ಆ್ಯಪ್ನಗರ

6,380 ಕೋಟಿ ರೂ. ವಂಚನೆ, ಅಗ್ರಿ ಗೋಲ್ಡ್‌ನ ಮೂವರು ಮುಖ್ಯಸ್ಥರ ಬಂಧನ

ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸೇರಿ 6 ರಾಜ್ಯಗಳಲ್ಲಿ ನಾನಾ ಯೋಜನೆಗಳ ಹೆಸರಲ್ಲಿ ಅಗ್ರಿ ಗೋಲ್ಡ್ 32 ಲಕ್ಷಕ್ಕೂ ಅಧಿಕ ಹೂಡಿಕೆದಾರರಿಂದ 6,380 ಕೋಟಿ ರೂ. ಸಂಗ್ರಹಿಸಿತ್ತು ಎಂದು ಇ.ಡಿ ದೂರಿದೆ.

PTI 23 Dec 2020, 9:54 pm

ಹೊಸದಿಲ್ಲಿ: ಅಗ್ರಿ ಗೋಲ್ಡ್‌ನ 6,380 ಕೋಟಿ ರೂ.ಗಳ ವಂಚನೆ ಪ್ರಕರಣ ಸಂಬಂಧ ಈ ಕಂಪನಿಯ ಮೂವರು ಪ್ರವರ್ತಕರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.
Vijaya Karnataka Web money


ಅವ್ವ ವೆಂಕಟ ರಾಮರಾವ್‌, ಅವ್ವ ವೆಂಕಟ ಶೇಷು ನಾರಾಯಣ ರಾವ್‌ ಮತ್ತು ಅವ್ವ ಹೇಮಾ ಸುಂದರ ವರಪ್ರಸಾದ್‌ರನ್ನು ಆರೋಪಿಗಳೆಂದು ಗುರುತಿಸಲಾಗಿದ್ದು, ಇ.ಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರನ್ನು ಹೈದರಾಬಾದ್‌ನ ವಿಶೇಷ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ನಾನಾ ಯೋಜನೆಗಳ ಹೆಸರಲ್ಲಿ ಜನರು ಅಗ್ರಿ ಗೋಲ್ಡ್‌ನಲ್ಲಿ ಹೂಡಿಕೆ ಮಾಡಿದ್ದರು. ಹೆಚ್ಚಿನ ಕಮಿಷನ್‌ ಆಸೆಗೆ ಏಜೆಂಟ್‌ಗಳು ಹೂಡಿಕೆಗಾಗಿ ಜನರನ್ನು ಪ್ರೇರೇಪಿಸಿದ್ದರು. ಮೋಸದ ಯೋಜನೆಗಾಗಿ ಆರು ರಾಜ್ಯಗಳ 32 ಲಕ್ಷಕ್ಕೂ ಅಧಿಕ ಹೂಡಿಕೆದಾರರಿಂದ 6,380 ಕೋಟಿ ರೂ. ಸಂಗ್ರಹಿಸಲಾಗಿತ್ತು ಎಂದು ಇ.ಡಿ ದೂರಿದೆ.
nullತಿಂಗಳಿಗೆ 20% ಬಡ್ಡಿ ಆಮಿಷ ಒಡ್ಡಿ 30 ಕೋಟಿ ರೂ. ವಂಚನೆ, ಅಜ್ಮೇರಾ ಗ್ರೂಪ್‌ನ 8.41 ಕೋಟಿ ರೂ. ಆಸ್ತಿ ಜಪ್ತಿ
ಅಗ್ರಿ ಗೋಲ್ಡ್‌ ಗ್ರೂಪ್‌ ಆಫ್‌ ಕಂಪನೀಸ್‌ ಮೂಲಕ ಅವ್ವ ವೆಂಕಟ ರಾಮ ರಾವ್‌ ಅವರು ಹಗರಣಕ್ಕೆ ಕಾರಣಕರ್ತರಾಗಿದ್ದಾರೆ. ಈ ಮೊದಲು ಗೋಲ್ಡನ್‌ ಫಾರೆಸ್ಟ್‌ ಸಿಐಎಸ್‌ ವಂಚನೆ ಹಗರಣದಲ್ಲೂ ಭಾಗಿಯಾಗಿದ್ದರು. ತಮ್ಮ ಏಳು ಸಹೋದರರು ಮತ್ತು ಇತರೆ ಸಹಾಯಕರ ನೆರವಿನೊಂದಿಗೆ 150ಕ್ಕೂ ಅಧಿಕ ಕಂಪನಿಗಳನ್ನು ಆರಂಭಿಸಿದ್ದರು. ಗ್ರಾಹಕರ ಹೂಡಿಕೆಗೆ ಪ್ರತಿಯಾಗಿ ಯೋಜನೆಯ ಅಂತ್ಯದಲ್ಲಿ ಪ್ಲ್ಯಾಟ್‌ ಅಥವಾ ಹೆಚ್ಚಿನ ರಿಟರ್ನ್ಸ್‌ ನೀಡುವ ಆಸೆಯನ್ನು ಹುಟ್ಟಿಸಿದ್ದರು ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಬಿಸಿನೆಸ್‌ ಸೊನ್ನೆ


ಸೆಬಿ ಪ್ರಕಾರ, ಅಗ್ರಿಗೋಲ್ಡ್‌ ಗೋಲ್ಡ್‌ ಫಾರ್ಮ್‌ ಎಸ್ಟೇಟ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಯಾವುದೇ ವ್ಯವಹಾರವನ್ನು ಹೊಂದಿರಲಿಲ್ಲ. ಆದರೆ, ಹೂಡಿಕೆಯನ್ನು ಸಂಗ್ರಹಿಸಿತ್ತು. ಅಲ್ಲದೇ, ಹೂಡಿಕೆ ಸ್ವೀಕರಿಸುವುದನ್ನು ನಿಲ್ಲಿಸಿ, ವಸೂಲಿ ಮಾಡಿರುವ ಹೂಡಿಕೆಯನ್ನು ವಾಪಸ್‌ ಮಾಡುವಂತೆ ಸೆಬಿ ಆದೇಶಿಸಿತ್ತು. ವ್ಯವಹಾರಕ್ಕೆ ಆರ್‌ಬಿಐನ ಅನುಮತಿಯನ್ನೂ ಪಡೆದಿರಲಿಲ್ಲ.

ಕರ್ನಾಟಕದಲ್ಲಿ 4.81 ಲಕ್ಷ ಅಗ್ರಿಗೋಲ್ಡ್‌ ಹೂಡಿಕೆದಾರರು ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ