ಆ್ಯಪ್ನಗರ

ಹಣ ಕೂಡಿಡಬೇಡಿ, ಬೇಕೆಂದಾಗ ಬ್ಯಾಂಕಲ್ಲಿ ಇರುತ್ತೆ: ಆರ್‌ಬಿಐ

ಕಡಿಮೆ ಮುಖಬೆಲೆಯ ಸಾಕಷ್ಟು ಹಣ ಆರ್‌ಬಿಐ ಬಳಿ ಇದ್ದು, ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ. ಅಗತ್ಯವಿದ್ದಷ್ಟು ಮಾತ್ರ ಹಣ ಪಡೆದು, ಬೇಕೆಂದಾಗ ಮತ್ತೆ ಬ್ಯಾಂಕ್‌ನಿಂದ ಪಡೆಯಿರಿ,' ಎಂದು ಆರ್‌ಬಿಐ ಜನತೆಗೆ ಭಾನುವಾರ ಅಭಯ ನೀಡಿದೆ.

ಏಜೆನ್ಸೀಸ್ 13 Nov 2016, 5:34 pm
ಹೊಸದಿಲ್ಲಿ: 'ಕಡಿಮೆ ಮುಖಬೆಲೆಯ ಸಾಕಷ್ಟು ಹಣ ಆರ್‌ಬಿಐ ಬಳಿ ಇದ್ದು, ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ. ಅಗತ್ಯವಿದ್ದಷ್ಟು ಮಾತ್ರ ಹಣ ಪಡೆದು, ಬೇಕೆಂದಾಗ ಮತ್ತೆ ಬ್ಯಾಂಕ್‌ನಿಂದ ಪಡೆಯಿರಿ,' ಎಂದು ಆರ್‌ಬಿಐ ಜನತೆಗೆ ಭಾನುವಾರ ಅಭಯ ನೀಡಿದೆ.
Vijaya Karnataka Web dont hoard cash come to banks only when you need it rbi
ಹಣ ಕೂಡಿಡಬೇಡಿ, ಬೇಕೆಂದಾಗ ಬ್ಯಾಂಕಲ್ಲಿ ಇರುತ್ತೆ: ಆರ್‌ಬಿಐ


'ಯಾವುದೇ ಕಾರಣಕ್ಕೂ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಮತ್ತೆ ಮತ್ತೆ ಬ್ಯಾಂಕಿಗೆ ಬಂದು ಹಣ ಪಡೆದು, ಕೂಡಿಡುವ ಅಗತ್ಯವೂ ಇಲ್ಲ. ಬೇಕೆಂದಾಗ ಪಡೆಯಲು ಸಾಕಷ್ಟು ಹಣವಿದೆ,' ಎಂದು ಜನರ ಆತಂಕ ನಿವಾರಿಸಲು ಕೇಂದ್ರೀಯ ಬ್ಯಾಂಕ್ ಭರವಸೆ ನೀಡಿದೆ.

ಭಾನುವಾರವೂ ಎಟಿಎಂ ಹಾಗೂ ಬ್ಯಾಂಕ್‌ಗಳ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತಿರುವುದು ಎಲ್ಲೆಡೆ ಸಾಮಾನ್ಯವಾಗಿತ್ತು. ದೇಶದ ಹಲವೆಡೆ ಸೋಮವಾರ ಬ್ಯಾಂಕ್‌ಗಳು ಮುಚ್ಚಲ್ಪಡುವುದರಿಂದ ಜನರು ಹಣ ಪಡೆಯಲು ಮುಗಿ ಬಿದ್ದಿದ್ದಾರೆ.

500 ರೂ. ಹಾಗೂ 1000 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸುವುದಾಗಿ ಪ್ರಧಾನಿ ದಿಢೀರ್ ಘೋಷಿಸಿದ ಐದು ದಿನಗಳ ನಂತರೆ ಸುಮಾರು ಶೇ.60 ಎಟಿಎಂಗಳಲ್ಲಿ ಚಲಾವಣೆಯಲ್ಲಿರುವ ನೋಟುಗಳು ಸಿಗುತ್ತಿವೆ. ಆದರೆ, ಸುಮಾರು 1.2 ಲಕ್ಷ (ಒಟ್ಟು 2 ಲಕ್ಷ ಎಟಿಎಂಗಳಲ್ಲಿ) ಎಟಿಎಂಗಳಲ್ಲಿ ಹಾಕಿದ ಹಣ ತಕ್ಷಣವೇ ಖಾಲಿ ಆಗುತ್ತಿದೆ.

ಜನರು ಸಮಾಧಾನವಾಗಿರುವಂತೆ ಪ್ರಧಾನಿ, ವಿತ್ತ ಸಚಿವ ಹಾಗೂ ಆರ್‌ಬಿಐ ಪದೆ ಪದೇ ಹೇಳುತ್ತಿದ್ದು, ಇನ್ನೊಂದೆರಡು ವಾರಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಭರವಸೆ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ