ಆ್ಯಪ್ನಗರ

ಸಾಲದ ಬೇಡಿಕೆ ಕುಸಿದಿದೆ, ಆರ್ಥಿಕತೆಗೆ ಉತ್ತೇಜನ ಅಗತ್ಯ

ಸಾಲದ ಬೇಡಿಕೆ ಇಳಿಕೆಯಾಗಿದೆ. ಹೀಗಾಗಿ ಆರ್ಥಿಕತೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಅಧ್ಯಕ್ಷ ರಜನೀಶ್‌ ಕುಮಾರ್‌ ಭಾನುವಾರ ಹೇಳಿದ್ದಾರೆ.

Vijaya Karnataka Web 19 Aug 2019, 9:41 pm
ಕೋಲ್ಕೊತಾ : ಸಾಲದ ಬೇಡಿಕೆ ಇಳಿಕೆಯಾಗಿದೆ. ಹೀಗಾಗಿ ಆರ್ಥಿಕತೆಗೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಅಧ್ಯಕ್ಷ ರಜನೀಶ್‌ ಕುಮಾರ್‌ ಭಾನುವಾರ ಹೇಳಿದ್ದಾರೆ.
Vijaya Karnataka Web credit demand slows intensives needed to economic growth
ಸಾಲದ ಬೇಡಿಕೆ ಕುಸಿದಿದೆ, ಆರ್ಥಿಕತೆಗೆ ಉತ್ತೇಜನ ಅಗತ್ಯ


ಸುದ್ದಿಗಾರರ ಜೊತೆ ಮಾತನಾಡಿದ ಅವರು, ''ಸಾಲ ನೀಡಿಕೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಯಾವುದೇ ತೊಡಕಾಗಿಲ್ಲ. ಅವು ಸಮರ್ಥವಾಗಿವೆ. ಬ್ಯಾಂಕ್‌ಗಳಿಗೆ ಕಡಿಮೆಯೋ ಅಥವಾ ಜಾಸ್ತಿಯೋ ಒಟ್ಟಿನಲ್ಲಿ ಬಂಡವಾಳ ಹೂಡಿಕೆಯಾಗುತ್ತಿದೆ. ಇದರಿಂದಾಗಿ ಬ್ಯಾಂಕ್‌ಗಳ ಕಡೆಯಿಂದ ಯಾವುದೇ ತೊಡಕಿಲ್ಲ. ಆದರೆ, ದೇಶದ ಆರ್ಥಿಕತೆಯಲ್ಲಿಯೇ ಸಾಲದ ಬೇಡಿಕೆಯ ಕೊರತೆ ಇದೆ. ಆರ್ಥಿಕತೆಗೆ ಪ್ರಚೋದನೆಯ ಅವಶ್ಯಕತೆಯಿದೆ,'' ಎಂದರು.

ಸಕಾರಾತ್ಮಕ ಬೆಳವಣಿಗೆ

''ಬ್ಯಾಂಕ್‌ಗಳ ಬಡ್ಡಿ ದರವು ಕಡಿಮೆಯಾಗಿದ್ದು, ಸಾಲ ನೀಡಿಕೆಗೆ ಸಾಕಾಗುವಷ್ಟು ಬಂಡವಾಳವನ್ನೂ ಬ್ಯಾಂಕ್‌ಗಳು ಹೊಂದಿವೆ. ಮುಂಗಾರು ಸಕಾರಾತ್ಮಕ ಪರಿಣಾಮ ಬೀರುವ ವಿಶ್ವಾಸವಿದೆ. ಸರಕಾರದ ವೆಚ್ಚಗಳು ಮತ್ತು ಮುಂಬರುವ ಹಬ್ಬದ ಅವಧಿಯು ಆರ್ಥಿಕತೆಯಲ್ಲಿ ಬೇಡಿಕೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಗಳಿವೆ,'' ಎಂದು ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ