ಆ್ಯಪ್ನಗರ

ಮೋದಿ ಆಡಳಿತದ ಮತ್ತೊಂದು ವಿಕೆಟ್‌ ಪತನ: ಉರ್ಜಿತ್‌ ನಂತರ ಸುರ್ಜಿತ್‌ ರಾಜೀನಾಮೆ

ಸೋಮವಾರ ಆರ್‌ಬಿಐ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮೋದಿ ಸರಕಾರದ ಸಂಸ್ಥೆಯ ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದ್ದು, ಸರಕಾರಕ್ಕೆ ಹಿನ್ನಡೆಯಾಗಲಿದೆ. ಟ್ವಿಟರ್ ಮೂಲಕ ಸುರ್ಜಿತ್ ಭಲ್ಲಾ ತಾವು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ ಡಿ. 1ರಂದು ರಾಜೀನಾಮೆ ನೀಡಿರುವುದನ್ನು ಪ್ರಕಟಿಸಿದ್ದಾರೆ.

Vijaya Karnataka Web 11 Dec 2018, 12:48 pm
ಹೊಸದಿಲ್ಲಿ: ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯಲ್ಲಿದ್ದ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Vijaya Karnataka Web Surjit


ಸೋಮವಾರ ಆರ್‌ಬಿಐ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮೋದಿ ಸರಕಾರದ ಸಂಸ್ಥೆಯ ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದ್ದು, ಸರಕಾರಕ್ಕೆ ಹಿನ್ನಡೆಯಾಗಲಿದೆ.

ಟ್ವಿಟರ್ ಮೂಲಕ ಸುರ್ಜಿತ್ ಭಲ್ಲಾ ತಾವು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ತಾತ್ಕಾಲಿಕ ಸದಸ್ಯ ಸ್ಥಾನಕ್ಕೆ ಡಿ. 1ರಂದು ರಾಜೀನಾಮೆ ನೀಡಿರುವುದನ್ನು ಪ್ರಕಟಿಸಿದ್ದಾರೆ.

ಸುರ್ಜಿತ್ ಭಲ್ಲಾ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯ ಹೇಳಿದ್ದು, ಅವರು ಬೇರೆ ಸಂಸ್ಥೆ ಸೇರುತ್ತಿದ್ದಾರೆ ಎಂದಿದೆ.

ಕೇಂದ್ರ ಸರಕಾರ ಮತ್ತು ಆರ್‌ಬಿಐ ಮಧ್ಯೆ ಹಲವು ಬಾರಿ ಆರ್ಥಿಕ ನೀತಿ ರೂಪಣೆ ಮತ್ತು ಸಾಲ ನೀಡುವಿಕೆಯ ನಿಯಮ ಸಡಿಲಿಕೆ ಸಹಿತ ಹಲವು ರೀತಿಯ ಜಟಾಪಟಿ ನಡೆದು ಕೊನೆಗೆ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿ ತೆರಳಿದ್ದಾರೆ. ಇದೀಗ ಸುರ್ಜಿತ್ ರಾಜೀನಾಮೆ ಕೂಡ ಕೇಂದ್ರದ ಮಧ್ಯದ ಜಟಾಪಟಿಯ ಪರಿಣಾಮ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ