹಕರ ಎಟಿಎಂ ವಿತ್ ಡ್ರಾ ಮಿತಿಯನ್ನು ಕೇವಲ 50 ಸಾವಿರ ರೂ.ಗೆ ನಿಗದಿಪಡಿಸಿದೆ. ಅಲ್ಲದೇ ಸಮಸ್ಯೆ ಪರಿಹರಿಸಲು ಒಂದು ತಿಂಗಳ ಕಾಲಾವಕಾಶ ಕೋರಿದೆ.

ವಿತ್ ಡ್ರಾ ಮನಿತಿ 50 ಸಾವಿರ: ಎಟಿಎಂ ಮುಂದೆ ಜನ ಸಾಗರ!

ಇನ್ನು ಯೆಸ್ ಬ್ಯಾಂಕ್ ದುಸ್ಥಿಗೆ ಮೋದಿ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಹರಿಹಾಯ್ದಿರುವ ಪ್ರತಿಪಕ್ಷ ಕಾಂಗ್ರೆಸ್, ಸರಣಿ ಟ್ವೀಟ್‌ಗಳ ಮೂಲಕ ಕೇಂದ್ರ ಸರ್ಕಾರವನ್ನು ಅಣುಕಿಸಿದೆ.


ಯೆಸ್ ಬ್ಯಾಂಕ್ ದುಸ್ಥಿತಿ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿ ಸರ್ಕಾರದ ಆರು ವರ್ಷಗಳ ಸಾಧನೆಯನ್ನು ಪಟ್ಟಿ ಮಾಡಿದೆ. 2014ರಲ್ಲಿ 15 ಲಕ್ಷ ತೆಗೆದುಕೊಳ್ಳಿ ಎಂದ ಮೋದಿ, 2018ರಲ್ಲಿ ಪಕೋಡಾ ತೆಗೆದುಕೊಳ್ಳಿ ಎಂದರು. ಇದೀಗ ಬ್ಯಾಂಕ್‌ಗಳನ್ನು ಬಂದ್ ಮಾಡಲು ಚಾವಿ(ಕಿಲೀ ಕೈ) ತೆಗೆದುಕೊಳ್ಳಿ ಎನ್ನುತ್ತಿದೆ ಎಂದು ವ್ಯಂಗ್ಯವಾಡಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಇದು ಯೆಸ್ ಬ್ಯಾಂಕ್ ಅಲ್ಲ ನೋ ಬ್ಯಾಂಕ್ ಎಂದು ಕುಹುಕವಾಡಿದ್ದಾರೆ. ಮೋದಿ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಹೇಗೆ ಸರ್ವನಾಶ ಮಾಡಿದೆ ಎಂಬುದಕ್ಕೆ ಯೆಸ್ ಬ್ಯಾಂಕ್ ತಾಜಾ ಉದಾಹರಣೆ ಎಂದು ರಾಹುಲ್ ಕಿಡಿಕಾರಿದ್ದಾರೆ.



ಅದರಂತೆ ಮಾಜಿ ವಿತ್ತ ಸಚಿವ ಚಿದಂಬರಂ ಕೂಡ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, ಈಗಾಗಲೇ ಎರಡು ಬ್ಯಾಂಕ್ ಗಳನ್ನು ಆಪೋಷಣ ಪಡೆದಿರುವ ಸರ್ಕಾರ ಮುಂದಿನ ಬ್ಯಾಂಕ್ ಯಾವುದು ಎಂಬುದನ್ನು ಈಗಲೇ ತಿಳಿಸಲಿ ಎಂದು ಕಾಲೆಳೆದಿದ್ದಾರೆ.

ಮುಳುಗೋಯ್ತು ಯೆಸ್ ಬ್ಯಾಂಕ್: ಎಟಿಎಂಗಳಲ್ಲಿ ಹಣವಿಲ್ಲ, ನೆಟ್‌ ಬ್ಯಾಂಕ್, ಮೊಬೈಲ್ ಬ್ಯಾಂಕಿಂಗ್ ಜಾಮ್..!

ದೇಶದ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಕೂಡಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.


ಒಟ್ಟಿನಲ್ಲಿ ಯೆಸ್ ಬ್ಯಾಂಕ್ ಆರ್ಥಿಕ ದಿವಾಅಳಿತನ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಒದಗಿಸಿದ್ದು, ಪ್ರತಿಪಕ್ಷಗಳ ಈ ದಾಳಿಯಿಂದ ಸರ್ಕಾರ ಹೇಗೆ ತಪ್ಪಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ