ಆ್ಯಪ್ನಗರ

ಇ.ಡಿಯ ಬಲಾಬಲ ಎಷ್ಟು?

ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಬಂಧಿಸಿದೆ ಈ ಹೈ ಪ್ರೊಫೈಲ್‌ ಕೇಸ್‌ ಭಾರಿ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ, ಇ...

THE ECONOMIC TIMES 5 Sep 2019, 5:00 am
ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ. ಈ ಹೈ ಪ್ರೊಫೈಲ್‌ ಕೇಸ್‌ ಭಾರಿ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ, ಇ.ಡಿಯ ಅಧಿಕಾರ ಮತ್ತು ಬಲ-ದೌರ್ಬಲ್ಯಗಳೇನು ? ಇಲ್ಲಿದೆ ವಿವರ.
Vijaya Karnataka Web ed strength and powers
ಇ.ಡಿಯ ಬಲಾಬಲ ಎಷ್ಟು?


ಏನಿದು ಇ.ಡಿ?
ಭಾರತದಲ್ಲಿ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳುವ, ಹೋರಾಡುವ ಪ್ರಬಲ ತನಿಖಾ ಸಂಸ್ಥೆಯೇ ಜಾರಿ ನಿರ್ದೇಶನಾಲಯ. ಕಂದಾಯ, ಹಣಕಾಸು ಇಲಾಖೆಯ ವ್ಯಾಪ್ತಿಯಲ್ಲಿದೆ. 1956ರಲ್ಲಿ ಸ್ಥಾಪನೆಯಾಗಿರುವ ಇ.ಡಿ ಇತ್ತೀಚಿನ ವರ್ಷಗಳಲ್ಲಿ ನಾನಾ ಪಕ್ಷಗಳ ಘಟಾನುಘಟಿ ರಾಜಕಾರಣಿಗಳನ್ನು ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿ ಅರೆಸ್ಟ್‌ ಮಾಡಿದ್ದು ಸುದ್ದಿಯಲ್ಲಿದೆ. ಕಪ್ಪು ಹಣದ ವಿರುದ್ಧದ ಸರಕಾರದ ಹೋರಾಟದಲ್ಲಿ ಇ.ಡಿಗೆ ಮಹತ್ವದ ಜವಾಬ್ದಾರಿ ಇದೆ. ಕೇವಲ ರಾಜಕಾರಣಿಗಳು ಮಾತ್ರವಲ್ಲದೆ, ಅನೇಕ ಉದ್ಯಮಿಗಳೂ, ಇತರರೂ ಇ.ಡಿ ತನಿಖೆ ಎದುರಿಸುತ್ತಿದ್ದಾರೆ. ದಿಲ್ಲಿಯಲ್ಲಿ ಇ.ಡಿ ಪ್ರಧಾನ ಕಚೇರಿ ಹೊಂದಿದೆ. ಸಂಜಯ್‌ ಕುಮಾರ್‌ ಮಿಶ್ರಾ ಈಗಿನ ಮುಖ್ಯಸ್ಥ. ಮುಂಬಯಿ, ಚೆನ್ನೈ, ಚಂಡೀಗಢ, ಕೋಲ್ಕೊತಾ, ದಿಲ್ಲಿಯಲ್ಲಿ ಪ್ರಾದೇಶಿಕ ಕಚೇರಿಗಳು ಇವೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ವಲಯಾವಾರು ಕಚೇರಿಗಳಿವೆ.

ಉದ್ದೇಶವೇನು?
- ಮುಖ್ಯವಾಗಿ ಎರಡು ಕಾಯಿದೆಗಳ ಅನುಷ್ಠಾನ ಇ.ಡಿಯ ಉದ್ದೇಶ. ಅವೆಂದರೆ ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ 1999 (ಎಫ್‌ಇಎಂಎ) ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ)

ಇ.ಡಿಯ ಬಲವೇನು?
-ಕಪ್ಪು ಹಣದ ಚಲಾವಣೆ ತಡೆಯುವ ನಿಟ್ಟಿನಲ್ಲಿ ವಿಶೇಷ ಅಧಿಕಾರದ ಬಲ.
-ಆದಾಯ ತೆರಿಗೆ ಇಲಾಖೆಗೆ ತೆರಿಗೆ ವಂಚನೆ ಇತ್ಯಾದಿ ಕೇಸ್‌ಗಳಲ್ಲಿ ಆರೋಪಿಯನ್ನು ಬಂಧಿಸುವ ಅಧಿಕಾರ ಇಲ್ಲ. ಆದರೆ ಇ.ಡಿಗೆ ಎರಡು ಪ್ರಮುಖ ಕಾಯಿದೆಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧಿಸುವ ಅಧಿಕಾರ ಇದೆ.
- ತೆರಿಗೆ ಇಲಾಖೆಯಲ್ಲಿ ತೆರಿಗೆ ಅಧಿಕಾರಿಗಳು ಮಾತ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದರೆ, ಇ.ಡಿಯಲ್ಲಿ ಕಂದಾಯ, ಹಣಕಾಸು ಇಲಾಖೆಯ ಅಧಿಕಾರಿಗಳೂ ಇರುತ್ತಾರೆ.
-ಇ.ಡಿಯ ಸಹಾಯಕ ನಿರ್ದೇಶಕರಿಗಿಂತ ಮೇಲಿನ ಅಧಿಕಾರಿಗಳಿಗೆ ಉನ್ನತ ಮಟ್ಟದ ಅಧಿಕಾರ ವ್ಯಾಪ್ತಿಯೂ ಇದೆ.
- ಆರೋಪಿಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅದಿಕಾರ ಇದೆ.
-ಇ.ಡಿ ತನ್ನದೇ ವಿಶೇಷ ನ್ಯಾಯಾಲಯವನ್ನು ಹೊಂದಿದೆ.

ದೌರ್ಬಲ್ಯವೇನು?
-ಸಿಬ್ಬಂದಿ, ಮೂಲ ಸೌಕರ್ಯ ಕೊರತೆಯ ಪರಿಣಾಮ ಹೈ ಪ್ರೊಫೈಲ್‌ ಕೇಸ್‌ಗಳಿದ್ದರೂ, ತನಿಖೆ, ವಿಚಾರಣೆಗಳಲ್ಲಿ ಭಾರಿ ವಿಳಂಬ.
- ಕಳೆದ 2016-17ರಿಂದ 2017-18ರ ಅವಧಿಯಲ್ಲಿ 570 ಕೇಸ್‌ಗಳನ್ನು ಜಾರಿ ನಿರ್ದೇಶನಾಲಯ ಪಿಎಂಎಲ್‌ಎ ಅಡಿಯಲ್ಲಿ ದಾಖಲಿಸಿಕೊಂಡಿದೆ. ಹೀಗಿದ್ದರೂ, ಬೆರಳೆಣಿಕೆಯ ಪ್ರಕರಣಗಳಲ್ಲಿ ಮಾತ್ರ ತೀರ್ಪು ಪ್ರಕಟವಾಗಿದೆ.
- ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

ಕರ್ನಾಟಕದಲ್ಲಿ ಇ.ಡಿ ಕೇಸ್‌
-ಐಎಂಎ ಹಗರಣದಲ್ಲಿ 209 ಕೋಟಿ ರೂ. ಆಸ್ತಿ ಜಪ್ತಿ
-ಡಿಕೆಶಿ ಪ್ರಕರಣ
- ಮಾಜಿ ಸಚಿವ ಜನಾರ್ಧನ ರೆಡ್ಡಿ ವಿರುದ್ಧದ ತನಿಖೆ
- ಪಿಡಬ್ಲ್ಯುಡಿ ಎಂಜಿನಿಯರ್‌ ಎಲ್‌ ರಘು ವಿರುದ್ಧ ಕೇಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ