ಆ್ಯಪ್ನಗರ

ತಿಂಗಳಿಗೆ 20% ಬಡ್ಡಿ ಆಮಿಷ ಒಡ್ಡಿ 30 ಕೋಟಿ ರೂ. ವಂಚನೆ, ಅಜ್ಮೇರಾ ಗ್ರೂಪ್‌ನ 8.41 ಕೋಟಿ ರೂ. ಆಸ್ತಿ ಜಪ್ತಿ

1,148 ಜನರಿಂದ 34.66 ಕೋಟಿ ರೂ. ಸಂಗ್ರಹಿಸಿ ಇದರಲ್ಲಿ 29.17 ಕೋಟಿ ರೂ. ಮರಳಿಸದೆ ವಂಚನೆ ಮಾಡಿರುವ ಕುರಿತು ಅಜ್ಮೇರಾ ಗ್ರೂಪ್‌ ವಿರುದ್ಧ 2019ರ ಜನವರಿಯಲ್ಲಿ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Vijaya Karnataka 23 Dec 2020, 3:53 pm
ಬೆಂಗಳೂರು: ಹೂಡಿಕೆ ಮೇಲೆ ತಿಂಗಳಿಗೆ ಶೇ.20ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ 1,148 ಜನರಿಂದ 29.17 ಕೋಟಿ ರೂ. ವಂಚಿಸಿದ್ದ ಅಜ್ಮೇರಾ ಗ್ರೂಪ್‌ಗೆ ಸೇರಿದ 8.41 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
Vijaya Karnataka Web scam-agencies
ಸಾಂದರ್ಭಿಕ ಚಿತ್ರ


ಅಜ್ಮೇರಾ ಗ್ರೂಪ್‌ ಮತ್ತು ಅದರ ಪಾಲುದಾರರಾದ ತಬ್ರೇಜ್‌ ಪಾಷ, ಅಬ್ದುಲ್‌ ದಸ್ತಗೀರ್‌, ತಬ್ರೇಜ್‌ ಉಲ್ಲಾ ಶರೀಫ್‌, ಸೈಯದ್‌ ಮುದಾಸೀರ್‌, ಸೈಯದ್‌ ಮುತಹೀರ್‌ ಮತ್ತು ಫೈರೋಜ್‌ ಖಾನ್‌ ಮತ್ತು ಇತರರಿಗೆ ಸೇರಿದ ಒಟ್ಟು 13 ಬ್ಯಾಂಕ್‌ ಖಾತೆಗಳು, ಒಂದು ಡಿಮ್ಯಾಟ್‌ ಖಾತೆ, ಕೃಷಿ ಮತ್ತು ಫ್ಟ್ಯಾಟ್‌ ರೂಪದಲ್ಲಿದ್ದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ. ತಿಳಿಸಿದೆ.

1,148 ಜನರಿಂದ 34.66 ಕೋಟಿ ರೂ. ಸಂಗ್ರಹಿಸಿ 29.17 ಕೋಟಿ ರೂ. ಮರಳಿಸದೆ ವಂಚನೆ ಮಾಡಿರುವ ಕುರಿತು ಅಜ್ಮೇರಾ ಗ್ರೂಪ್‌ ವಿರುದ್ಧ 2019ರ ಜನವರಿಯಲ್ಲಿ ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಕೇಸ್‌ ಆಧರಿಸಿ ಪಿಎಂಎಲ್‌ಎ ಕಾಯಿದೆಯಡಿ ಕೇಸ್‌ ದಾಖಲಿಸಿಕೊಂಡು ಇ.ಡಿ. ಪ್ರಕರಣ ಕೈಗೆತ್ತಿಕೊಂಡಿತ್ತು.


ತನಿಖೆ ವೇಳೆ ತಿಂಗಳಿಗೆ ಶೇ.20ರಷ್ಟು ಬಡ್ಡಿ ನೀಡುವುದಾಗಿ ಅಜ್ಮೇರಾ ಗ್ರೂಪ್‌ ಒಟ್ಟು ಹತ್ತಾರಯ ಕೋಟಿ ರೂ.ಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿತ್ತು. ಆದರೆ, ನ್ಯಾಯಯುತವಾದ ಯಾವುದೇ ಮಾರ್ಗದಲ್ಲಿ ತಿಂಗಳಿಗೆ ಶೇ.20ರಷ್ಟು ಬಡ್ಡಿ ಮರಳಿಸಲು ಸಾಧ್ಯವಿರಲಿಲ್ಲ ಎಂದು ಇ.ಡಿ. ತಿಳಿಸಿದೆ.

ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ 29.17 ಕೋಟಿ ರೂ. ಮರಳಿಸದೆ ವಂಚಿಸಲಾಗಿದೆ. ಜನರ ಹಣವನ್ನು ಅಜ್ಮೇರಾ ಗ್ರೂಪ್‌ಗೆ ಸಂಬಂಧಪಡದ ವೈಯಕ್ತಿಕ ಖಾತೆಗಳಿಗೆ ಅಕ್ರಮವಾಗಿ ಜಮಾ ಮಾಡಲಾಗಿತ್ತು. ಅಲ್ಲದೆ, ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಮೇಲೆ ಹೂಡಿಕೆ ಮಾಡಲಾಗಿತ್ತು ಎಂದು ಇ.ಡಿ. ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ