ಆ್ಯಪ್ನಗರ

ಸಿಂಗಾಪುರದ ಬಸ್‌, ರೈಲುಗಳಲ್ಲಿ ದೀಪಾವಳಿ ಸಡಗರ

ಸಿಂಗಾಪುರದ ಭೂ ಸಾರಿಗೆ ಪ್ರಾಧಿಕಾರವು ಕಳೆದ ವರ್ಷದಂತೆಯೇ ಈ ವರ್ಷವೂ ಬಸ್‌ ಮತ್ತು ರೈಲುಗಳಲ್ಲಿ ದೀಪಾವಳಿಯ ಚಿತ್ತಾರಗಳ ಮೂಲಕ, ಭಾರತೀಯ ಪ್ರಯಾಣಿಕರ ಸಂಭ್ರಮವನ್ನು ಹೆಚ್ಚಿಸಿದೆ.

Vijaya Karnataka 20 Oct 2017, 10:24 am

ಹೊಸದಿಲ್ಲಿ: ಸಿಂಗಾಪುರದ ಭೂ ಸಾರಿಗೆ ಪ್ರಾಧಿಕಾರವು ಕಳೆದ ವರ್ಷದಂತೆಯೇ ಈ ವರ್ಷವೂ ಬಸ್‌ ಮತ್ತು ರೈಲುಗಳಲ್ಲಿ ದೀಪಾವಳಿಯ ಚಿತ್ತಾರಗಳ ಮೂಲಕ, ಭಾರತೀಯ ಪ್ರಯಾಣಿಕರ ಸಂಭ್ರಮವನ್ನು ಹೆಚ್ಚಿಸಿದೆ.

ದೀಪಾವಳಿ ಹಿನ್ನೆಲೆಯಲ್ಲಿ ಭಾರತೀಯ ಪರಂಪರೆ ಬಿಂಬಿಸುವ ಚಿತ್ತಾರಗಳಿಂದ ರೈಲು ಮತ್ತು ಬಸ್‌ಗಳನ್ನು ಅಲಂಕರಿಸಿದ್ದು, ಅದು ಅಕ್ಟೋಬರ್‌

ಅಂತ್ಯದ ತನಕ ಮುಂದುವರಿಯಬಹುದು. ಕಳೆದ ವರ್ಷ ಮಾಡಲಾಗಿದ್ದ ಈ ಪ್ರಯೋಗವು ಪ್ರಯಾಣಿಕರ ಅಚ್ಚರಿ ಮತ್ತು ಸಂತೋಷಕ್ಕೆ ಕಾರಣವಾಗಿತ್ತು. ಹೀಗಾಗಿ ಈ ವರ್ಷವೂ ಸಂಭ್ರಮಾಚರಣೆಯನ್ನು ಸಿಂಗಾಪುರ ಸರಕಾರ ಮುಂದುವರಿಸಿದೆ.

Vijaya Karnataka Web deepavali themed train railway station to celebrate the festival of lights in singapore
ಸಿಂಗಾಪುರದ ಬಸ್‌, ರೈಲುಗಳಲ್ಲಿ ದೀಪಾವಳಿ ಸಡಗರ

ಚೆಂದದ ದೀಪ, ಆನೆಗಳ ಚಿತ್ತಾರಗಳು, ರಂಗೋಲಿಗಳು ಬಸ್‌ ಮತ್ತು ರೈಲಿನ ಮೇಲೆ ಅರಳಿದ್ದು, ನೋಡುಗರ ಕಣ್ಮನ ಸೆಳೆಯುವಂತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ