ಆ್ಯಪ್ನಗರ

ಆತಂಕದಿಂದಷ್ಟೇ ತೈಲ ದರ ಏರಿಕೆ: ಪ್ರಧಾನ್‌

ಇರಾನ್‌ ವಿರುದ್ಧ ನವೆಂಬರ್‌ 4ರಿಂದ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೊಳಿಸಲಿದ್ದು, ಇದಕ್ಕೂ ಮುನ್ನ ತೈಲ ದರಗಳು ಏರುತ್ತಿವೆ. ಆದರೆ ಇದು ಪೂರೈಕೆಯ ಕೊರತೆಯಿಂದ ಉಂಟಾಗಿದ್ದಲ್ಲ, ಬದಲಿಗೆ ದೊಡ್ಡ ಪೂರೈಕೆದಾರರೊಬ್ಬರನ್ನು ಕಳೆದುಕೊಳ್ಳುವ ಆತಂಕದಿಂದ ಉಂಟಾಗಿರುವ ಏರಿಕೆಯಾಗಿದೆ. ನಾನಾ ರಾಷ್ಟ್ರಗಳಲ್ಲಿ ಈ ಬಗ್ಗೆ ಕಳವಳ ಉಂಟಾಗಿದೆ ಎಂದು ಪ್ರಧಾನ್‌ ಹೇಳಿದರು.

Vijaya Karnataka 17 Oct 2018, 9:18 am
ಹೊಸದಿಲ್ಲಿ: ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಲಭ್ಯತೆ ಅಥವಾ ಪೂರೈಕೆಗೆ ಯಾವುದೇ ಕೊರತೆ ಉಂಟಾಗಿಲ್ಲ. ಆದರೆ ದೊಡ್ಡ ಪೂರೈಕೆದಾರನನ್ನು (ಇರಾನ್‌) ಕಳೆದುಕೊಳ್ಳುವ ಭೀತಿಯಿಂದ ದರ ಏರಿಕೆಯಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.
Vijaya Karnataka Web Dharmendra Pradhan


ಅಮೆರಿಕವು ಇರಾನ್‌ ವಿರುದ್ಧ ನವೆಂಬರ್‌ 4ರಿಂದ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೊಳಿಸಲಿದ್ದು, ಇದಕ್ಕೂ ಮುನ್ನ ತೈಲ ದರಗಳು ಏರುತ್ತಿವೆ. ಆದರೆ ಇದು ಪೂರೈಕೆಯ ಕೊರತೆಯಿಂದ ಉಂಟಾಗಿದ್ದಲ್ಲ, ಬದಲಿಗೆ ದೊಡ್ಡ ಪೂರೈಕೆದಾರರೊಬ್ಬರನ್ನು ಕಳೆದುಕೊಳ್ಳುವ ಆತಂಕದಿಂದ ಉಂಟಾಗಿರುವ ಏರಿಕೆಯಾಗಿದೆ. ನಾನಾ ರಾಷ್ಟ್ರಗಳಲ್ಲಿ ಈ ಬಗ್ಗೆ ಕಳವಳ ಉಂಟಾಗಿದೆ ಎಂದು ಪ್ರಧಾನ್‌ ಹೇಳಿದರು.

ಭಾರತದ ಸಾರ್ವಜನಿಕ ತೈಲ ಕಂಪನಿಗಳು ನವೆಂಬರ್‌ನಲ್ಲಿ ಇರಾನ್‌ನಿಂದ 12.5 ಲಕ್ಷ ಟನ್‌ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿವೆ. ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ ಇತ್ತೀಚೆಗೆ 86 ಡಾಲರ್‌ಗೆ ಏರಿತ್ತು. ನಂತರ ಇದೀಗ 81 ಡಾಲರ್‌ಗೆ ಇಳಿಕೆಯೂ ಆಗಿದೆ.

ತೈಲ ಮಾರುಕಟ್ಟೆ ಭೌತಿಕವಾಗಿ ಸಮತೋಲನ ಹೊಂದಿದೆ. ಆದರೆ ಭೌಗೋಳಿಕ ರಾಜಕೀಯ ವಿದ್ಯಮಾನಗಳ ಅಸ್ಥಿರತೆಯಿಂದ ಉಂಟಾಗಿರುವ ಭಾವನಾತ್ಮಕ ಅಸಮತೋಲನದಿಂದ ದರ ಏರುಗತಿಯಲ್ಲಿದೆ ಎಂದು ಹೇಳಿದರು.

ತೈಲ ದರದಲ್ಲಿ ಸ್ಥಿರತೆಯಿಂದ ಒಪೆಕ್‌ ಹಾಗೂ ತೈಲ ಬಳಕೆದಾರ ರಾಷ್ಟ್ರಗಳಿಗೆ ಹಿತವಾಗಲಿದ್ದು, ಇದನ್ನು ಸ್ವತಃ ಒಪೆಕ್‌ ಕೂಡ ಒಪ್ಪಿದೆ ಎಂದು ಸಚಿವ ಧರ್ಮೇದ್ರ ಪ್ರಧಾನ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ